Breaking News

ಕಾಳಭೈರವ ಮಂದಿರದಲ್ಲಿ ನಾಥ್ ಪಂಥಿಯ ರಾವುಳ ಸಮಾಜದ ವತಿಯಿಂದ ಶ್ರೀ ಕಾಳಭೈರವ ಜಯಂತಿಯನ್ನು ಆಚರಿಸಲಾಯಿತು.

Spread the love

ಬೆಳಗಾವಿ ಶಹಪುರದಲ್ಲಿರುವ ಶ್ರೀ ಕಾಳಭೈರವ ಮಂದಿರದಲ್ಲಿ ನಾಥ್ ಪಂಥಿಯ ರಾವುಳ ಸಮಾಜದ ವತಿಯಿಂದ ಶ್ರೀ ಕಾಳಭೈರವ ಜಯಂತಿಯನ್ನು ಆಚರಿಸಲಾಯಿತು.

ಬೆಳಗಾವಿ ಶಹಪುರದಲ್ಲಿರುವ ಶ್ರೀ ಕಾಳಭೈರವ ಮಂದಿರದಲ್ಲಿ
ಶ್ರೀ ಕಾಳ ಭೈರವ ಜಯಂತಿಯ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರದಿಂದಲೇ ಅಭಿಷೇಕ್, ಪೂಜೆ, ಮಹಾಆರತಿ, ಮಹಾಪ್ರಸಾದ ವಿತರಣೆ ಇನ್ನುಳಿದ ಕಾರ್ಯಕ್ರಮಗಳು ನಡೆದವು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂದಿರ ವ್ಯವಸ್ಥಾಪನೆ ಸಮಿತಿಯ ಸಲಹೆಗಾರ ಶ್ರೀಕಾಂತ್ ಕಾಕತಿಕರ್ ಅವರು ನಾಥ್ ಪೈ ಸರ್ಕಲ್ ನಲ್ಲಿರುವ ಶ್ರೀ ಕಾಳಭೈರವ ಮಂದಿರ ಬೆಳಗಾವಿಯ ಅತ್ಯಂತ ಹಳೆಯ ಮಂದಿರವಾಗಿದೆ. ಇದನ್ನು ಶ್ರೀ ರಾವುಳ ಮಹಾರಾಜರು ಸ್ಥಾಪಿಸಿದ್ದಾರೆ ಎಂದರು.

ಇನ್ನು ಮಂದಿರದಲ್ಲಿ ಶ್ರೀ ಕಾಳಭೈರವ ಜಯಂತಿಯ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಂಜೆ ದೀಪೋತ್ಸವ ನಡೆಯಲಿದೆ ಎಂದು ಇನ್ನೊರ್ವ ಸದಸ್ಯರು ತಿಳಿಸಿದರು.


Spread the love

About Laxminews 24x7

Check Also

ಬೆಳಗಾವಿ: ಒಂದೇ ವರ್ಷದಲ್ಲಿ ಅಪಘಾತಕ್ಕೆ 800 ಬಲಿ

Spread the loveಬೆಳಗಾವಿ: ಜಿಲ್ಲೆಯಲ್ಲಿ ಚಾಲಕರ ರ್ನಿಲಕ್ಷ$್ಯ ಮದ್ಯಸೇವನೆ ಮಾಡಿ ವಾಹನ ಚಲಾವಣೆ, ಅತಿಯಾದ ವೇಗ ಹೀಗೆ ವಿವಿಧ ಕಾರಣಗಳಿಂದ ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ