Breaking News

ನಟ ಪುನೀತ್ ರಾಜ್ ಸಮಾಧಿ ದರ್ಶನ ಪಡೆದ ತಮಿಳು ನಟ ಸೂರ್ಯ: ಅಪ್ಪ ನೆನೆದು ಕಣ್ಣೀರು

Spread the love

ಬೆಂಗಳೂರು: ತಮಿಳಿನ ಖ್ಯಾತ ನಟ ಸೂರ್ಯ ( Tamil Actor Surya ), ಇಂದು ನಟ ಪುನೀತ್ ರಾಜ್ ಕುಮಾರ್ ( Puneet Rajkumar ) ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದರು. ರಾಜಕುಮಾರನನ್ನು ನೆನೆದು ಸಮಾಧಿ ಬಳಿಯಲ್ಲಿ ಕಣ್ಣೀರಿಟ್ಟರು.

ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಎಂಟು ದಿನಗಳಾಗುತ್ತಿವೆ. ಅಪ್ಪು ನಮ್ಮನ್ನು ಅಗಲಿದ್ದರೂ, ಅವರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಇಂತಹ ನಟ ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋಗೆ ತಮಿಳು ನಟ ಸೂರ್ಯ ಭೇಟಿ ನೀಡಿ, ಸಮಾಧಿ ದರ್ಶನ ಪಡೆದರು.

ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪುನೀತ್ ಅಗಲಿಕೆ ನೋವನ್ನು ಸಹಿಸೋದಕ್ಕೆ ಆಗ್ತಾ ಇಲ್ಲ. ಅಣ್ಣಾವ್ರ ಕುಟುಂಬದೊಂದಿಗೆ ನಮ್ಮ ಒಡನಾಟವಿತ್ತು. ಅಪ್ಪು ಅಗಲಿಕೆ ನೋವಿನಿಂದ ನಮ್ಮ ಕುಟುಂಬ ಇನ್ನೂ ಹೊರಬಂದಿಲ್ಲ. ಸದಾ ನಗುನಗುತ್ತಲೇ ಇದ್ದಂತ ಅಪ್ಪು ಮುಖ ರಾಚಿ ಕಟ್ಟಿದಂತೆ ಇದೆ ಎಂದು ಕಣ್ಣೀರಿಟ್ಟರು


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ