Breaking News

ಬಿಯರ್ ಟಿನ್​ನಲ್ಲಿ ಸಿಲುಕಿ ಹಾವಿನ ನರಳಾಟ..

Spread the love

ಹೈದರಾಬಾದ್: ಪ್ಲಾಸ್ಟಿಕ್, ಬಿಯರ್ ಬಾಟಲ್, ಟಿನ್​ಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಅದು ಪ್ರಕೃತಿಗೆ ಮಾರಕ ಎಂದು ಅದೆಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸಹ ಜನರು ತಿಳಿದರೂ ತಿಳಿಯದಂತೆ ಇರುತ್ತಾರೆ. ಯಾರದ್ದೋ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಎನ್ನುವಂತೆ ಕುಡುಕರು ರಸ್ತೆ ಬದಿ ಬಿಸಾಡಿದ್ದ ಬಿಯರ್ ಟಿನ್​ನಲ್ಲಿ ಸಿಲುಕಿ ನಾಗರಹಾವೊಂದು ಗಂಟೆಗಟ್ಟಲೇ ವಿಲವಿಲ ಒದ್ದಾಡಿದೆ.

 

ತೆಲಂಗಾಣದ ಜ್ಯೋತಿಯಾಲ ಜಿಲ್ಲೆಯ ನಲ್ಗೊಂಡ ಪ್ರದೇಶದಲ್ಲಿ ನಾಗರಹಾವೊಂದು ಬಿಯರ್​ ಟಿನ್​ನಲ್ಲಿ ಸಿಲುಕಿ ಯಮಯಾತನೆ ಅನುಭವಿಸಿದೆ. ಮೂರು ಗಂಟೆಗೂ ಹೆಚ್ಚು ಕಾಲ ಬಿಯರ್ ಟಿನ್​ನಲ್ಲಿ ನಾಗರಹಾವಿನ ತಲೆ ಸಿಕ್ಕಿಹಾಕಿಕೊಂಡು ನರಳಾಡಿದೆ. ಬಿಯರ್ ಟಿನ್​ನಲ್ಲಿ ಸಿಲುಕಿಕೊಂಡು ನಾಗರಹಾವು ರಸ್ತೆಯಲ್ಲಿ ಅತ್ತಿಂದಿತ್ತ ಹೊರಳಾಡುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಿಯರ್​ ಟಿನ್​ನಲ್ಲಿ ಸಿಲುಕಿ ಹಾವು ಒದ್ದಾಡುವುದನ್ನು ಕಂಡ ಸ್ಥಳೀಯರು ಕೂಡಲೇ ಉರಗತಜ್ಞರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞರು ಕಾರ್ಯಾಚರಣೆ ನಡೆಸಿ ಬಿಯರ್​ ಟಿನ್​ನಿಂದ ನಾಗರಹಾವನ್ನು ಹೊರತೆಗೆದು ರಕ್ಷಿಸಿದ್ದಾರೆ. ಪ್ರಾಣಪಾಯದಿಂದ ಪಾರಾದ ನಾಗರಹಾವು ಅಲ್ಲೇ ಇದ್ದ ಪೊದೆಯೊಳಕ್ಕೆ ಓಡಿದೆ. ಸದ್ಯ ಈ ದೃಶ್ಯ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ