ಯರಗಟ್ಟಿ : ಬಾವಿಗೆ ಬಿದ್ದು ಮೇಲೆ ಬರಲಾಗದೆ ಜೀವ ಭಯದಿಂದ ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯನ್ನು ರೈತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಯರಗಟ್ಟಿ ಪಟ್ಟಣದ ಸತ್ತಿಗೇರಿ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸುತ್ತಾ ಸಂಚಾರದಲ್ಲಿದ್ದ ನವಿಲು ಶನಿವಾರ ರಾತ್ರಿಯ ವೇಳೆಗೆ ಸಮೀಪದ ಸತ್ತಿಗೇರಿ ಗ್ರಾಮದ ಭೀಮಪ್ಪ ಮಿಲ್ಲಾನಟ್ಟಿ ಎಂಬವರ ಜಮೀನಿನ ಬಾವಿಗೆ ಬಿದ್ದಿತ್ತು. ಸೋಮವಾರ ಬೆಳಗ್ಗೆ 5 ಕ್ಕೆ ಬಾವಿಯಿಂದ ನೀರು ಎತ್ತಲು ಮನೆಯವರು ಬಂದಾಗ ಒದ್ದಾಡುತ್ತಿದ್ದ ನವಿಲನ್ನು ಗಮನಿಸಿ ರೈತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು.
ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ದುರ್ಗಪ್ಪ ಅರಟಗಲ್ ಬಾವಿಗೆ ಇಳಿದು ನವಿಲನ್ನು ರಕ್ಷಿಸಿದರು.
ನವಿಲನ್ನು ಮೇಲಕ್ಕೆತ್ತಿದ್ದು ಮೇಲೆ ಬಂದ ನವಿಲು ಯರಗಟ್ಟಿ ಪಶು ಆಸ್ಪತ್ರೆ ಕರೆತಂದು ಡಾ. ಎಂ. ವಿ. ಪಾಟೀಲ ಚಿಕಿತ್ಸೆ ನೀಡಿದರು. ಚಿಕಿತ್ಸೆ ಸ್ಪಂದಿಸಿದ್ದ ನವೀಲುನ್ನು ಮರಳಿ ಕಾಡಿಗೆ ನೀಡಲಾಯಿತು.