Breaking News

ವಿದ್ಯುತ್ ರಿಪೇರಿ ವೇಳೆ ಶಾಕ್ ತಗುಲಿ ಲೈನ್​ಮ್ಯಾನ್​ ಸಾವು;

Spread the love

ಬಾಗಲಕೋಟೆ: ವಿದ್ಯುತ್​​ ಶಾಕ್​​ ತಗುಲಿ ವಿದ್ಯುತ್​ ಕಂಬದಲ್ಲೇ ಹೆಸ್ಕಾಂ ಗುತ್ತಿಗೆದಾರನ ಅಡಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವನ್ನಪ್ಪಿದ ಘಟನೆ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಬಳಿ ನಡೆದಿದೆ.

ಬದಾಮಿ ತಾಲೂಕಿನ ಬಿ.ಎನ್ ಜಾಲಿಹಾಳ ಗ್ರಾಮದ ನಿವಾಸಿ ಹನುಮಂತ ಮುಕಾಶಿ (33) ಮೃತ ಕಾರ್ಮಿಕ. ಹೆಸ್ಕಾಂ ಗುತ್ತಿಗೆದಾರನ ಅಡಿ ಈತ ಕೆಲಸ ಮಾಡುತ್ತಿದ್ದ. ಇಂದು ಟ್ರಾನ್ಸ್​​​ಫರ್ಮ್​​ ಕೂರಿಸಲು ಮುಂದಾಗಿದ್ದ ವೇಳೆ ಅವಘಡ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಕೆಲಸ ಶುರು ಮಾಡಿದ್ದರು ಎನ್ನಲಾಗಿದೆ. ಕೆಲಸ ಆರಂಭ ಮಾಡಲು ಲೈನ್ ಕ್ಲಿಯರ್ ಇಲ್ಲದೆ ನೌಕರನನ್ನು ಕಂಬ ಏರಿಸಿ ಗುತ್ತಿಗೆದಾರ ಯಡವಟ್ಟು ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ