Breaking News

ಮಾಂಜ್ರಾ ನದಿ: 60 ಅಡಿ ಮೇಲಿಂದ ಧುಮುಕಿ ಯುವಕನ ಹುಚ್ಚಾಟ

Spread the love

ಬೀದರ್​: ಮಹಾರಾಷ್ಟ್ರದಿಂದ ಭಾರೀ ನೀರು ಬಿಟ್ಟ ಕಾರಣ ಮಾಂಜ್ರಾ ನದಿ ಮೈದುಂಬಿ ಹರಿಯುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಉಕ್ಕಿ ಹರಿಯುತ್ತಿರುವ ಈ ನದಿಯಲ್ಲಿ ಯುವಕರು ಜೀವವನ್ನು ಲೆಕ್ಕಿಸದೇ ದುಸ್ಸಾಹಸಕ್ಕೆ ಮುಂದಾಗುತ್ತಿದ್ದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಭರದಲ್ಲಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆ ಮತ್ತು ನೆರೆಯ ರಾಜ್ಯದಿಂದ ನೀರಿ ಬಿಟ್ಟ ಕಾರಣ ಮಾಂಜ್ರಾ ನದಿ ತುಂಬಿ ತುಳುಕುತ್ತಿದೆ. ಕಳೆದ ತಿಂಗಳು ಈ ನದಿಯಲ್ಲಿ ದುಸ್ಸಾಹಸಕ್ಕೆ ಮುಂದಾಗಿದ್ದ ವ್ಯಕ್ತಿಯೋರ್ವ ನದಿಪಾಲಾಗಿದ್ದ. ಆ ಘಟನೆ ಮಾಸುವ ಮುನ್ನವೇ ಮತ್ತೆ ಯುವಕರು ನದಿ ಪಾತ್ರಕ್ಕೆ ದಾಂಗುಡಿ ಇಟ್ಟು ಪ್ರಾಣ ಭಯ ಮರೆತು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

ನದಿಯಲ್ಲಿ ಯುವಕನೋರ್ವ ಹುಚ್ಚಾಟ ನಡೆಸಿದ್ದು ಸುಮಾರು 50-60 ಅಡಿ ಮೇಲಿಂದ ನದಿಗೆ ಹಾರಿ ಈಜುವ ಸಾಹಸಕ್ಕೆ ಮುಂದಾಗಿದ್ದಾನೆ. ಕೌಠಾ ಸೇತುವೆ ಮೇಲಿಂದ ನದಿಗೆ ಈಜಾಡಲು ಯುವಕ ಜಿಗಿಯುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.


Spread the love

About Laxminews 24x7

Check Also

ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!!

Spread the love ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!! ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖಾನಾಪೂರ ತಾಲೂಕಿನ ಅನಮೋಡ್ ಘಾಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ