Breaking News
Home / ಹುಬ್ಬಳ್ಳಿ / ವಾರಾಂತ್ಯಕ್ಕೆಬಸ್ಸುಗಳು ಖಾಲಿ ಖಾಲಿ

ವಾರಾಂತ್ಯಕ್ಕೆಬಸ್ಸುಗಳು ಖಾಲಿ ಖಾಲಿ

Spread the love

ಧಾರವಾಡ: ಶಕ್ತಿ ಯೋಜನೆ ಆರಂಭವಾದಾಗಿನಿಂದ ಮಹಿಳೆಯರು ಸಾರಿಗೆ ಬಸ್ಸುಗಳು ಮೂಲಕ ದೂರದ ಊರುಗಳಿಗೆ ಹಾಗೂ ದೇವಸ್ಥಾನಗಳಿಗೆ ಹೋಗುವ ಮೂಲಕ ಆ ಯೋಜನೆಯ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಮಹಿಳೆಯರೇ ಹೆಚ್ಚಾಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಬಸ್ಸುಗಳು ಫುಲ್ ರಶ್ ಆಗುತ್ತಿವೆ. ಆದರೆ, ವಾರಾಂತ್ಯದಲ್ಲಿ ಮಹಿಳೆಯರಿಲ್ಲದೇ ಧಾರವಾಡದ ಹೊಸ ಬಸ್ ನಿಲ್ದಾಣ ಖಾಲಿ ಖಾಲಿ ಕಾಣಿಸುತ್ತಿತ್ತು.

ಈ ನಿಲ್ದಾಣದಿಂದ ದೂರದ ದಾಂಡೇಲಿ, ಸವದತ್ತಿ, ವಿಜಯಪುರ ಸೇರಿದಂತೆ ಇತ್ಯಾದಿ ಊರುಗಳಿಗೆ ಹೋಗುವ ಬಸ್ಸುಗಳು ಮಹಿಳಾ ಪ್ರಯಾಣಿಕರ ಕೊರತೆ ಅನುಭವಿಸಿದವು. ವಾರಾಂತ್ಯ ಬಿಟ್ಟು ಉಳಿದ ದಿನದಲ್ಲಿ

ಈ ಬಸ್ ನಿಲ್ದಾಣ ಫುಲ್ ರಶ್ ಆಗಿರುತ್ತಿತ್ತು. ಅಲ್ಲದೇ ಬಸ್ಸುಗಳು

ಸಹ ಸಂಪೂರ್ಣ ಭರ್ತಿಯಾಗಿ ಹೋಗುತ್ತಿದ್ದವು. ಶನಿವಾರ ಮಾತ್ರ ಮಹಿಳೆಯರಿಲ್ಲದೇ ಬಸ್ಸುಗಳು ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.


Spread the love

About Laxminews 24x7

Check Also

‘ಬರ ಪರಿಹಾರ ನೀಡದೇ ಕಾಂಗ್ರೆಸ್ ದಿವಾಳಿ’

Spread the loveಹುಬ್ಬಳ್ಳಿ: ‘ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಯಾವತ್ತು ಹೇಳಿಲ್ಲ. ಕೇಂದ್ರ ಸರ್ಕಾರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ