Breaking News
Home / ರಾಜಕೀಯ / 20 ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ, ಪಟ್ಟಿ

20 ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ, ಪಟ್ಟಿ

Spread the love

ಬೆಂಗಳೂರು, ಜುಲೈ 25;ಬಸವರಾಜ ಬೊಮ್ಮಾಯಿನೇತೃತ್ವದ ಕರ್ನಾಟಕ ಸರ್ಕಾರ 20 ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ.

ಕೆಲವು ದಿನಗಳ ಹಿಂದೆ ಎಲ್ಲಾ 22 ನಿಮಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರದ್ದು ಮಾಡಲಾಗಿತ್ತು.

ಸೋಮವಾರ ಕರ್ನಾಟಕ ಸರ್ಕಾರ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಈ ಮೂಲಕ ಬಸವರಾಜ ಬೊಮ್ಮಾಯಿ ಒಂದು ವರ್ಷ ಪೂರ್ಣಗೊಳಿಸುವಾಗ ಹಲವಾರು ನೇಮಕಾತಿಗಳನ್ನು ಮಾಡಲಾಗಿದೆ.

 

ಪ್ರಕಟವಾದ ಆದೇಶದ ಪ್ರಕಾರ ಯಾರಿಗೆ ಯಾವ ನಿಗಮದ ಅಧ್ಯಕ್ಷಗಿರಿ ಸಿಕ್ಕಿದೆ?. ಎಂಬ ಪಟ್ಟಿ ಇಲ್ಲಿದೆ ನೋಡಿ….

 

* ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ – ಕೆ. ವಿ. ನಾಗರಾಜ

* ಕರಕುಶಲ ಅಭಿವೃದ್ಧಿ ನಿಗಮ – ಮಾರುತಿ ಮಲ್ಲಪ್ಪ ಅಷ್ಟಗಿ

* ಕಾಡಾ -ತುಂಗಭದ್ರಾ ಯೋಜನೆ – ಕೊಲ್ಲಾಶೇಷಗಿರಿ ರಾವ್

 

* ಕಾಡಾ -ಕಾವೇರಿ ಜಲಾನಯನ ಯೋಜನೆ – ಜಿ. ನಿಜಗುಣರಾಜು

* ಮದ್ಯಪಾನ ಸಂಯಮ ಮಂಡಳಿ – ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ

* ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ – ಎಂ. ಶರವಣ

* ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ – ದೇವೇಂದ್ರನಾಥ್

* ಕಾಡುಗೊಲ್ಲ ಅಭಿವೃದ್ಧಿ ನಿಗಮ – ಚಂಗಾವರ ಮಾರಣ್ಣ

* ರಾಜ್ಯ ಮಾವು ಅಭಿವೃದ್ಧಿ ನಿಗಮ – ಎಂ. ಕೆ. ವಾಸುದೇವ

* ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ – ಎಂ. ಕೆ. ಶ್ರೀನಿವಾಸ್

* ದ್ರಾಕ್ಷಿ ಮತ್ತು ವೈನ್ ಬೋರ್ಡ್ -ಎಂ. ರವಿನಾರಾಯಣ ರೆಡ್ಡಿ

* ರೇಷ್ಮೆ ಮಾರಾಟ ಮಂಡಳಿ – ಬಿ. ಸಿ. ನಾರಾಯಣಸ್ವಾಮಿ

* ಲಿಂಬೆ ಅಭಿವೃದ್ಧಿ ಮಂಡಳಿ – ಚಂದ್ರಶೇಖರ ಕವಟಗಿ

* ರಾಜ್ಯ ಗೇರು ಅಭಿವೃದ್ಧಿ ನಿಗಮ – ಮಣಿರಾಜ ಶೆಟ್ಟಿ

* ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ – ಗೋವಿಂದ ಜಟ್ಟಪ್ಪ ನಾಯಕ

* ಮೈಸೂರು ಮೃಗಾಲಯ ಪ್ರಾಧಿಕಾರ – ಎಂ. ಶಿವಕುಮಾರ್

* ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ – ಎನ್. ರೇವಣಪ್ಪ ಕೊಳಗಿ

* ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ – ಕೆ. ಪಿ. ವೆಂಕಟೇಶ್

* ಹಿಂದೆ ನಿಗಮಗಳ ಅಧ್ಯಕ್ಷರಾಗಿದ್ದ ರಘು ಕೌಟಿಲ್ಯ ಮತ್ತು ಮಣಿರಾಜ ಶೆಟ್ಟಿ ಅವರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ