Breaking News

ಅಂಬೇಡ್ಕರ್​ ಕುರಿತು ಶಾ ಹೇಳಿಕೆ; ಸಂಸತ್​ ಭವನದಲ್ಲಿ ಕಾಂಗ್ರೆಸ್​ – ಬಿಜೆಪಿ ಪರಸ್ಪರ ಪ್ರತಿಭಟನೆ

Spread the love

ನವದೆಹಲಿ: ಅಂಬೇಡ್ಕರ್​ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಂಬೇಡ್ಕರ್​ ಹೇಳಿಕೆ ವಿರೋಧಿಸಿ, ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಇಂಡಿಯಾ ಒಕ್ಕೂಟದ ಸದಸ್ಯರು, ನೀಲಿ ಬಟ್ಟೆ ಧರಿಸಿ ಸಂಸತ್​ ಭವನದ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಸಂಸತ್ತಿನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಸಂಸತ್ ಭವನದವರೆಗೆ ಅಂಬೇಡ್ಕರ್​ ಭಾವಚಿತ್ರ ಹಿಡಿದು ‘ಜೈ ಭೀಮ್’ ಘೋಷಣೆ ಕೂಗುತ್ತಾ ಮೆರವಣಿಗೆ ಕೈಗೊಂಡರು.

ಕೇಂದ್ರ ಗೃಹ ಸಚಿವರು ಕ್ಷಮೆ ಕೇಳಿ, ರಾಜೀನಾಮೆ ನೀಡಬೇಕು ಎಂದು ಇಂಡಿಯಾ ಒಕ್ಕೂಟದ ಸಂಸದ ಮಕರ್​ ದ್ವಾರ್​​ ಒತ್ತಾಯಿಸಿದರು. ಶಿವಸೇನಾ (ಯುಬಿಟಿ) ನಾಯಕ ಸಂಜಯ್​ ರಾವತ್​ ಮಾತನಾಡಿ, ಅವರು ಬಾಯಿ ತಪ್ಪಿ ಅಂಬೇಡ್ಕರ್​ ಕುರಿತು ಮಾತನಾಡಿದರೆ, ಅಮಿತ್​ ಶಾ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ