Breaking News

ಬೆಳಗಾವಿ

ಗೋಕಾಕದಲ್ಲಿ ಮಾಧವಾನಂದ ಪ್ರಭೂಜಿ ಜಯಂತಿ ಉದ್ಘಾಟಿಸಿದ ಸಚಿವ ರಮೇಶ್ ಜಾರಕಿಹೊಳಿ

      ಗೋಕಾಕದಲ್ಲಿ ಸ.ಸ.ಮಾಧವಾನಂದ ಪ್ರಭೂಜಿ ಅವರ 105 ನೇ ಜಯಂತಿ ಕಾರ್ಯಕ್ರಮವನ್ನು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಉದ್ಘಾಟಿಸಿದರು. ಗೋಕಾಕದಲ್ಲಿ ಸೋಮವಾರ ಸ.ಸ.ಮಾಧವಾನಂದ ಪ್ರಭೂಜಿ ಅವರ 105 ನೇ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜಯಂತಿ ಅಂಗವಾಗಿ ಮಾಧವಾನಂದ ಪ್ರಭೂಜಿ ಅವರ ಪಾಲಕಿ ಉತ್ಸವದ ಮೆರವಣಿಗೆ ನಡೆಯಿತು. ಪ್ರಭೂಜಿ ಅವರ ಭಕ್ತರು ಭಜನೆ ಮೇಳದೊಂದಿಗೆ ಪಾಲಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ …

Read More »

ಬರುವ ಸ್ಥಳೀಯ ಮಟ್ಟದ ಚುನಾವಣೆ ಬಿಜೆಪಿಗೆ ಮಹತ್ವವಾಗಿದೆ.:ಈರಣ್ಣಾ ಕಡಾಡಿ

ಬೆಳಗಾವಿ:ಬರುವ ಸ್ಥಳೀಯ ಮಟ್ಟದ ಚುನಾವಣೆ ಬಿಜೆಪಿಗೆ ಮಹತ್ವವಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ, ಕೇಂದ್ರ ಸರಕಾರದ ಮಹತ್ತರ ಯೋಜನೆಯನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು. ಸೋಮವಾರ ನಗರದ ಧರ್ಮನಾಥ ಭವನದಲ್ಲಿ ಬೆಳಗಾವಿ ಗ್ರಾಮಾಂತರ, ಮಹಾನಗರ ಮತ್ತು ಚಿಕ್ಕೋಡಿ ಜಿಲ್ಲೆಯ ಪ್ರಮುಖರ ಪ್ರಶಿಕ್ಷಣ ವರ್ಗದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2014ರ ಬಳಿಕ …

Read More »

ಗೋಕಾಕ ನಗರದ ನಗರ್ ಸಭೆ ಚುನಾವಣೆ ಕೊನೆಗೂ ಅಂತ್ಯ

        ಗೋಕಾಕ: ಗೋಕಾಕ ನಗರದ ನಗರ್ ಸಭೆ ಚುನಾವಣೆ ಕೊನೆಗೂ ಅಂತ್ಯ ಹಾಡಿದೆ . ಈ ಬಾರಿ ಸಾಹುಕಾರರ ಕೃಪಾ ಕಟಾಕ್ಷ ಇವರಿಬ್ಬರ ಮೇಲೆ ಆಗಿದೆ ಗೋಕಾಕ ನಗರಸಭೆ ಅಧ್ಯಕ್ಷ ರಾಗಿ ಜಯಾನಂದ ಹುಣ ಚ್ಯಾಳಿ ಆಯ್ಕೆ ಆದರೆ ಗೋಕಾಕ ನಗರ ಸಭೆ ಉಪಾಧ್ಯಕ್ಷ ರಾಗಿ. ಬಸವ ರಾಜ ಅರೆನ್ನವರ ಆಯ್ಕೆ ಯಾಗಿದ್ದಾರೆ ಈ ಬಾರಿ ಸಾಹುಕಾರರ ಕೃಪಾ ಕಟಾಕ್ಷ ಇವರಿಬ್ಬರ ಮೆಲಾಗಿದ್ದು ಇಬ್ಬರು ಒಳ್ಳೆಯ …

Read More »

ಯಾರ್ ಆಗ್ತಾರೆ ಗೋಕಾಕ ನಗರ್ ಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ… .?

ಗೋಕಾಕ- ಗೋಕಾಕ ನಲ್ಲಿ ಇಂದು ನಗರ್ ಸಭೆ ಚುನಾವಣೆ ನಡೆಯುತ್ತಿದ್ದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಒಟ್ಟು 31ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು 31ರಲ್ಲಿ ಇಬ್ಬರು ತಿರಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಉಳಿದ ಜನರಲ್ಲಿ ಚುನಾವಣೆ ಜಟಾಪಟಿ ನಡೆಯುತ್ತಿದ್ದು ಯಾರು ಗೋಕಾಕ ನಗರ್ ಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ ರಮೇಶ್ ಜಾರಕಿಹೊಳಿ ಅವರ್ ಕೃಪಾ ಕಟಾಕ್ಷ ಯಾರ್ ಮೇಲಾಗುತ್ತದೆ ಅನ್ನೋದು …

Read More »

ಹಿಪ್ಪರಗಿ ಗ್ರಾಮದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಗ್ರಾಮಸ್ಥರು,‌ ಕನ್ನಡಪರ‌ ಸಂಘಟನೆಗಳು ಘೇರಾವ್

ಅಥಣಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಗ್ರಾಮಸ್ಥರು,‌ ಕನ್ನಡಪರ‌ ಸಂಘಟನೆಗಳು ಘೇರಾವ್ ಹಾಕಿದ ಘಟನೆ ನಡೆದಿದೆ. ಹಿಪ್ಪರಗಿ ಬ್ಯಾರೇಜ್ ಸಂಪರ್ಕ ಕಲ್ಲಿಸುವ‌ ರಸ್ತೆ ಕಾಮಗಾರಿಗೆ ಭೂಮಿ ಪೂಜೆ‌ ನೆರವೇರಿಸಲು ಆಗಮಿಸುತ್ತಿದ್ದರು.ಈ ವೇಳೆ ರಸ್ತೆಯ ಮಧ್ಯದಲ್ಲಿಯೇ ಗ್ರಾಮಸ್ಥರು, ಕನ್ನಡಪರ ಹೋರಾಟಗಾರರು ಘೇರಾವ್ ಹಾಕುವ ಮೂಲಕ ಸಮಸ್ಯೆಗಳನ್ನು ಆಲಿಸುವಂತೆ ಪಟ್ಟು ಹಿಡಿದರು. ಹಿಪ್ಪರಗಿ, ನಂದೇಶ್ವರ ಗ್ರಾಮದಲ್ಲಿ ಮೂಲ ಸೌಕರ್ಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದಾರೆ. ಚುನಾವಣೆ ಬಳಿಕ …

Read More »

ಹೊಸ ವಂಟಮುರಿಯಲ್ಲಿ ಇಂದು ಕರವೇ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಹುಲ್ ಜಾರಕಿಹೊಳಿ

ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹಲವು ವರ್ಷಗಳಿಂದ ಬಡವರ ದನಿಯಾಗಿ, ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೆ ಬಂದಿದೆ. ಮುಂದೆನೂ ಸಹ ಇದೇ ರೀತಿ ಹೋರಾಟ ನಡೆಯುತ್ತಿರಬೇಕು ಎಂದು ರಾಹುಲ್ ಜಾರಕಿಹೊಳಿ ಹೇಳಿದರು. ಅವರು ಹೊಸ ವಂಟಮುರಿಯಲ್ಲಿ ಇಂದು ಕರವೇ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವು ವರ್ಷಗಳಿಂದ ರಕ್ಷಣಾ ವೇದಿಕೆ ರಾಜ್ಯದಲ್ಲಿ ಬಡವರ ದನಿಯಾಗಿ ಕೆಲಸ ಮಾಡುತ್ತಿದೆ. ಅನ್ಯಾಯ ವಿರುದ್ಧ ಸಮರಕ್ಕೆ ಸಿದ್ದ ಎಂಬಂತೆ ಕಾರ್ಯ ಮಾಡುತ್ತಿದೆ …

Read More »

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಏಳ್ಗೆಗಾಗಿ ಶ್ರಮಿಸಿ ಮಾದರಿ ಪಟ್ಟಣವನ್ನಾಗಿ ಪರಿವರ್ತಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ

ಗೋಕಾಕ : ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಏಳ್ಗೆಗಾಗಿ ಶ್ರಮಿಸಿ ಮಾದರಿ ಪಟ್ಟಣವನ್ನಾಗಿ ಪರಿವರ್ತಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು. ಸಮೀಪದ ಅರಭಾವಿ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ಎಲ್ಲರ ಸಹಕಾರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಅರಭಾವಿ ಪಟ್ಟಣದ ಪ್ರಗತಿಗಾಗಿ ಸರ್ಕಾರದಿಂದ ಇನ್ನೂ …

Read More »

ಕನ್ನಡ ಅಭಿಮಾನ

ಕನ್ನಡ ಅಭಿಮಾನ ಮೂಡಿಬರಲಿ ಕನ್ನಡ ಅಭಿಮಾನ ಕನ್ನಡ ನಾಡಿನ ಅಭಿಮಾನ ಒಕ್ಕೊರಲಿಂದ ಕನ್ನಡಿಗರೆಂದು ಹೇಳೋಣ ಎಲ್ಲರೂ ಒಂದಂಬ ಭಾವದಲಿ…. ಎಲ್ಲ ಕಡೆ ಚೆಲುವ ಕನ್ನಡ ಮೊಳಗಲಿ…. ಬೆಳಗಲಿ….. ಎಲ್ಲೆಲ್ಲಿಯೂ ಕನ್ನಡ ಜ್ಯೋತಿ ಬೆಳಗಲಿ….. ಬೆಳೆಯಲಿ….. ಭಾವೈಕ್ಯತೆಯ ಭಾವ ಮೂಡಲಿ ನಾಡು-ನುಡಿಗಾಗಿ ಮನ ತುಡಿಯಲಿ…. ಮಿಡಿಯಲಿ….. ನಾಡ ಸಂಸ್ಕೃತಿಯನು ಬೆಳೆಸಲಿ ಅರ್ಪಣೆಯಾಗಲಿ ನಾಡಿಗಾಗಿ ಬದುಕು ಕನ್ನಡದ ಪ್ರೀತಿ ಹೆಚ್ಚಲಿ….. ಕನ್ನಡತನಕ್ಕಾಗಿ ಹೋರಾಡು ನೀ ತೀರಿಸು ನೀ ಕನ್ನಡ ತಾಯಿಯ ಋಣ….. ವಿದ್ಯಾ …

Read More »

ಬೆಳಗಾವಿಯಲ್ಲಿ ಎಲ್ಲರೂ ಕನ್ನಡ ಉಳಸಿ ಬೆಳಸಬೇಕು.:ಅಶೋಕ ಚಂದರಗಿ,

ಬೆಳಗಾವಿ: ಬೆಳಗಾವಿ ನಗರದ ಕರ್ನಾಟಕ ರಾಜ್ಯೋತ್ಸವವೆಂದರೆ ಇಡೀ ದೇಶದಲ್ಲಿಯೇ ಹೆಚ್ಚು ವೈಭವ ಪೂರ್ಣವಾಗಿ ಆಚರಿಸುವ ರಾಜ್ಯೋತ್ಸವ.. ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ರಾಜ್ಯೋತ್ಸವಕ್ಕೆ ಬಂದಿದ್ದ ಎಲ್ಲರಿಗೂ ಹೋಳಿಗೆ ಊಟ ಬಡಿಸಿ, ಧಾರವಾಡ ಪೇಡ ಹಂಚಿ ಕನ್ನಡ ಉಳಿಸಿ, ಬೆಳೆಸಿ ಎಂದು ಕರೆ ನೀಡಿದರು. ಈ ರಾಜ್ಯೋತ್ಸವದ ದಿನ ಹಲವಾರು ವರ್ಷಗಳಿಂದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ರಾಜ್ಯೋತ್ಸವಕ್ಕೆ ಬಂದಿರುವಂತಹ ಎಲ್ಲರಿಗೂ ಹೋಳಿಗೆ ಊಟ …

Read More »

ಎಂಇಎಸ್ ಪುಂಡರು ಮತ್ತೆ ಕರಾಳ ದಿನ ಆಚರಿಸಲು ಮುಂದಾಗಿದ್ದಾರೆ.

ಬೆಳಗಾವಿ:  ಕುಂದಾನಗರಿಯಲ್ಲಿ  ಕರಾಳ ದಿನಾಚರಣೆಗೆ ಮುಂದಾಗಿದ್ದ ಎಂಇಎಸ್ ಗೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್ ಹಾಕಿದ್ದರೂ, ಕೆಲ ಎಂಇಎಸ್ ಪುಂಡರು ಮತ್ತೆ ಕರಾಳ ದಿನ ಆಚರಿಸಲು ಮುಂದಾಗಿದ್ದಾರೆ. ಬೆಳಗಾವಿಯ ಮರಾಠಾ ಭವನದಲ್ಲಿ ಸೇರಿರುವ ಎಂಇಎಸ್ ಕಾರ್ಯಕರ್ತರು ಪ್ರಚೋದನಕಾರಿ ಭಾಷಣಗಳನ್ನು ಮಾಡಿ, ಕರಾಳ ದಿನಾಚರಣೆ ನಡೆಸಲು ಮುಂದಾಗಿದ್ದಾರೆ. ಎಂಇಎಸ್ ಕಾರ್ಯಕರ್ತರಿಗೆ ಮಹಾರಾಷ್ಟ್ರದ ಸಚಿವರು ಕೂಡ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಕೈಗೆ ಕಪ್ಪು ಪಟ್ಟಿ ಧರಿಸಿ ಕಾರ್ಯಕರ್ತರು ಮರಾಠಾ ಭವನದಲ್ಲಿ ಸೇರಿದ್ದಾರೆ. ಬೆಳಗಾವಿ, ಕಾರವಾರ, …

Read More »