Breaking News

ಬೆಳಗಾವಿಯಲ್ಲಿ ಸಾಧಕ ಮಹಿಳೆಯರಿಗೆ ಸನ್ಮಾನ: ಯುವ ಸಮಿತಿ ಮಹಿಳಾ ಘಟಕದಿಂದ ಅದ್ದೂರಿ ‘ಅರಿಶಿನ-ಕುಂಕುಮ’ ಕಾರ್ಯಕ್ರಮ

Spread the love

ಮಹಿಳಾ ಸಬಲೀಕರಣ ಮತ್ತು ಸಂಘಟನೆಯ ಉದ್ದೇಶದೊಂದಿಗೆ, ಬೆಳಗಾವಿಯ ಕಾವಳೆ ಸಂಕುಲದಲ್ಲಿ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯಿಂದ ಸಾಧಕ ಮಹಿಳೆಯರಿಗೆ ಗೌರವ ಸಮರ್ಪಣೆ ಹಾಗೂ ಅರಿಶಿನ-ಕುಂಕುಮ ಕಾರ್ಯಕ್ರಮ ಜರುಗಿತು.

ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ರಾಜಮಾತಾ ಜಿಜಾವು, ಛತ್ರಪತಿ ಶಿವಾಜಿ ಮಹಾರಾಜ್’ರ ಹಾಗೂ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ಪಡೆಯಿತು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ವೇತಾ ಕುಡುಚಕರ್ ಅವರು, ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಸ್ವತಂತ್ರ ಅಸ್ತಿತ್ವ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಮಾಜಿ ನಗರಸೇವಕಿ ಸುಧಾ ಭಾತ್ಕಾಂಡೆ, ಶಿವಾನಿ ಪಾಟೀಲ್ ಹಾಗೂ ಪ್ರೊ. ಮಧುರಾ ಗುರವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ವಿಶೇಷವಾಗಿ ಗೌರವಿಸಲಾಯಿತು. ವೈದ್ಯಕೀಯ ನರ್ಸಿಂಗ್ ವಿಷಯದಲ್ಲಿ ಪಿ.ಎಚ್‌ಡಿ ಪದವಿ ಪಡೆದ ಡಾ. ವೃಷಾಲಿ (ಸಾಯಿ) ಶೇಖರ್ ಪಾಟೀಲ್, ಜಾನಪದ ಸಾಹಿತ್ಯದಲ್ಲಿ ಪಿ.ಎಚ್‌ಡಿ ಪಡೆದ ಡಾ. ವೃಷಾಲಿ ಕದಂ ದಡ್ಡಿಕರ್ ಹಾಗೂ ಜೈಂಟ್ಸ್ ಗ್ರೂಪ್ ಸಖಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸುಲಕ್ಷಣಾ ಶಿನ್ನೋಳ್ಕರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಂತಿಮವಾಗಿ ಸಾಂಪ್ರದಾಯಿಕ ಅರಿಶಿನ-ಕುಂಕುಮ ಹಾಗೂ ಉಡುಗೊರೆಗಳನ್ನು ನೀಡುವ ಮೂಲಕ ಸಮಾರಂಭವು ಮಕ್ತಾಯಗೊಂಡಿತು.


Spread the love

About Laxminews 24x7

Check Also

ಗೂಡಂಗಡಿಗಳ ಸ್ವಚ್ಛತೆಗೆ ಮಹಾಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ರಾಠೋಡ್ ಖಡಕ್ ಸೂಚನೆ

Spread the loveಬೆಳಗಾವಿ: ನಗರದಲ್ಲಿರುವ ಗೂಡಂಗಡಿಗಳಲ್ಲಿ ಸ್ವಚ್ಚತೆಯ ಬಗ್ಗೆ ಪಾಲಿಕೆಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಮಹಾನಗರ ಪಾಲಿಕೆ ಸ್ಥಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ