ಬೆಂಗಳೂರು: ಬಿಗ್ ಬಾಸ್(Bigg Boss Kannada-11) ಆರಂಭಗೊಂಡು ಒಂದು ದಿನ ಕಳೆದಿದೆ. ಆದರೆ ಈ ಒಂದು ದಿನದಲ್ಲಿ ಸ್ಪರ್ಧಿಗಳು ಅನೇಕ ಸಲಿ ಕಿತ್ತಾಡಿಕೊಂಡಿದ್ದಾರೆ.
ಈ ಬಾರಿ ಸ್ವರ್ಗ ಹಾಗೂ ನರಕ ಎಂಬ ಎರಡು ಮನೆಗಳಿವೆ. ನರಕದಲ್ಲಿನ 7 ಮಂದಿ, ಸ್ವರ್ಗದಲ್ಲಿನ 10 ಮಂದಿ ತಂಡದಂತೆ ಇದ್ದಾರೆ.
ಆದರೆ ಈ ತಂಡಗಳ ಒಳಗೆಯೇ ಹೊಂದಾಣಿಕೆಯಿಲ್ಲದೆ ಮಾತಿಗೆ ಮಾತು ಬೆಳೆಯುತ್ತಿದೆ.
ಮೊದಲ ದಿನ ಯಮುನಾ, ಜಗದೀಶ್ ಹಾಗೂ ಚೈತ್ರಾ ಕುಂದಾಪುರ ಅವರ ಧ್ವನಿಯೇ ಹೆಚ್ಚಾಗಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದೆ. ಉಳಿದ ಸ್ಪರ್ಧಿಗಳ ನಡುವೆಯೋ ಸಣ್ಣ ಸಣ್ಣ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ.
Laxmi News 24×7