ಬಾಗಲಕೋಟೆ: ವೀರಣ್ಣ ಚರಂತಿಮಠ ಪರ ಮಗ ನವೀನ ಚರಂತಿಮಠ ಬಾಗಲಕೋಟೆಯ 24ನೇಯ ವಾರ್ಡಿನಲ್ಲಿ ಇಂದು ಮತಯಾಚಿಸಿ ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಅವರ ಶಾಸಕರಾದ ಅವದಿಯಲ್ಲಿ ರೈತರು ಮತ್ತು ನಿರುದ್ಯೋಗಿಗಳಿಗೆ ಬಿಜೆಪಿ ಸರಕಾರದಿಂದ ಸಾಕಷ್ಟು ಅಭಿವೃದ್ದಿಪರ ಕೆಲಸಗಳಾಗಿದ್ದು 24 ರೈತರಿಗೆ ಪವರ್ ಟೆಲ್ಲರ, 1000ಕ್ಕೂ ಹೆಚ್ಚು ಕೃಷಿ ಉಪಕರಣಗಳು, 46ರೈತರಿಗೆ ಎತ್ತು, 36 ರೈತರಿಗೆ ಬಂಡಿ ಪೂರೈಸಲಾಗಿದೆ. ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಸುಮಾರು 150 ಪೇಂಟರ್ ಕೀಟ್. 170 ಏಲೆಕ್ಟ್ರೀಷನ್ ಮಕ್ಕಳಿಗೆ ಶಾಲಾಕೀಟ್ ವಿತರಣೆ ಹಾಗೂ ಕಟ್ಟಡ ಕಾರ್ಮಿಕರಿಗೆ ಕೀಟ್ ವಿತರಣೆ ಮಾಡಲಾಗಿದೆ, ಹಾಗೂ ಸ್ಯಯಂ ಉದ್ಯೋಗ ಕೈಗೊಳ್ಳುವ ತಾಲೂಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿರುದೋಗಿ 80 ಜನ ಫಲಾನುಭವಿಗಳಿಗೆ ಮೋಟಾರ್ ಬೈಕ್ ಮತ್ತು ಕೀ ಹಸ್ತಾಂತರ ಮಾಡಲಾಗಿದೆ, ರೈತರ, ಮಹಿಳೆಯರ, ಕೂಲಿಕಾರ್ಮಿಕರ, ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆಯನ್ನು ಪ್ರಧಾನಿ ಮೋದಿ ನೀಡುತ್ತಿದ್ದು, ಬಿಜೆಪಿ ಮತ ನೀಡಿ ಎಂದರು.
ಸಂದರ್ಭದಲ್ಲಿ ಶಿವು ಜಾಲಗಾರ ಬೂತ್ ಅಧ್ಯಕ್ಷರಾದ ಶಿವಾನಂದ ರಾಥೋಡ,ಪ್ರವೀಣ ಕಾಥೆದಾರ,ಶಿವು ಕಾಂಬ್ಳೆ,ಶಿವಾಂಗಿ, ಎಸ್ ಸಿ ಮೊರ್ಚಾದ ಅಧ್ಯಕ್ಷರಾದ ,ಚೇತನ ನಾಯ್ಕರ,ಚಂದ್ರಕಾಂತ ಕಾಥೆದಾರ ಸೇರಿದಂತೆ ಇತರಿದ್ದರು.
Laxmi News 24×7