Breaking News

ಮಾಜಿ ಸೈನಿಕರಿಂದ ಶಾಸಕ ಸತೀಶ್ ಜಾರಕಿಹೊಳಿಗೆ ಮನವಿ….

Spread the love

ಗೋಕಾಕ :

ಹುಕ್ಕೇರಿ: ಮೊದಗಾ ಗ್ರಾಮದ ಯುವಕರಿಗೆ ಸೈನಿಕ ತರಬೇತಿ ನೀಡಲು, ಗ್ರಂಥಾಲಯ ನಿರ್ಮಾಣಕ್ಕೆ ಸರ್ಕಾರಿಯ 20 ಗುಂಟೆ ಜಾಗ ನೀಡಬೇಕೆಂದು ಆಜಿ-ಮಾಜಿ ಸೈನಿಕ ಕಲ್ಯಾಣ ಸಂಘ ಪದಾಧಿಕಾರಿಗಳು ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಇಂದು ಮನವಿ ಸಲ್ಲಿಸಿದರು.

 

ಮೊದಗಾ ಗ್ರಾಮದಲ್ಲಿ ಅನೇಕ ನಿವೃತ್ತ ಸೈನಿಕರು ಇದ್ದಾರೆ.  58ಕ್ಕೂ ಹೆಚ್ಚು ಜನರು ದೇಶ ಸೇವೆಗಾಗಿ ಬೇರೆ ಬೇರೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಅನೇಕ ಯುಕವರು ದೇಶ ಸೇವೆ ಮಾಡಲು ಉತ್ಸೂಕರಾಗಿದ್ದಾರೆ. ಆದ ಕಾರಣ ಯುವಕರಿಗೆ ಸೈನಿಕ ಭರ್ತಿ ಪೂರ್ವದ ತರಬೇತಿ ನೀಡಬೇಕಾದ ಅವಶ್ಯಕತೆ ಇದೆ.

 

ಜತೆಗೆ ಚಿಕ್ಕ ಮಕ್ಕಳಿಗೆ ಪಾರ್ಕ್, ಗ್ರಂಥಾಲಯ ತೆರೆಯಲು ಜಾಗದ ಅವಶ್ಯಕತೆ ಇದೆ. ಆದ್ದರಿಂದ ಇಲ್ಲಿನ ಸರ್ವೆ ನಂ.197ದಲ್ಲಿ 81 ಎಕರೆ ಗಾವಠಾಣ ಜಮೀನಿನಲ್ಲಿ 20 ಗುಂಟೆ ಜಾಗ ನೀಡಬೇಕೆಂದು ಮಾಜಿ ಸೈನಿಕರು ಮನವಿಯಲ್ಲಿ ವಿನಂತಿಸಿಕೊಂಡರು.

 

ಈ ಸಂದರ್ಭದಲ್ಲಿ ಲಕ್ಷ್ಮಣ ಆರ್.ಎನ್,  ಅರ್ಜುನ ಗರಡಿ, ಅಶೋಕ ಪಾಟೀಲ,  ಎಸ್. ಎಸ್.ಪಾಟೀಲ, ಸುಭಾಷ್ ಪಾಟೀಲ್, ಬಾಗೋಜಿ ಪಾಟೀಲ, ಯಶವಂತ ಎಂ.ಬಿ. ಸೇರಿದಂತೆ ಇತರರು ಇದ್ದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ