ಹುಬ್ಬಳ್ಳಿ: ಅಯೋಧ್ಯೆಗೆ ಹೋಗಿದ್ದ ವೇಳೆ ನಗ-ನಗದು, ಕಾರು ಕಳವಾಗಿದೆ. ನಾನು ನಿಮಗೆ ದೂರದ ಸಂಬಂಧಿಯಾಗಬೇಕೆಂದು ಧಾರವಾಡದ ಗುತ್ತಿಗೆದಾರರನ್ನು ನಂಬಿಸಿದ ವಂಚಕ ರಮೇಶಕುಮಾರ, ವಾಪಸ್ ಕೊಡುವುದಾಗಿ 80 ಸಾವಿರ ರೂ. ಕೇಳಿದ್ದಾರೆ. ಈ ಮಾತು ನಂಬಿದ ಗುತ್ತಿಗೆದಾರ ನಿಂಗರಡ್ಡಿ ಟಿ., ರಮೇಶಕುಮಾರ ಖಾತೆಗೆ 2.29 ಲಕ್ಷ ರೂ. ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ.
ಕೆಇಬಿ ಇಂಜಿನಿಯರ್ ಎಂದು ಪರಿಚಯಿಸಿಕೊಂಡ ರಮೇಶಕುಮಾರ, ಅಯೋಧ್ಯೆಗೆ ಹೋಗಿದ್ದ ವೇಳೆ ಹಣ, ಕಾರು, ಬಂಗಾರ ಕಳವಾಗಿದೆ. ಕುಟುಂಬ ಸಮೇತ ಬೆಂಗಳೂರಿಗೆ ವಾಪಸ್ ಬರಲು ವಿಮಾನ ಟಿಕೆಟ್ ಬುಕ್ ಮಾಡಲು 80 ಸಾವಿರ ರೂ. ಬೇಕು ಎಂದಿದ್ದಾರೆ. ಅಲ್ಲದೆ, ಪಡೆದ ಹಣ ಹಿಂತಿರುಗಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಇದನ್ನು ನಂಬಿದ ನಿಂಗರಡ್ಡಿ, ರಮೇಶ ಕುಮಾರ ಹೇಳಿದ ಖಾತೆಗೆ 2,29,650 ರೂ. ವರ್ಗಾಯಿಸಿದ್ದಾರೆ. ನಂತರ ರಮೇಶಕುಮಾರ ಸಂವಹನ ಕಡೆದುಹೋಗಿದ್ದು, ಮೋಸ ಹೋಗಿದ್ದರ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Laxmi News 24×7