Breaking News

ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಬಳ್ಳಾರಿ ಎಂಟ್ರಿಗೆ ಸುಪ್ರೀಂ ಕೋರ್ಟ್​ ಅಸ್ತು

Spread the love

ಳ್ಳಾರಿ: ಗಣಿನಾಡು ಎಂದೇ ಪ್ರಖ್ಯಾತಿ ಹೊಂದಿರುವ ಬಳ್ಳಾರಿ (Bellary) ಜಿಲ್ಲೆಗೆ ಪ್ರವೇಶಿಸಲು ನಿಷೇಧ ಹೇರಲಾಗಿತ್ತು. ಕಳೆದ ಒಂದೂವರೆ ದಶಕಗಳಿಂದ ಬಳ್ಳಾರಿಯತ್ತ ಸುಳಿಯದ ಹಾಲಿ ಶಾಸಕ ಜರ್ನಾದನ ರೆಡ್ಡಿಗೆ (Janardhan Reddy) ಇದೀಗ ಸುಪ್ರೀಂ ಕೋರ್ಟ್​ ಬಿಗ್ ರಿಲೀಸ್ ನೀಡಿದ್ದು, ಜಿಲ್ಲೆಯೊಳಗೆ ಪ್ರವೇಶಿಸಲು ಅನುಮತಿ ನೀಡಿದೆ.

 

ಅಕ್ರಮ ಗಣಿಗಾರಿಕೆ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿದ್ದ ಜರ್ನಾದನ ರೆಡ್ಡಿಯನ್ನು 2011ರಲ್ಲಿ ಸಿಬಿಐ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆಂಧ್ರಪ್ರದೇಶದ ಚರ್ಲಪಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಜರ್ನಾದನ ರೆಡ್ಡಿಗೆ, ಅಕ್ರಮ ಗಣಿಗಾರಿಕೆ ಮಾಡಲಾದ ಅನಂತಪುರ, ಕರ್ನೂಲು ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಕಾರಣದಿಂದ ಕಳೆದ 13 ವರ್ಷಗಳಿಂದ ತಮ್ಮ ತವರು ಜಿಲ್ಲೆಗೆ ಕಾಲಿಡದ ಹಾಲಿ ಶಾಸಕರಿಗೆ ಇದೀಗ ಸುಪ್ರೀಂ ಕೋರ್ಟ್​ ಗ್ರೀನ್ ಸಿಗ್ನಲ್​ ಕೊಟ್ಟಿದ್ದು, ಜಿಲ್ಲೆಗೆ ಪ್ರವೇಶಿಸಬಹುದು ಎಂದು ತಿಳಿಸಿದೆ.

ತಮ್ಮ ಮಗಳ ವಿವಾಹ ಮಹೋತ್ಸವ ಮತ್ತು ಹೆರಿಗೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್​ನಿಂದ ಅನುಮತಿ ಕೋರಿದ್ದ ಜರ್ನಾದನ ರಡ್ಡಿ, ನ್ಯಾಯಾಲಯದ ಅನುಮತಿ ಮೇರೆಗೆ ತವರು ಬಳ್ಳಾರಿ ಜಿಲ್ಲೆಗೆ 10 ದಿನಗಳ ಕಾಲ ಆಗಮಿಸಿ, ವಾಸ್ತವ್ಯ ಹೂಡಿದ್ದರು.

ಈ ಪ್ರಕರಣದಲ್ಲಿ ಜರ್ನಾದನ ರೆಡ್ಡಿಗೆ ಸುಪ್ರೀಂ ಕೋರ್ಟ್​ ಬಿಗ್ ರಿಲೀಫ್​ ನೀಡುತ್ತಿದ್ದಂತೆ ಹಾಲಿ ಶಾಸಕನ ಅಭಿಮಾನಿಗಳು ನಗರದ ಮುಖ್ಯ ರಸ್ತೆ ಮತ್ತು ರೆಡ್ಡಿ ನಿವಾಸದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.


Spread the love

About Laxminews 24x7

Check Also

ಪಟಾಕಿ ತಾಗಿದ್ದಕ್ಕೆ ಸಿಡಿಮಿಡಿ; ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ

Spread the loveಬೆಂಗಳೂರು: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ