Breaking News

Uncategorized

ಚಿತ್ರಮಂದಿರದೊಳಗೆ ಹಾಗೂ ಹೊರಗೆ ಅಭಿಮಾನಿಗಳಸಂಭ್ರಮ, ಶಿಳ್ಳೆ, ಕೇಕೆ, ಜೈಕಾರ ಕೇಳದೇ ದೊಡ್ಡ ಗ್ಯಾಪ್‌ ಆಗಿತ್ತು

ಚಿತ್ರಮಂದಿರದೊಳಗೆ ಹಾಗೂ ಹೊರಗೆ ಅಭಿಮಾನಿಗಳಸಂಭ್ರಮ, ಶಿಳ್ಳೆ, ಕೇಕೆ, ಜೈಕಾರ ಕೇಳದೇ ದೊಡ್ಡ ಗ್ಯಾಪ್‌ ಆಗಿತ್ತು. ಆದರೆ, ಈಗ ನೀರಸವಾಗಿದ್ದ ಚಿತ್ರಮಂದಿರಗಳು ಮತ್ತೆ ಆಯಕ್ಟೀವ್‌ ಆಗಿವೆ. ಶುಕ್ರವಾರ ಬಿಡುಗಡೆಯಾಗಿರುವ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ ಅಭಿಮಾನಿಗಳ ಸಂಭ್ರಮ ಮರುಕಳಿಸಲು ಸಾಕ್ಷಿಯಾಯಿತು. ಇದಕ್ಕೆ ಕಾರಣ “ಇನ್ಸ್‌ಪೆಕ್ಟರ್‌ ವಿಕ್ರಂ’ ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಮಾಸ್‌ ಡೈಲಾಗ್‌, ಹೈವೋಲ್ಟೆàಜ್‌ ಫೈಟ್‌, ಕ್ಯೂಟ್‌ ಲವ್‌ಸ್ಟೋರಿ, ಟ್ವಿಸ್ಟ್‌, ಚಾಲೆಂಜಿಂಗ್‌ ಸ್ಟಾರ್‌ ಗ್ರ್ಯಾಂಡ್‌ ಎಂಟ್ರಿ ಜೊತೆಗೆ ಕುತೂಹಲ …

Read More »

ಸುದೀಪ್ ಅಭಿಮಾನಿ ಬಳಗ ಸೇರಿದ 5000 ಮಹಿಳೆಯರು!

ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್, ಹೊರ ರಾಜ್ಯ, ದೇಶಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಬಹುತೇಕ ನಟರಿಗೆ ಅಭಿಮಾನಿ ಸಂಘಗಳು ಇರುತ್ತವೆ, ಇದು ಬಹುತೇಕ ಸಹಜ ಸಹ. ಬಹುತೇಕ ನಟರಿಗೆ ಪುರುಷ ಅಭಿಮಾನಿ ಸಂಘಗಳು ಮಾತ್ರವೇ ಇರುತ್ತವೆ. ಆದರೆ ಸುದೀಪ್ ಅವರಿಗೆ ಮಹಿಳಾ ಅಭಿಮಾನಿ ಸಂಘವೂ ಇದೆ. ಈ ರೀತಿ ಮಹಿಳಾ ಅಭಿಮಾನಿ ಸಂಘ ಹೊಂದಿರುವ ವಿರಳ ನಟರಲ್ಲಿ ಸುದೀಪ್ ಸಹ ಒಬ್ಬರು. 5000 ಮಹಿಳಾ …

Read More »

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ‘ಏಕಾಂಗಿ ಪ್ರತಿಭಟನೆ’ ನಡೆಸಿದ ರೈತ

ಬಾಗಲಕೋಟೆ: ನಗರದ ಬಸವೇಶ್ವರ ವೃತ್ತದಲ್ಲಿ ರೈತರೊಬ್ಬರು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಮಾರು ಎರಡೂವರೆ ಗಂಟೆ ಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಗಳೊಳ್ಳಿ ಗ್ರಾಮದ ರೈತ ಬಿ.ಎಸ್​.ಬಜನ್ನವರ್​ ಎಂಬುವವರು ಏಕಾಂಗಿಯಾಗಿ ನಿಂತು ಪ್ರತಿಭಟನೆ ನಡೆಸಿದ್ದಾರೆ. ಇಂದು ದೇಶಾದ್ಯಂತ ಹಮ್ಮಿಕೊಂಡಿರುವ ಹೆದ್ದಾರಿ ಬಂದ್​ಗೆ ಬೆಂಬಲ ಸೂಚಿಸಿ ರೈತ ಈ ರೀತಿ ಹೋರಾಟ ನಡೆಸಿದ್ದಾರೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾ ನಿರತ ರೈತ ಒತ್ತಾಯಿಸಿದ್ದಾರೆ.

Read More »

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯನ ಮನೆಗೆ ಬೆಂಕಿ

ಕೋಲಾರ: ಗ್ರಾಮ ಪಂಚಾಯತಿ ಚುನಾವಣೆಯ ದ್ವೇಷದ ಹಿನ್ನೆಲೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯನ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮುಳಬಾಗಲು ತಾಲೂಕಿನ ರಾಜೆಂದ್ರಹಳ್ಳಿಯಲ್ಲಿ ನಡೆದಿದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿತ ನೂರ್ ಜಾನ್ ಮನೆಗೆ ವಿರೋಧಿ ಗುಂಪಿನಿಂದ ಬೆಂಕಿ ಹಾಕಿರುವ ಅರೋಪ ಕೇಳಿ ಬಂದಿದೆ. ಘಟನೆಯಲ್ಲಿ ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಹಾಗೂ ನಷ್ಟ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ …

Read More »

ಶರದ್ ಪವಾರ್ ಸಚಿನ್​​ಗೆ ಎಚ್ಚರಿಕೆ

ಮುಂಬೈ: ಬೇರೆ ಯಾವುದೇ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ನಾನು ಸಚಿನ್​​ಗೆ ಸಲಹೆ ನೀಡುತ್ತೇನೆ ಅಂತಾ ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್ ಎಚ್ಚರಿಕೆಯನ್ನ ನೀಡಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಮೊನ್ನೆ ಪಾಪ್ ಸಿಂಗರ್ ರಿಹಾನಾ ಟ್ವೀಟ್ ಮಾಡಿದ್ದರು. ಇದನ್ನ ಖಂಡಿಸಿ ಬಾಲಿವುಡ್​ ಹಾಗೂ ಕ್ರಿಕೆಟ್ ಸ್ಟಾರ್​​ಗಳು #IndiaTogether #IndiaAgainstPropaganda ಹ್ಯಾಶ್​ ಟ್ಯಾಗ್ ಅಡಿ ಅಭಿಯಾನ ಶುರುಮಾಡಿದ್ದರು. ಈ ಅಭಿಯಾನಕ್ಕೆ ಕೈಜೋಡಿಸಿ ಟ್ವೀಟ್ ಮಾಡಿದ್ದ ತೆಂಡೂಲ್ಕರ್.. ಭಾರತದ ಸಾರ್ವಭೌಮತ್ವ ವಿಚಾರದಲ್ಲಿ …

Read More »

ಮದ್ವೆಯಾದ 2 ತಿಂಗಳಲ್ಲಿ ಗಂಡನಿಂದಲೇ ಬಿ.ಟೆಕ್​ ವಿದ್ಯಾರ್ಥಿನಿ ಹತ್ಯೆ: ಕೊಲೆಗೆ ಕಾರಣ ಕೇಳಿ ಬೆಚ್ಚಿಬಿದ್ದ ಪಾಲಕರು!

ಖಮ್ಮಮ್: ತೆಲಂಗಾಣದ ಖಮ್ಮಮ್​ ಜಿಲ್ಲೆಯ ಪೆನುಬಲ್ಲಿ ವಲಯದ ನ್ಯೂ ಲಂಕಪಲ್ಲಿಯಲ್ಲಿ ಶುಕ್ರವಾರ (ಫೆ.5) ಪತಿಯಿಂದಲೇ ನಡೆದ ನವವಿವಾಹಿತೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ಪತ್ನಿಯ ಕೊಲ್ಲುವ ನಿರ್ಧಾರದ ಹಿಂದೆ ಪತಿಯ ಅಕ್ರಮ ಸಂಬಂಧ ಕಾರಣ ಎಂದು ಬಹಿರಂಗವಾಗಿದೆ. ನವ್ಯಾ ರೆಡ್ಡಿ (22) ಪತಿಯಿಂದಲೇ ಕೊಲೆಯಾದ ದುರ್ದೈವಿ. ಸಾಯಿ ಸ್ಫೂರ್ತಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಟೆಕ್​ ವಿದ್ಯಾರ್ಥಿನಿಯಾಗಿದ್ದ ನವ್ಯಾ, ತುಂಬಾ …

Read More »

ಧಾರವಾಡ ಭೀಕರ ಅಪಘಾತದಲ್ಲಿ ಮಡಿದವರಿಗೆ ಕುಟುಂಬಸ್ಥರಿಂದ ಶ್ರದ್ದಾಂಜಲಿ!

ಧಾರವಾಡ: ನಗರದ ಹೊರವಲಯದ ಇಟ್ಟಿಗಟ್ಟಿ ಬಳಿ ಜ.15 ರ ಬೆಳ್ಳಂಬೆಳಗ್ಗೆ ಟೆಂಪೋ ಟ್ರಾವೆಲರ್​ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು ಇಂದು ಅಪಘಾತ ನಡೆದ ಸ್ಥಳಕ್ಕೆ ಬಂದು ಶ್ರದ್ದಾಂಜಲಿ ಸಲ್ಲಿಸಿದರು. ಘಟನೆ ನಡೆದ ಸ್ಥಳದಲ್ಲಿ ಮೃತರ ಪೋಟೋಗಳನ್ನಿಟ್ಟು ಹೂಮಾಲೆ ಸಮರ್ಪಿಸಿ ಆತ್ಮಕ್ಕೆ ಶಾಂತಿ ಕೋರಿದರು. ಮೃತರೆಲ್ಲರೂ ದಾವಣಗೆರೆ ಮೂಲದವರು. ದಾವಣಗೆರೆಯ ಸೇಂಟ್‌ ಪಾಲ್ಸ್‌ ಕಾನ್ವಂಟ್‌ ಶಾಲೆಯ ಹಳೇ ವಿದ್ಯಾರ್ಥಿಗಳಾದ ಇವರು ಹಲವು ವರ್ಷಗಳ …

Read More »

GoodNews‌: ‘ಹೊಸ ಪಡಿತರ’ ಚೀಟಿ ಪಡೆಯಲು ‘ONLINE’ ಸೇವೆ ಮತ್ತೆ ಶುರು : ರಾಜ್ಯ ಸರ್ಕಾರದಿಂದ ಆದೇಶ, ಇಲ್ಲಿದೆ ಮಾಹಿತಿ

ಬೆಂಗಳೂರು : ಹೊಸ ಪಡಿತರ ಚೀಟಿಗಳ ಆನ್ ಲೈನ್ ಸೇವೆಯನ್ನು ಪುನಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇಲಾಖೆ ತಂತ್ರಾಂಶದಲ್ಲಿ ಹೊಸ ಆನ್ ಲೈನ್ ಅರ್ಜಿಗಳನ್ನು ಸ್ವೀಕಾರ ಮಾಡುವ ಅವಕಾಶವನ್ನು ಚಾಲ್ತಿಗೊಳಿಸಲಾಗಿದೆ. ಸಾರ್ವಜನಿಕರು ಹೊಸ ಪಡಿತರ ಚೀಟಿಗಳಿಗೆ ಆನ್ ಲೈನ್ ಅರ್ಜಿಗಳನ್ನು ಇಲಾಖೆ ನಿಗಧಿಪಡಿಸಿದ ಮಾನದಂಡಗಳಂತೆ ಸಲ್ಲಿಸಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಸೂಚನೆ ಹೊರಡಿಸಿದೆ. ಹೊಸ ಪಡಿತರ ಚೀಟಿಗಾಗಿ ಆನ್ …

Read More »

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವೇನು ಗೊತ್ತಾ?

ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆಯ ಏರಿಕೆಯನ್ನ ಕಾಣ್ತಿದ್ದು, ಇಂಧನ ಚಿಲ್ಲರೆ ಮಾರಾಟಗಾರರು ಬೆಲೆಗಳನ್ನ ಮೇಲ್ಮುಖವಾಗಿ ಪರಿಷ್ಕರಿಸಿದ್ದಾರೆ. ಫೆಬ್ರವರಿ 6ರಂದು ನವದೆಹಲಿಯಲ್ಲಿ ಪೆಟ್ರೋಲ್ ದರ 86.95 ರೂಪಾಯಿ ಇದ್ರೆ, ಮುಂಬೈನಲ್ಲಿ 93.49 ರೂ. ಆಗಿದೆ. ಇನ್ನು ಬೆಂಗಳೂರಿನಲ್ಲಿ 89.85 ರೂ. ಇದ್ರೆ, ಚೆನ್ನೈನಲ್ಲಿ 89.39 ರೂ.ಗಳಾಗಿದೆ. ತೆರಿಗೆ ಕೈಯಲ್ಲಿರುವ ಕಾರಣ ಈ ಬೆಲೆಗಳನ್ನ ಕಡಿಮೆ ಮಾಡಲು ಸರ್ಕಾರ ಮಾತ್ರ ಸಹಾಯ ಮಾಡುತ್ತೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ …

Read More »

ರಾಜ್ಯದ ‘ಬಿಪಿಎಲ್ ಕಾರ್ಡ್’ದಾರರಿಗೆ ಗುಡ್ ನ್ಯೂಸ್ : ಏ.1ರಿಂದ ಅಕ್ಕಿ ಜೊತೆಗೆ ಜೋಳ, ರಾಗಿ, ಹೆಸರುಬೇಳೆ, ತೊಗರಿಬೇಳೆ ವಿತರಣೆ

ಬೆಳಗಾವಿ : ರಾಜ್ಯದ ಬಿಪಿಎಲ್ ಪಡಿತರದಾರರಿಗೆ ಆಹಾರ ಭದ್ರತೆ ಯೋಜನೆಯಡಿ ಅಕ್ಕಿಯ ಜೊತೆಗೆ ಜೋಳ, ಹೆಸರುಬೇಳೆ, ತೊಗರಿ ಹಾಗೂ ರಾಗಿ ವಿತರಿಸಲಾಗುತ್ತದೆ ಎಂಬುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ. ಈ ಮೂಲಕ ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಕುರಿತಂತೆ ನಗರದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಆಹಾರ ಭದ್ರತೆ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ …

Read More »