Breaking News

ಬೆಂಗಳೂರಿನ ಜನರಿಗೆಂದೇ ಸಿದ್ಧವಾಯ್ತು ಆಕ್ಸಿಜನ್ ಬಸ್.​..! ಪ್ರಾಣವಾಯುವಿಗಾಗಿ ಇನ್ಮುಂದೆ ಹಪಹಪಿಸಬೇಕಿಲ್ಲ

Spread the love

ರಾಜ್ಯದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿರುವ ನಡುವಲ್ಲೇ ಪ್ರಾಣವಾಯುವಿನ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ ರಾಜಧಾನಿ ಮಂದಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್​ ನೀಡಿದೆ. ಇನ್ಮುಂದೆ ರಾಜಧಾನಿಯ ಮೂಲೆ ಮೂಲೆಗಳಲ್ಲಿ ಆಕ್ಸಿ ಬಸ್​ ಸಂಚರಿಸಲಿದ್ದು ಈ ಕಾರ್ಯಕ್ರಮಕ್ಕೆ ಆರೋಗ್ಯ ಸೌಧದಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

ಇದೊಂದು ಮೊಬೈಲ್​ ಆಕ್ಸಿ ಬಸ್​ ಆಗಿದ್ದು ಬಿಬಿಎಂಪಿ ವತಿಯಿಂದ ಒಟ್ಟು 20 ಬಸ್​ಗಳನ್ನ ತಯಾರು ಮಾಡಲಾಗಿದೆ. ಟ್ರಾಸ್​​ ಎನರ್ಜಿ ಮಾಚನಿ ಗ್ರೂಪ್​ ಕೇವಲ 2 ದಿನಗಳಲ್ಲಿ ಈ ಪ್ರಾಣವಾಯು ಬಸ್​ಗಳನ್ನ ಸಿದ್ಧಪಡಿಸಿದೆ. ಇದರಲ್ಲಿ 8 ಸೀಟ್​ಗಳಿದ್ದು ಪ್ರತಿ ಸೀಟ್​ನಲ್ಲಿಯೂ ಆಕ್ಸಿಜನ್​ ಸಿಲಿಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ.

ತಮಿಳುನಾಡಿನಲ್ಲಿಯೂ ಜೆನ್​ ಇಂಟರ್​ನ್ಯಾಷನಲ್​ ಎಂಬ ಸಂಘಟನೆಯು ಶಾಲಾ ಬಸ್​ಗಳನ್ನ ಬಳಕೆ ಮಾಡಿಕೊಂಡು ಈ ರೀತಿ ಗಾಲಿ ಮೇಲೆ ಆಮ್ಲಜನಕ ಎಂಬ ಸೇವೆಯನ್ನ ಆರಂಭಿಸುವ ಮೂಲಕ ಭಾರೀ ಗಮನ ಸೆಳೆದಿತ್ತು.


Spread the love

About Laxminews 24x7

Check Also

ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು

Spread the love ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ