ಧಾರವಾಡ: ಸ್ಮಶಾನ ಭೂಮಿ ನೀಡುವಂತೆ ಶವ ವಿಟ್ಟು ಆಕ್ರೋಶ ಹೊರ ಹಾಕಿರುವ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.
ತಡವಾಗಿ ಬೆಳಕಿಗೆ ಬಂದ ಪ್ರಕರಣವಾಗಿದ್ದು, ಹಲವಾರು ವರ್ಷಗಳಿಂದ ಸ್ಮಶಾನಕ್ಕೆ ಬೇಡಿಕೆಯಿಟ್ಟರೂ ಉಪಯೋಗವಾಗದೆ.
ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದಲ್ಲಿ ಗಂಗವ್ವ ಬೆಳಹಾರ(65) ನಿಧನರಾಗಿದ್ದು, ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೆ ಆಕ್ರೋಶಗೊಂಡಿದ್ದಾರೆ.
ಇನ್ನೂ ಈ ವೇಳೆ ಸ್ಥಳಕ್ಕೆ ಪೊಲೀಸರ ಆಗಮಿಸಿ ಗ್ರಾಮಸ್ಥರ ಮನವೋಲಿಕೆ ಮಾಡಲು ಮುಂದಾಗಿದ್ದರು. ಈ ಮೊದಲಿದ್ದ ಖಾಸಗಿ ಜಾಗದಲ್ಲಿನ ಸ್ಮಶಾನದಲ್ಲಿಯೇ ಅಂತ್ಯಕ್ರಿಯೆ ಮಾಡಲು ಸೂಚಿಸಿದ್ದರು.
ಆದ್ರೆ ಅದು ಖಾಸಗಿಯವರಿಗೆ ಸೇರಿದ ಜಮೀನು ಆಗಿದ್ದು ನಿರ್ಭಂಧ ಏರಿದ್ದಾರೆ. ಆದ್ದರಿಂದ ಸ್ಮಶಾನ ಭೂಮಿ ನೀಡುವಂತೆ ಶವ ವಿಟ್ಟು ಆಕ್ರೋಶ ಹೊರಹಾಕಿದ್ದಾರೆ
Laxmi News 24×7