ಬೆಂಗಳೂರು: ನವೆಂಬರ್14 (November 14th Childrens Day) ಬಹಳ ಮಹತ್ವ ದಿನ. ನೆಹರೂ ಅವರ ಜನ್ಮ ದಿನ (Neharu Birthday). ಇಡೀ ರಾಷ್ಟ್ರದಲ್ಲಿ ನೆಹರೂ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸ್ತಾರೆ. ನೆಹರೂ ಅವರಿಗೆ ಮಕ್ಕಳ ಕಂಡ್ರೆ ಅಪಾರ ಪ್ರೀತಿ, ನಂಬಿಕೆ ಕೂಡ. ದೇಶದ ಭವಿಷ್ಯ ರೂಪಿಸಬೇಕಂದ್ರೆ, ಮಕ್ಕಳಿಂದ ಮಾತ್ರ ಸಾಧ್ಯ ಅಂತ ನಂಬಿಕೆ ಇಟ್ಟಿದ್ದರು. ಅವರ ಹುಟ್ಟಿದ ದಿನವನ್ನ ಮಕ್ಕಳ ದಿನವನ್ನಾಗಿ ಆಚರಿಸಲಾಗ್ತಿದೆ. ನಾಡಿನ ಮಕ್ಕಳ ಭವಿಷ್ಯ ಉಜ್ವಲ ಆಗಲಿ ಅಂತ ಬಯಸ್ತೀನಿ. ಇಂದು ಪಕ್ಷದ ಸದಸ್ಯತ್ವ ಅಭಿಯಾನ ಕೂಡ (Congress Membership Campaign) ಹಮ್ಮಿಕೊಳ್ಳಲಾಗಿದೆ. ನೆಹರೂರವರು ಮಹಾತ್ಮ ಗಾಂಧಿ (Mahatma Gandhi) ಜೊತೆಗೂಡಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರು. ನಿರಂತರವಾಗಿ ಗಾಂಧಿ, ಪಟೇಲ್, ಮೌಲಾನಾ ಆಜಾದ್ ಜೊತೆ ಹೋರಾಟ ಮಾಡಿದ್ರು. ಹೋರಾಟದಲ್ಲಿ ಭಾಗಿಯಾಗಿದ್ರು. ಒಂಭತ್ತು ವರ್ಷಗಳ ಕಾಲ ಜೈಲಿನಲ್ಲಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬರೋವರೆಗೂ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಹೋರಾಡಿದ್ರು. ಭಾರತ ದೇಶದಲ್ಲಿ565 ಜನ ರಾಜರು, ಪಾಳೇಗಾರರು ಆಳ್ವಿಕೆ ನಡೆಸಿದ್ರು. ಅವರೆಲ್ಲರ ಮನಸು ಗೆಲ್ಲಲು ಮನವಿ ಮಾಡಿದ್ರು. ಪ್ರಜಾಪ್ರಭುತ್ವ ಹೆಚ್ಚು ದಿನ ಉಳಿಯೋದಿಲ್ಲ ಅಂದುಕೊಂಡಿದ್ರು. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ರೆ, ಬುನಾದಿ ಸಿಕ್ಕಿದ್ರೆ ಅದಕ್ಕೆ ನೆಹರೂ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರು ಹೇಳಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜರನ್ನೆಲ್ಲಾ ಒಟ್ಟುಗೂಡಿಸೋ ಕೆಲಸ ಮಾಡಿದರು. ಯಾವುದಾದರೂ ರಾಷ್ಟ್ರ ಏಕತೆಯನ್ನು ಉಳಿಸಿ, ಬೆಳೆಸಿದ್ದರೆ ಅದಕ್ಕೆ ನೆಹರು, ವಲ್ಲಭಭಾಯಿ ಪಟೇಲರು ಕಾರಣ. ನೆಹರೂರವರು ದೇಶದ ಪ್ರಗತಿಗೆ, ಆರ್ಥಿಕ, ಸಾಮಾಜಿಕ, ಕೈಗಾರಿಕಾ ಬೆಳವಣಿಗೆಗೆ ಅಡಿಪಾಯ ಹಾಕಿದವರು. ನೆಹರೂ ಪ್ರಧಾನಿಯಾಗಿ 17 ವರ್ಷಗಳ ಕಾಲ ಇದ್ರು. ದೇಶವನ್ನು ಕಟ್ಟಲು ಜೀವವನ್ನು ಮುಡಿಪಾಗಿಟ್ಟಿದ್ದರು ಎಂದರು