Breaking News

ಸಚಿವ ಡಿ.ವಿ. ಸದಾ​ನಂದ​ಗೌ​ಡರ ಉಸ್ತು​ವಾ​ರಿಯ ರಸ​ಗೊಬ್ಬರ ಇಲಾಖೆಯು

Spread the love

ನವ​ದೆ​ಹ​ಲಿ : ಸಚಿವ ಡಿ.ವಿ. ಸದಾ​ನಂದ​ಗೌ​ಡರ ಉಸ್ತು​ವಾ​ರಿಯ ರಸ​ಗೊಬ್ಬರ ಇಲಾಖೆಯು ಕೇಂದ್ರ ಸರ್ಕಾ​ರದ ಒಟ್ಟಾ​ರೆ 65 ಇಲಾ​ಖೆ​ಗ​ಳ ರಾರ‍ಯಂಕಿಂಗ್‌​ನಲ್ಲಿ 3ನೇ ಸ್ಥಾನ ಪಡೆ​ದಿ​ದೆ. ಇದೇ ವೇಳೆ, ವಿವಿಧ 16 ಆರ್ಥಿಕ ಸಚಿ​ವಾ​ಲ​ಯ​ಗ​ಳಲ್ಲಿ 2ನೇ ಸ್ಥಾನ ಗಳಿ​ಸಿ​ದೆ.

ನೀತಿ ಆಯೋಗದ ಅಭಿ​ವೃದ್ಧಿ ಮೇಲ್ವಿ​ಚಾ​ರಣೆ ಹಾಗೂ ಮೌಲ್ಯ​ಮಾ​ಪನ ಕಚೇರಿ (ಡಿ​ಇ​ಎಂಒ​), ಕೇಂದ್ರ ಸರ್ಕಾ​ರದ ಯೋಜ​ನೆ​ಗಳನ್ನು ಇಲಾ​ಖೆ​ಗಳು ಹೇಗೆ ಅನು​ಷ್ಠಾನ ಮಾಡುತ್ತಿವೆ ಎಂಬ ಪ್ರಶ್ನಾ​ವಳಿ ಆಧ​ರಿತ ಆನ್‌​ಲೈ​ನ್‌ ಸಮೀಕ್ಷೆ ನಡೆ​ಸಿತ್ತು. ಇದರ ಫಲಿ​ತಾಂಶ ಆಧ​ರಿಸಿ ಶ್ರೇಯಾಂಕ ಪ್ರಕ​ಟಿ​ಸಿದೆ. ಶ್ರೇಯಾಂಕವು ಸದಾ​ನಂದಗೌಡರ ಇಲಾಖೆ ಉತ್ತಮ ಕಾರ್ಯ​ನಿ​ರ್ವ​ಹಣೆ ತೋರು​ತ್ತಿದೆ ಎಂಬು​ದನ್ನು ಸಾಬೀ​ತು​ಪ​ಡಿ​ಸಿ​ದೆ.

ಈ ಬಗ್ಗೆ ಖುಷಿ ವ್ಯಕ್ತ​ಪ​ಡಿ​ಸಿ​ರುವ ರಸ​ಗೊ​ಬ್ಬರ ಹಾಗೂ ರಾಸಾ​ಯ​ನಿಕ ಸಚಿ​ವ ಸದಾ​ನಂದ​ಗೌ​ಡ, ‘ನೀತಿ ಆಯೋ​ಗವು ವಿವಿಧ ಸಚಿ​ವಾ​ಲ​ಯ​ಗಳ ಕಾರ್ಯ​ವೈ​ಖರಿ ಪರಾ​ಮ​ರ್ಶಿಸಿ ರಿಪೋರ್ಟ್‌ ಕಾರ್ಡ್‌ ಬಿಡು​ಗಡೆ ಮಾಡು​ತ್ತಿ​ರು​ವುದು ಸಂತ​ಸದ ವಿಚಾ​ರ.

ಇದ​ರಿಂದ ಯೋಜ​ನೆ​ಗಳ ಪರಿ​ಣಾ​ಮ​ಕಾರಿ ಜಾರಿ ಹಾಗೂ ಗುರಿ ಮುಟ್ಟಲು ಸಹಾ​ಯ​ವಾ​ಗು​ತ್ತದೆ’ ಎಂದಿ​ದ್ದಾ​ರೆ.


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ