Breaking News

ಅಗಲಿದ ಪತ್ರಕರ್ತರುಗಳಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ ಸುದ್ದಿಮನೆಯ ಒತ್ತಡದಿಂದ ಕುಗ್ಗುತ್ತಿರುವಪತ್ರಕರ್ತರ ಆಯಸ್ಸು

Spread the love

ಬೆಂಗಳೂರು: ಸುದ್ದಿಮನೆಯ ಒತ್ತಡಗಳಿಗೆ ಪತ್ರಕರ್ತರ ಆಯಸ್ಸು ಕುಗ್ಗುತ್ತಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು(ಕೆಯುಡಬ್ಲೂಜೆ) ಅಗಲಿದ ಪತ್ರಕರ್ತರಿಗೆ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಹಲವರು, ಪತ್ರಕರ್ತರ ಬದುಕು ಒತ್ತಡದ ಬದುಕು ಆಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸರಿಯಾದ ಆಹಾರ ಪದ್ದತಿ ಪರಿಪಾಲನೆ ಮಾಡದ ಕಾರಣಕ್ಕಾಗಿ ಆರೋಗ್ಯದ ಮೇಲೂ ಅಡ್ಡ ಪರಿಣಾಮಗಳಾಗುತ್ತಿವೆ. ಧೀರ್ಘ ಕಾಲ ಬಾಳಬೇಕಾಗಿರುವ ಪತ್ರಕರ್ತರ ಆಯಸ್ಸು ಅಲ್ಪಯುಷ್ಯಕ್ಕೆ ಇಳಿಯುತ್ತಿರುವುದು ನೋವಿನ ಸಂಗತಿ ಎಂದು ಸಭೆ ವಿಷಾದ ವ್ಯಕ್ತಪಡಿಸಿತು.
ಇತ್ತೀಚೆಗೆ ಹಿರಿಯರಷ್ಟೆ ಅಲ್ಲ, ಕಿರಿಯ ಪತ್ರಕರ್ತರು ಸೇರಿದಂತೆ ಸರಣಿ ಸಾವು ಸಂಭವಿಸಿವೆ. ಆದುದರಿಂದ ಪತ್ರಕರ್ತರು ತಮ್ಮ ವೃತ್ತಿ ಒತ್ತಡ ನಿಭಾಯಿಸಿಕೊಳ್ಳಲು ಬೇರೆ ಮಾರ್ಗಗಳನ್ನು ಅನುಸರಿಸಬೇಕು. ಆಹಾರ ಪದ್ದತಿಯನ್ನು ಸರಿಪಡಿಸಿಕೊಳ್ಳಬೇಕು ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಇತ್ತೀಚೆಗೆ ನಮ್ಮನ್ನು ಅಗಲಿದ ಪತ್ರಕರ್ತರಾದ ಬೀದರನ ನಾಗಶೆಟ್ಟಿ ಧರಂಪುರ, ಸಂಜೆವಾಣಿ ದೊಡ್ಡಬೊಮ್ಮಯ್ಯ, ಸಂಯುಕ್ತ ಕರ್ನಾಟಕದ ಭೀಮಸೇನ ಪದಕಿ, ಬೆಳಗಾವಿಯ ಎಂ.ಎನ್.ಪಾಟೀಲ, ಸಕಲೇಶಪುರದ ಎಂ.ಎನ್.ಶಿವಕುಮಾರ್, ಪ್ರಜಾವಾಣಿಯ ಬಾವು ಪತ್ತಾರ, ಕಲಬುರ್ಗಿ ಪ್ರಭುಲಿಂಗ ನೀಲೂರೆ, ರಾಯಚೂರು ನಹೀಮ್ ಅಶ್ರ್, ಮೈಸೂರಿನ ಸೂರಜ್, ವಿಜಯಪುರದ ಧಾವಲ್ ೋರ್ಪಡೆ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಕೋರಲಾಯಿತು.
ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಪತ್ರಕರ್ತರ ವೃತ್ತಿ ಬದುಕು ಕಷ್ಟದ್ದು ಎನ್ನುವುದು ಎಲ್ಲರಿಗೂ ಗೊತ್ತು. ಕಡಿಮೆ ವಯಸ್ಸಿನಲ್ಲಿಯೇ ಬದುಕು ಅಂತ್ಯವಾಗುವುದು ನೋವಿನ ಸಂಗತಿ. ಇಂಥ ಸಂದರ್ಭದಲ್ಲಿ ನೊಂದ ಕುಟುಂಬಗಳಿಗೆ ಎಲ್ಲರೂ ಆಸರೆಯಾಗಿ ನಿಲ್ಲಬೇಕು ಎಂದರು. ತಮ್ಮ ನಿವೃತ್ತಿ ವೇತನದ ತಿಂಗಳ ಹಣವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಕಳುಹಿಸಿಕೊಡುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ರಾಜ್ಯ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ ಸುದ್ದಿಮನೆಯಲ್ಲಿ ನಮ್ಮ ಒಡನಾಡಿಗಳಾಗಿದ್ದ ಪತ್ರಕರ್ತರಿಗೆ ಶ್ರದ್ದಾಂಜಲಿ ಸಲ್ಲಿಸುವುದು ನೋವಿನ ಸಂಗತಿಯಾದರೂ, ನಮ್ಮ ಆದ್ಯ ಕರ್ತವ್ಯವಾಗಿದೆ. ಆ ಮೂಲಕ ಅವರ ಒಡನಾಡ ಮತ್ತು ಪತ್ರಕರ್ತ ವೃತ್ತಿ ಸೇವೆಯನ್ನು ಸ್ಮರಿಸುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾಜಿ ಅಧ್ಯಕ್ಷ ವಿ.ವೆಂಕಟೇಶ್ ಮಾತನಾಡಿ, ನೊಂದ ಕುಟುಂಬಗಳಿಗೆ ನೆರವಾಗುವ ಕೆಲಸವನ್ನು ಶಿವಾನಂದ ತಗಡೂರು ನೇತೃತ್ವದ ತಂಡ ಕ್ರೀಯಾಶೀಲವಾಗಿ ಮಾಡುತ್ತಿದೆ ಎಂದರು.  ರಾಜ್ಯ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ ಮತ್ತು ಕೋಲಾರವಾಣಿ ಪತ್ರಿಕೆ ಸಂಪಾದಕ ಮುರುಳಿಧರ್ ಅವರು ಹೊನ್ನುಡಿ ಪತ್ರಿಕೆಯ ಎಂ.ಜಿ.ಪ್ರಭಾಕರ್ ಅವರ ಬಗ್ಗೆ ಮಾತನಾಡಿ ಅವರ ಸೇವೆ ಮತ್ತು ನಿಷ್ಟೂರ ವೃತ್ತಿ ಬದುಕನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತರಾದ ಭಾಷ್ಯಂಗೂಳ್ಯ, ಶಿವರಾಜ, ಸ್ನೇಹಜೀವಿಯಾಗಿದ್ದ ದೊಡ್ಡಬೊಮ್ಮಯ್ಯ ಅವರ ಸೇವಾ ಹಿರಿತನ ಸ್ಮರಿಸಿದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶನಕ ಧ್ಯಾನ್ ಪೂಣಚ್ಚ, ಹಿರಿಯ ಪತ್ರಕರ್ತೆ ಶಶಿಕಲಾ ಮತ್ತಿತರರು ಮಾತನಾಡಿದರು.
ನುಡಿನಮನ ಕಾರ್ಯಕ್ರಮದಲ್ಲಿ ಅಗಲಿದ ಪತ್ರಕರ್ತರ ಕೆಲ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

Spread the love

About Laxminews 24x7

Check Also

ಬ್ಯಾಲೆಟ್ ಪೇಪರ್​​ನಲ್ಲೇ ಗ್ರಾಮ ಪಂಚಾಯ್ತಿ ಎಲೆಕ್ಷನ್: ಸಚಿವ ಸಂಪುಟ ಮಹತ್ವದ ನಿರ್ಧಾರ

Spread the loveಬೆಂಗಳೂರು:ಕರ್ನಾಟಕದ ಬಹುತೇಕ ಗ್ರಾಮ ಪಂಚಾಯಿತಿಗಳ   ಅಧಿಕಾರಾವಧಿ ಇದೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯಲಿದೆ. ಹೀಗಾಗಿ ಚುನಾವಣೆ ನಡೆಯುವವರೆಗೂ ಸರ್ಕಾರ ಆಡಳಿತಾಧಿಕಾರಿಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ