Breaking News

ಗಂಗಾ ರಾಮ್ ಲಕ್ಷ್ಮಣ ಕಾಂಬಳೆ ರೈತನ ಹೊಲಕ್ಕೆ ಶಾಟ್ ಸರ್ಕಿಟನಿಂದ ಬೆಂಕಿ

Spread the love

ವರ್ಷಗಟ್ಟಲೆ ಬಿಸಿಲು ಚಳಿ ಮಳೆಯೆನ್ನದೆ ಕಷ್ಟಪಟ್ಟು ದುಡಿಯುವ ರೈತರ ಗೋಳು ಕೇಳುವವರಾರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಶಿರಗಾಂವ ಎಂಬ ಗ್ರಾಮದಲ್ಲಿ ಗಂಗಾ ರಾಮ್ ಲಕ್ಷ್ಮಣ್ ಕಾಂಬಳೆ ಎಂಬ ಬಡ ರೈತನ ಹೊಲದಲ್ಲಿ ನಿನ್ನೆ ಮಧ್ಯಾಹ್ನ ಏಕಾಏಕಿ ವಿದ್ಯುತ್ ತಂತಿಗಳ ನಡುವೆ ಘರ್ಷಣೆ ಉಂಟಾಗಿ ಕಬ್ಬಿನ ಹೊಲಕ್ಕೆ ಬೆಂಕಿ ಹತ್ತಿ ಸುಮಾರು ಎರಡೂವರೆ ಎಕರೆ ಕಬ್ಬು ಸುಟ್ಟು ಕರಕಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ.ಆದರೆ ಅಷ್ಟರೊಳಗೆ ಇಡೀ ಎರಡೂವರೆ ಎಕರೆ ಕಬ್ಬು ಸುಟ್ಟು ಕರಕಲಾಗಿತ್ತು . ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂದ್ಹಾಗೆ ರೈತ ವರ್ಷಪೂರ್ತಿ ಕಷ್ಟಪಟ್ಟು ದುಡಿದ ಮೇಲು ಈ ರೀತಿ ಘಟನೆ ನಡೆದರೆ ಹೊಟ್ಟೆಯಲ್ಲಿನ ಕರುಳು ಕಿತ್ತುಬಂದಂತಾಗುತ್ತದೆ.ಗಂಗಾ ರಾಮ್ ಲಕ್ಷ್ಮಣ್ ಕಾಂಬಳೆ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಮಧ್ಯಾಹ್ನ ಊಟಕ್ಕೆ ಹೋದ ಸಂದರ್ಭದಲ್ಲಿ ಶಾಟ್ ಸರ್ಕಿಟ್ ನಿಂದ ಎರಡುವರೆ ಕಬ್ಬಿನ ಎಕರೆಗೆ ಬೆಂಕಿ ತಗಲಿದ್ದು, ಸಂಪೂರ್ಣ ಕಬ್ಬಿನ ಬೇಳೆ ಹಾನಿಯಾಗಿದೆ. ಇದಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಬಡ ರೈತ ಕೇಳಿ ಕೊಂಡರು.ಈಗಲಾದರೂ ಆ ಬಡ ರೈತನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸೂಕ್ತ ಪರಿಹಾರ ಒದಗಿಸಬೇಕೆಂದು ಎಲ್ಲರ ಆಶಯವಾಗಿದೆ.


Spread the love

About Laxminews 24x7

Check Also

11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ” ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಸಹಕಾರಿ: ಸಂಸದ ಜಗದೀಶ್ ಶೆಟ್ಟರ

Spread the love“ಬೆಳಗಾವಿ, ಜೂ.21(ಕರ್ನಾಟಕ ವಾರ್ತೆ): ಯೋಗ ಅಭ್ಯಾಸ ಸಾವಿರಾರು ವರ್ಷಗಳಿಂದ ಪಾಲಿಸುತ್ತಿರುವ ಆರೋಗ್ಯ ಸುಧಾರಣಾ ಕ್ರಮವಾಗಿದೆ. ಯೋಗದಿಂದ ಶಾರೀರಿಕ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ