Breaking News

ಹುಬ್ಬಳ್ಳಿಯ ಮೂರುಸಾವಿರ ಮಠದ ಸಮೀಪದ ರಸ್ತೆ

Spread the love

ಹುಬ್ಬಳ್ಳಿ: ‘ಇದು ಸ್ಮಾರ್ಟ್‌ಸಿಟಿ ಅಂತೆ. ಇಲ್ಲಿನ ರಸ್ತೆಗಳಲ್ಲಿ ಓಡಾಡಿದ್ರೆ ಗೊತ್ತಾಗುತ್ತೆ, ಎಷ್ಟು ಸ್ಮಾರ್ಟ್‌ ಅಂತಾ…’

ಸ್ಟೇಷನ್‌ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವಿಜಯಕುಮಾರ್‌ ಎಂಬುವರು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು. ಇಲ್ಲಿನ ರಸ್ತೆಗಳ ಬಗೆಗಿರುವ ಅತೀವ ಬೇಸರ ಅವರ ಪ್ರತಿ ಮಾತಿನಲ್ಲೂ ಕಂಡುಬರುತ್ತಿತ್ತು.

‘ಹೊಸ ರಸ್ತೆ ಮಾಡ್ತೀವಿ ಅಂತಾರೆ. ಇರೋ ರಸ್ತೆ ಹಾಳು ಮಾಡ್ತಾರೆ. ಅದಕ್ಕೆ ವರ್ಷಗಟ್ಟಲೆ ಸಮಯ ತೆಗೆದುಕೊಳ್ತಾರೆ. ನಡುವೆ ಮತ್ಯಾವುದೋ ಕಾಮಗಾರಿಗಾಗಿ ರಸ್ತೆ ಅಗೀತಾರೆ. ಅದನ್ನು ಹಾಗೇ ಬಿಟ್ಟು ಹೋಗ್ತಾರೆ. ಮತ್ತೆ ರಸ್ತೆ ಹಾಳು. ಇದು ಮುಗಿಯದ ಕಥೆ. ಹುಬ್ಬಳ್ಳಿ ನಿವಾಸಿಗಳ, ವಾಹನ ಸವಾರರ ಗೋಳು ಹೇಳತೀರದು’ ಎಂದು ಬೈಕ್‌ ಸ್ಟಾರ್ಟ್‌ ಮಾಡಿ ತೆರಳಿದರು. ಮುಂದೆಯೇ ಇದ್ದ ಗುಂಡಿಯಲ್ಲಿ ಬೈಕ್‌ ಇಳಿದು, ಮೇಲೆ ಹತ್ತಿ ಸಾಗಿತು.

ಹುಬ್ಬಳ್ಳಿಯ ನಿವಾಸಿಗಳು ಹಾಗೂ ಇಲ್ಲಿ ವಾಹನ ಚಲಾಯಿಸುವ ಯಾರನ್ನೇ ಮಾತನಾಡಿಸಿದರೂ ಇಂತಹ ಆಕ್ರೋಶದ ಮಾತುಗಳೇ ಕೇಳಿಬರುತ್ತವೆ. ‘ಇಲ್ಲಿನ ಪರಿಸ್ಥಿತಿ ಹಿಂದಿನಿಂದಲೂ ಹೀಗೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಜನರ ಸಮಸ್ಯೆಯನ್ನು ಯಾರೂ ಕೇಳುವುದಿಲ್ಲ’ ಎಂಬ ನಿರಾಶಾವಾದವೂ ಬಹುತೇಕರಲ್ಲಿದೆ.

ನಗರದ ಚನ್ನಮ್ಮ ವೃತ್ತದಿಂದ ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆ, ಸ್ಟೇಷನ್ ರಸ್ತೆ, ಧಾರವಾಡಕ್ಕೆ ಹೋಗುವ ರಸ್ತೆ, ಕೊಪ್ಪಿಕರ್‌ ರಸ್ತೆ, ಜನತಾಬಜಾರ್‌, ದುರ್ಗದಬೈಲ್‌, ಶಾ ಬಜಾರ್‌, ಗಾಂಧಿ ಮಾರುಕಟ್ಟೆಯಲ್ಲಿರುವ ಪ್ರಮುಖ ರಸ್ತೆಗಳಲ್ಲೇ ಗುಂಡಿಗಳಿವೆ, ಎತ್ತರದ ಒಳಚರಂಡಿ ಚೇಂಬರ್‌ಗಳೂ ಇವೆ. ಜೆಜೆಎಂ ಪೈಪ್‌ಲೈನ್‌, ಒಳಚರಂಡಿ, ಕೇಬಲ್‌ ಅಳವಡಿಕೆಗಾಗಿ ರಸ್ತೆ ಅಗೆದಿದ್ದರಿಂದ ಉಂಟಾಗಿದ್ದ ತೊಂದರೆ ಇನ್ನೂ ಪರಿಹಾರವಾಗಿಲ್ಲ. ವಿವಿಧೆಡೆ ರಸ್ತೆಗಳನ್ನು ಇನ್ನೂ ಅಗೆಯಲಾಗುತ್ತಿದೆ. ಒಂದಿಲ್ಲೊಂದು ಕಾಮಗಾರಿ ನಡೆಯುತ್ತಲೇ ಇರುವುದರಿಂದ ಸಂಚಾರಯೋಗ್ಯ ರಸ್ತೆಗಳನ್ನು ದೀರ್ಘ ಕಾಲದವರೆಗೆ ಕಾಣಲು ಸಾಧ್ಯವಾಗುವುದೇ ಇಲ್ಲ.


Spread the love

About Laxminews 24x7

Check Also

ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ

Spread the love ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನಿಗೆ ತಲೆ ಬಾಗುತ್ತಾರೆ ಎನ್ನುವ ವಿಶ್ವಾಸವಿದೆ. ರಾಜೀನಾಮೆ ನೀಡುವುದಿಲ್ಲ ಎಂದು ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ