Breaking News

Uncategorized

ಬಳ್ಳಾರಿಯಲ್ಲಿ ಸಿದ್ದರಾಮಯ್ಯರಿಗೆ ಸವಾಲ್ ಹಾಕಿಲ್ಲ: ಅಚ್ಚರಿಯ ಹೇಳಿಕೆ ನೀಡಿದ ಶ್ರೀರಾಮುಲು

ಕೊಪ್ಪಳ: ಬಳ್ಳಾರಿಯಲ್ಲಿ ನಡೆದ ಎಸ್‌ ಸಿ, ಎಸ್‌ ಟಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರಕ್ಕೆ ಬನ್ನಿ ಎಂದು ಸವಾಲ್ ಹಾಕಿಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲ್ ಹಾಕಿದ್ದೇನೆ. ಅಲ್ಲದೇ, ಸಿದ್ದರಾಮಯ್ಯರನ್ನು ನೋಡಿಕೊಳ್ಳುವೆ ಎನ್ನುವ ಪದವನ್ನು ಬಳಸಿಲ್ಲ. ಒಂದು ವೇಳೆ ಆ ಪದ ಬಳಸಿದ್ದರೆ, ಆ ಪದ ವಾಪಾಸ್ ಪಡೆಯುವೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಅಚ್ಚರಿಯ ಹೇಳಿಕೆ ನೀಡಿದರು. ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಳ್ಳಾರಿಯ ಸಮಾವೇಶದಲ್ಲಿ …

Read More »

ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಬೈಕ್ ಸವಾರರು ಸಾವು

ಬೆಂಗಳೂರು ಗ್ರಾಮಾಂತರ: ಬಿಬಿಎಂಪಿಯ ಕಸದ ಲಾರಿ ( BBMP’s garbage truck ) ಹರಿದು ಈಗಾಗಲೇ ಕೆಲವರನ್ನು ಬಲಿ ಪಡೆಯಲಾಗಿದೆ. ಇಂದು ಈ ಸರಣಿ ಮುಂದುವರೆದಿದೆ. ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.   ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿಯಲ್ಲಿ ಬಿಬಿಎಂಪಿಯ ಕಸದ ಲಾರಿಯು ಬೈಕ್ ಗೆ ಡಿಕ್ಕಿಯಾಗಿದೆ. ಕಸದ ಲಾರಿ ಡಿಕ್ಕಿಯಾಗಿದ್ದರಿಂದ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಅವರ …

Read More »

ಯುವ ರೈತನ ಜತೆ ಸಪ್ತಪದಿ ತುಳಿದ ಅದಿತಿ ಪ್ರಭುದೇವ: ನವಜೋಡಿಗೆ ಶುಭಕೋರಿದ ಗಣ್ಯರು

ಬೆಂಗಳೂರು: ಅರಮನೆ ಮೈದಾನದಲ್ಲಿ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರ ಮದುವೆ ಸೋಮವಾರ ಅದ್ದೂರಿಯಾಗಿ ನೆರವೇರಿತು. ಯುವ ರೈತ, ಉದ್ಯಮಿ ಯಶಸ್ವಿ ಪಾಟ್ಲ ಅವರ ಜೊತೆ ಅದಿತಿ ಸಪ್ತಪದಿ ತುಳಿದರು. ಮದುವೆ ಸಂಭ್ರಮದಲ್ಲಿ ಪಾಲ್ಗೊಂಡ ಕುಟುಂಬಸ್ಥರು, ಸಂಬಂಧಿಕರು, ಚಿತ್ರರಂಗ, ರಾಜಕೀಯ ಗಣ್ಯರು ನವಜೋಡಿಗೆ ಶುಭಹಾರೈಸಿದರು.   ಅದಿತಿ ಮತ್ತು ಯಶಸ್ವಿ ಅವರ ನಿಶ್ಚಿತಾರ್ಥ ಕಳೆದ ವರ್ಷವೇ ನೆರವೇರಿತ್ತು. ನಿನ್ನೆ(ಭಾನುವಾರ) ಮೆಹಂದಿ ಶಾಸ್ತ್ರ, ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ನಡೆದಿತ್ತು. ಇಂದು ಬೆಳಗ್ಗೆ …

Read More »

ಮಹಾ ಸರ್ಕಾರಕ್ಕೆ ಮತ್ತೊಂದು ಶಾಕ್; ಜತ್ ತಾಲೂಕಿನ ಬೆನ್ನಲ್ಲೇ ಮತ್ತೊಂದು ತಾಲೂಕಿನ ಜನರಿಂದಲೂ ಕರ್ನಾಟಕಕ್ಕೆ ಹೋಗುವುದಾಗಿ ಘೋಷಣೆ

ಸೊಲ್ಲಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಮಹಾರಾಷ್ಟ್ರದ ಜತ್ ತಾಲೂಕಿನ ಜನರು ತಾವು ಕರ್ನಾಟಕ್ಕೆ ಹೋಗುತ್ತೇವೆ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಸರ್ಕಾರಕ್ಕೆ ಅಕ್ಕಲಕೋಟ ತಾಲೂಕಿನ ಜನರೂ ಶಾಕ್ ಕೊಟ್ಟಿದ್ದು, ತಮ್ಮನ್ನು ಕರ್ನಾಟಕ್ಕೆ ಸೇರಿಸಿ ಎಂದು ಪಟ್ಟು ಹಿಡಿದಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಜನರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ಮಹಾಜನ್ ಆಯೋಗ ವರದಿಯಂತೆ ನಾವೂ ಕರ್ನಾಟಕ್ಕೆ ಹೋಗುತ್ತೇವೆ. 5 …

Read More »

3 ಕಡೆ ಮನೆ ಬಾಡಿಗೆ ಪಡೆದು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಸುಂದರಿ ಗ್ಯಾಂಗ್​!

ರಾಯಚೂರು: ಬಾಡಿಗೆಗೆ ಮನೆ ಕೊಡೋಕು ಮುನ್ನ ಎಚ್ಚರ! ಮನೆ ಬಾಡಿಗೆ ಪಡೆಯೋ ನೆಪದಲ್ಲಿ ಸುಂದರ ಯುವತಿಯನ್ನ ಮುಂದೆ ಬಿಟ್ಟು ಸ್ಕೆಚ್ ಹಾಕ್ತಿತ್ತು. ಮನೆ ಮಾಲೀಕರನ್ನೇ ಬಲೆಗೆ ಬೀಳಿಸಿಕೊಂಡು ಎಲ್ಲವನ್ನೂ ದೋಚುತ್ತಿದ್ದಳು ಖತರ್ನಾಕ್ ಬ್ಯೂಟಿ ಲೇಡಿ… ಇವಳ ಗ್ಯಾಂಗ್​ ಮೇಲೆ ಆಂಧ್ರದಲ್ಲಿದೆ ಬರೋಬ್ಬರಿ 25 ಕೇಸ್​. ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಈ ಗ್ಯಾಂಗ್​ ಕರ್ನಾಟಕದಲ್ಲೂ ಮಾಡಬಾರದ್ದು ಮಾಡಿ ರಾಯಚೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಅಂದಹಾಗೆ ಈಕೆಯ ಹಿಂದಿದೆ ಇಬ್ಬರು ಎಂಎಸ್ಸಿ …

Read More »

ಗಡಿ ವಿವಾದ: ಸಿಎಂ ಬೊಮ್ಮಾಯಿ ಬೆಂಬಲಿಸಿ ಮಹಾರಾಷ್ಟ್ರ ಗಡಿ ಗ್ರಾಮಸ್ಥರ ರ್‍ಯಾಲಿ

ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ಮಾತನಾಡುವ ಜತ್, ಅಕ್ಕಲಕೋಟ್ ಮತ್ತು ಸೊಲ್ಲಾಪುರ ಮತ್ತಿತರ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕಾದವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ನಂತರ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಣ ಗಡಿ ವಿವಾದಲ್ಲಿ ಹೊಸ ಮಾತಿನ ಸಮರ ಶುರುವಾಗಿದೆ. ಬೆಳಗಾವಿ: ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ಮಾತನಾಡುವ ಜತ್, ಅಕ್ಕಲಕೋಟ್ ಮತ್ತು ಸೊಲ್ಲಾಪುರ ಮತ್ತಿತರ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕಾದವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ನಂತರ ಮಹಾರಾಷ್ಟ್ರ ಮತ್ತು ಕರ್ನಾಟಕ …

Read More »

ಟಿಕೆಟ್ ಗೆ ಅರ್ಜಿ ಹಾಕುವೆ ಆದರೆ ಎರಡು ಲಕ್ಷ ಕೊಡಲ್ಲ: ಎಸ್.ಎಸ್. ಮಲ್ಲಿಕಾರ್ಜುನ್

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಗೆ ಅರ್ಜಿ ಸಲ್ಲಿಸುವೆ. ಆದರೆ, ಎರಡು ಲಕ್ಷ ರೂಪಾಯಿ ಕೊಡುವುದಿಲ್ಲ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಅರ್ಜಿ ಸಲ್ಲಿಸಿಯೇ ಸಲ್ಲಿಸುತ್ತೇನೆ. ಆದರೆ, ಎರಡು ಲಕ್ಷ ರೂಪಾಯಿ ಕೊಡುವುದಿಲ್ಲ. ಎರಡು ಲಕ್ಷ ರೂಪಾಯಿ ಕೊಡುವ ಬಗ್ಗೆ ನಾಯಕರೊಂದಿಗೆ ಮಾತನಾಡಿರುವೆ ಎಂದರು.   ನಮ್ಮಂತಹ ಪ್ರಾಮಾಣಿಕರು ಏಕೆ …

Read More »

ಗೋಕಾಕದಲ್ಲಿ ಆರು ಜನರಿಗೆ ನಾಯಿ ಕಡಿತ ಘಟನೆ; ಸರ್ಕಾರಿ ಆಸ್ಪತ್ರೆಗೆ ಶಾಸಕ ಸತೀಶ್ ಜಾರಕಿಹೊಳಿ ಭೇಟಿ: ಗಾಯಗೊಂಡವರ ಆರೋಗ್ಯ ವಿಚಾರಣೆ

ಗೋಕಾಕ್ ನಗರದಲ್ಲಿ ಆರು ಜನರಿಗೆ ನಾಯಿ ಕಡಿತ ಘಟನೆ ನಡೆದಿದ್ದು. ಸರ್ಕಾರಿ ಆಸ್ಪತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ರವಿವಾರ ಗೋಕಾಕ್ ನಗರದ ನಾಯಕ್ ಗಲ್ಲಿಯಲ್ಲಿ ಬೆಳ್ಳಂ ಬೆಳಿಗ್ಗೆ ಆರು ಜನರಿಗೆ ನಾಯಿ ಕಡಿದು ಗಂಭೀರ ಗಾಯಗೊಂಡವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿ ಧೈರ್ಯ ತುಂಬಿದರು. ನಂತರ …

Read More »

ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ರಿಂಗ್ ರೋಡ್ ವಿರುದ್ಧ ಬೃಹತ್ ಬಾರುಕೋಲು ಚಳುವಳಿ

ಬೆಳಗಾವಿಯಲ್ಲಿ ರಿಂಗ್‍ರೋಡ್ ನಿರ್ಮಾಣದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಫಲವತ್ತಾದ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಇಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಬೆಳಗಾವಿ ಸುತ್ತಮುತ್ತಲೂ ಫಲವತ್ತಾದ ಭೂಮಿ ಇದೆ. ತುಂಡು ಭೂಮಿಗಳು ಇರುವ ಹಿನ್ನೆಲೆ ಒಂದು ಎಕರೆ, ಎರಡು ಎಕರೆ, ಅರ್ಧ ಎಕರೆಯಲ್ಲಿಯೇ ವರ್ಷಕ್ಕೆ ಮೂರು ಬೆಳೆ ಬೆಳೆದು ತಮ್ಮ ಕುಟುಂಬವನ್ನು ಇಲ್ಲಿನ ರೈತರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸುವರ್ಣಸೌಧ ಸೇರಿ ಇನ್ನಿತರ ಸಂಬಂಧ …

Read More »

ರಮೇಶ ಜಾರಕಿಹೊಳಿ ಫಿಲ್ಡಿಗಿಳಿಯುವ ಮೂಲಕ ಎದುರಾಳಿಗಳಿಗೆ ನಡುಕ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಾಜಕೀಯ ಜೋರಾಗಿದ್ದು. ಮಾಜಿ ಸಚಿವ ರಮೇಶ ಜಾರಕಿಹೊಳಿ ಫಿಲ್ಡಿಗಿಳಿಯುವ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಹೌದು ಮೊನ್ನೆಯಷ್ಟೇ ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ ಮನ್ನೋಳ್ಕರ್‍ನ್ನು ಕರೆದುಕೊಂಡು ಸಿಎಮ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದ ರಮೇಶ ಜಾರಕಿಹೊಳಿ ಇದೀದ ಮಾಜಿ ಸಿಎಂ ಜಗದೀಶ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕೂಡ ನಾಗೇಶ ಮನ್ನೋಳ್ಕರ್ ಜೊತೆಗೆ ಹೋಗಿ ಭೇಟಿ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ …

Read More »