Breaking News

ವರದಕ್ಷಿಣೆ ಕಿರುಕುಳ: ತಾಯಿಯ ಜೊತೆ 2 ವರ್ಷದ ಮಗುವನ್ನೂ ಹೊರದಬ್ಬಿದ ಕಿರಾತಕರು..

Spread the love

ಬೆಂಗಳೂರು: 2 ವರ್ಷದ ಮಗುವಿನ ಜೊತೆ ಮಹಿಳೆಯನ್ನು ಹೊರಹಾಕಿ ಪತಿ ವರದಕ್ಷಿಣೆ ಕಿರುಕುಳ ನೀಡಿರುವ ಅಮಾನವೀಯ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ. ಪತಿಯ ಕುಟುಂಬಸ್ಥರ ವಿರುದ್ಧ ಪತ್ನಿ ವಾದಿಕಾ ಜತ್ಲಾ ದೂರು ನೀಡಿದ್ದಾರೆ.

 ನಿನ್ನೆ ಇದೇ ರೀತಿ ವರದಕ್ಷಿಣೆಗಾಗಿ ಪತ್ನಿಯನ್ನೇ ಸುಡಲು ಯತ್ನಿಸಿದ್ದ ಪತಿ ಬಗ್ಗೆ ಕೇಳಿದ್ವಿ. ಈಗ ಇಂತಹದ್ದೇ ಮತ್ತೊಂದು ಘಟನೆ ಮರುಕಳಿಸಿದೆ.

ಪತಿರಾಯ ಚಳಿ, ಮಳೆಯನ್ನು ಲೆಕ್ಕಿಸದೆ ತನ್ನ 2 ವರ್ಷದ ಪುಟ್ಟ ಕಂದಮ್ಮನ ಜೊತೆ ತಾಯಿಯನ್ನೂ ಮನೆಯಿಂದ ಆಚೆ ಹಾಕಿದ್ದಾನೆ. ಹೈದರಾಬಾದ್ ಮೂಲದ ಈ ಕುಟುಂಬ ಬೆಂಗಳೂರಲ್ಲಿ ನೆಲೆಸಿದೆ. ಕೆಲ ವರ್ಷಗಳ ಹಿಂದಷ್ಟೇ ಹರಿಪ್ರಸಾದ್ ತೋಟಾ ಜತೆಗೆ ವಾದಿಕಾ ಜತ್ಲಾ ವಿವಾಹವಾಗಿತ್ತು. ಕೆಲ ತಿಂಗಳ ಬಳಿಕ ಈ ಕುಟುಂಬ ಅಮೆರಿಕದಿಂದ ಬೆಂಗಳೂರಿಗೆ ಬಂದು ನೆಲೆಸಿತ್ತು.

ಇವರಿಗೆ 2 ವರ್ಷದ ಮಗುವಿದೆ. ಆದರೆ ವಾದಿಕಾ ಜತ್ಲಾಗೆ ಪತಿ ಹಾಗೂ ಅವನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಪತಿ ಹರಿಪ್ರಸಾದ್ ಪತ್ನಿಯನ್ನು ಅನುಮಾನಿಸುತ್ತಿದ್ದ. 3 ತಿಂಗಳ ಹಿಂದೆ ಪತ್ನಿ ಮತ್ತು ಮಗುವನ್ನು ಬಿಟ್ಟುಹೋಗಿದ್ದ. ಆದರೆ ಈಗ ತಾಯಿ, ಮಗುವಿಗೆ ಆಹಾರ ನೀಡದೆ ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ವರ್ತಿಸಿದ್ದಾರೆ. ಕೊರೆಯುವ ಚಳಿಯಲ್ಲಿ ಮನೆ ಹೊರಭಾಗದ ಕಾರಿಡಾರ್ ನಲ್ಲೆ ಮಗು ಸಮೇತ ಟೆಕ್ಕಿ ಪತ್ನಿ ರಾತ್ರಿ ಕಳೆದಿದ್ದಾರೆ. ಮಾವ ಸುದರ್ಶನ್ ತೋಟಾ, ಅತ್ತೆ ಸುಗುತಾದೇವಿ ಸೇರಿದಂತೆ ನಾಲ್ವರ ವಿರುದ್ಧ ವಾದಿಕಾ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 


Spread the love

About Laxminews 24x7

Check Also

ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ಸಂಜೆ 4 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಸಮಂಜರಿ ನಡೆಸಿಕೊಡಲಿದ್ದಾರೆ.

Spread the love ಬೆಳಗಾವಿ: ‘ಕಿತ್ತೂರು ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಬೆಳಗಾವಿ ನಗರದಲ್ಲೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ