Breaking News

Yearly Archives: 2025

ಒಂದೇ ಬಾರಿ ಎರಡು ಮದುವೆಯಾಗಿದ್ದ ವ್ಯಕ್ತಿಯೋರ್ವ ತನ್ನ ಓರ್ವ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಆಕೆಯನ್ನು ಕೊಂದು ಹಾಕಿದ್ದಾನೆ.

ಆನೇಕಲ್​​​(ಬೆಂಗಳೂರು): ಎರಡೆರಡು ಮದುವೆಯಾಗಿದ್ದ ಪತಿ ಓರ್ವ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ರಾಚಾಮಾನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಅನಿತಾ (29) ಮೃತ ಮಹಿಳೆ. ಬಾಬು (32) ಪತ್ನಿ ಕೊಂದ ಹಂತಕ. ಘಟನೆಯ ವಿವರ: 9 ವರ್ಷಗಳ ಹಿಂದೆ ಬಾಬು ಇಬ್ಬರು ಯುವತಿಯರನ್ನು ಪ್ರೀತಿಸಿ, ಒಂದೇ ದಿನ ಇಬ್ಬರಿಗೂ ತಾಳಿ ಕಟ್ಟಿದ್ದ. ಈ ಪೈಕಿ ಓರ್ವ ಪತ್ನಿ ಅನಿತಾ ಮೈಸೂರಿನ ಚಿಕ್ಕ ಮಾರ್ಕೆಟ್​ನವರು. ಪತಿ ತನ್ನ ಮೇಲೆ ದಿನನಿತ್ಯ …

Read More »

ಬೆಂಗಳೂರು ಸೇರಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಮಾರ್ಚ್​ 23ರಿಂದ ಮಳೆ(

ಬೆಂಗಳೂರು, ಮಾರ್ಚ್​ 19: ಬೆಂಗಳೂರು ಸೇರಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಮಾರ್ಚ್​ 23ರಿಂದ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವಾರದ ಹಿಂದಷ್ಟೇ ಬೆಂಗಳೂರಿನ ಕೆಲವೆಡೆ ಮಳೆಯಾಗಿತ್ತು, ಅದಾದ ಬಳಿಕ ಗರಿಷ್ಠ ತಾಪಮಾನದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೊಡಗು, ಕೋಲಾರ, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ. ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, …

Read More »

ಚಿಕ್ಕಬಳ್ಳಾಪುರ (Chikkaballapur) ಪಟ್ಟಣದ ಒಎಂಬಿ ನಗರದಲ್ಲಿನ ಜನರು ಮಾಟಮಂತ್ರದ (Black Magic) ಭೀತಿಯಲ್ಲಿ ವಾಸಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ, ಮಾರ್ಚ್​ 19: ಚಿಕ್ಕಬಳ್ಳಾಪುರ (Chikkaballapur) ಪಟ್ಟಣದ ಒಎಂಬಿ ನಗರದಲ್ಲಿನ ಜನರು ಮಾಟಮಂತ್ರದ (Black Magic) ಭೀತಿಯಲ್ಲಿ ವಾಸಿಸುತ್ತಿದ್ದಾರೆ. ನಿತ್ಯ ಬೆಳಗಾದರೆ ಕೆಲ ಅಂಗಡಿ ಮತ್ತು ಮನೆಗಳ ಮುಂದೆ ನಿಂಬೆಹಣ್ಣು, ಅರಿಶಿನ ಮತ್ತು ಕುಂಕಮ ಇರುತ್ತಿದ್ದು ಮಾಟಮಂತ್ರದ ಕುರುಹುಗಳು ಎನ್ನಲಾಗುತ್ತಿದೆ. ಇದೇ ರಸ್ತೆಯಲ್ಲಿರುವ ಶಾಂತಕುಮಾರ್ ಎಂಬುವರ ಟೈಲರಿಂಗ್ ಅಂಗಡಿ ಮುಂದೆ ಪ್ರತಿ ದಿನವೂ ಒಂದಲ್ಲ ಒಂದು ನಿಂಬೆಹಣ್ಣಿನ ತುಂಡುಗಳು, ಹರಿಶಿನ ಕುಂಕುಮದ ಕುರುಹುಗಳು ಪತ್ತೆಯಾಗುತ್ತಿದ್ದವಂತೆ. ಇದರಿಂದ ಆತಂಕಗೊಂಡ ಟೈಲರ್ ಶಾಂತಕುಮಾರ್ ಅವರು …

Read More »

ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ…ಆಗಿದ್ದೇನು?

ಶಿವಮೊಗ್ಗ, (ಮಾರ್ಚ್ 18): ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ನ್ಯಾಯಾಲ ಆದೇಶ ನೀಡಿದರೂ ಸಹ ಕೆಎಸ್​ಆರ್​ಟಿಸಿ ಕ್ಯಾರೇ ಎಂದಿಲ್ಲ. ಹೀಗಾಗಿ ಆಕ್ರೋಶಗೊಂಡ ಕೋರ್ಟ್, ಬಸ್​ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. ಅದರಂತೆ ಕೆಎಸ್ ಆರ್ ಟಿಸಿಯ ಶಿರಸಿ ಡಿಪೋದ ಕೆಎಸ್​ಆರ್​ಟಿಸಿ ಬಸನ್ನು ತಂದು ಕೋರ್ಟ್​ ಆವರಣದಲ್ಲಿ ನಿಲ್ಲಿಸಲಾಗಿದೆ. 2022ರ ಜುಲೈ 7 ರಂದು ಪತ್ರಿಕೆ ಹಂಚಲು ಹೋಗಿದ್ದ ಗಣೇಶ್ ಎನ್ನುವಾತನಿಗೆ ಸಾಗರದ ಪ್ರವಾಸಿ ಮಂದಿರದ ಎದುರು ಶಿರಸಿ …

Read More »

ಗಂದಿಗವಾಡ ಕೆರೆದಂಡೆಯ ರಸ್ತೆ ದುರಸ್ತಿಗೆ ಆಗ್ರಹ ಖಾನಾಪೂರ ತಾಲೂಕು ಗಂದಿಗವಾಡ ಗ್ರಾಮ

ಹಾಳಾಗಿರುವ ಕೆರೆ ದಂಡೆಯ ರಸ್ತೆ ದುರಸ್ತಿಗೆ ಆಗ್ರಹ ದೊಡ್ಡ ಕೆರೆಯ ದಂಡೆ ಕೊರೆದು ಕಿರಿದಾಗಿರುವ ರಸ್ತೆ ಅಪಾಯದ ಅಂಚಿನಲ್ಲಿ ಗ್ರಾಮ ಸಂಪರ್ಕಿಸುವ ಮುಖ್ಯ ರಸ್ತೆ ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದ ದೊಡ್ಡ ಕೆರ ದಂಡೆಯ ಮಣ್ಣು ಕುಸಿದು ಗ್ರಾಮವನ್ನು ಸಂಪರ್ಕಿಸುವ ಮುಖ್ಯರಸ್ತೆ ಹಾಳಾಗಿದ್ದು ದೋಸ್ತಿಗೊಳಿಸಲು ಗ್ರಾಮಸ್ಥರು ಹಾಗೂ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ ನೀರಿನ ರಭಸಕ್ಕೆ ಕೊರೆದು ಮಣ್ಣು ಕುಸಿದು ದಂಡೆಗಳು ಹಾಳಾಗಿದ್ದು ರಸ್ತೆ ಕಿರಿದಾಗಿದೆ ಇದರಿಂದ ಅಪಾಯಕ್ಕೆ …

Read More »

ಚರಂಡಿಯಿಲ್ಲದೇ ಜನವಸತಿಗೆ ನುಗ್ಗಿದ ಚರಂಡಿ ನೀರು…

ಚರಂಡಿಯಿಲ್ಲದೇ ಜನವಸತಿಗೆ ನುಗ್ಗಿದ ಚರಂಡಿ ನೀರು… ಕ್ಯಾರೆ ಎನ್ನದ ಸಂಬಂಧಿಸಿದವರು…ಹಿಡಿಶಾಪ ಹಾಕಿದ ಜನರು ಈ ನಗರದಲ್ಲಿ ಚರಂಡಿಗಳಿಲ್ಲದೇ ಕಳೆದ 7-8 ತಿಂಗಳುಗಳಿಂದ ರಸ್ತೆಯ ಮೇಲೆ ಕಲುಷಿತ ನೀರು ಹರಿಯುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಓಡಾಡುವ ರಸ್ತೆಗೆ ಹೊಂದಿಕೊಂಡೇ ಇರುವ ಈ ಪ್ರದೇಶದ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಡೋಂಟ್‌’ಕೇ‌ರ್ ಎನ್ನುತ್ತಿದ್ದು, ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

Read More »

ಸಂಕೇಶ್ವರ SDVS ಸಂಘದಿಂದ ಮಾನಿನಿ ಕಾರ್ಯಕ್ರಮ ಆಯೋಜನೆ

ಹುಕ್ಕೇರಿ : ಸಂಕೇಶ್ವರ SDVS ಸಂಘದಿಂದ ಮಾನಿನಿ ಕಾರ್ಯಕ್ರಮ ಆಯೋಜನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಅನ್ನಪೂರ್ಣ ಇನ್ಸ್ಟಿಟ್ಯೂಟ್ ಆಪ್ ಮ್ಯಾನೆಜ್‌ಮೆಂಟ್‌ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಮಾರ್ಚ 18 ರಂದು ಮಾನಿನಿ – 2025 ಕಾರ್ಯಕ್ರಮ ಆಯೋಜಿಸಲಾಗಿದೆ. ಮಾದ್ಯಮಗಳೊಂದಿಗೆ ಮಾತನಾಡಿದ ವ್ಯವಸ್ಥಾಪಕ ನಿರ್ದೆಶಕಿ ಶ್ರೀಮತಿ ವಿದ್ಯಾ ಸ್ವಾಮಿ ಮಹಿಳಾ ದಿನಾಚಾರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗನನಿಯ ಸಾಧನೆ ಮಾಡಿದ ಮಹಿಳೆಯರ ಸಾಕ್ಷ್ಯ ಚಿತ್ರಗಳೊಂದಿಗೆ ಸುಮಾರು ಒಂದನೂರು ಬೇರೆ …

Read More »

ಬೀಡಿ -ಕಿತ್ತೂರು ಮುಖ್ಯ ರಸ್ತೆ ಇದು ಕಚರಾ ಡಿಪೋನೋ ಅಥವಾ ಬೀಡಿ ಗ್ರಾಮದ ರಸ್ತೆಯೋ???

ಇದು ಕಚರಾ ಡಿಪೋನೋ ಅಥವಾ ಬೀಡಿ ಗ್ರಾಮದ ರಸ್ತೆಯೋ??? ಮಾಧ್ಯಮಗಳಲ್ಲಿ ವರದಿ ಪ್ರಸಾರವಾದರೂ ಅಧಿಕಾರಿಗಳು ಡೋಂಟ್ ಕೇರ್… ಖಾನಾಪೂರ ತಾಲೂಕಿನ ಬೀಡಿ ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಬೀಡಿ -ಕಿತ್ತೂರು ಮುಖ್ಯ ರಸ್ತೆಯ ಬದಿಯಲ್ಲಿ ಎಸೆಯಲಾಗುತ್ತಿದ್ದು, ಇದರಿಂದಾಗಿ ರಸ್ತೆಯಲ್ಲಿ ಓಡಾಡುವ ಜನರು, ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದರೂ ಕೂಡ ಗ್ರಾ.ಪಂ. ಅಧಿಕಾರಿಗಳಾಗಲಿ, ಪಿಡಿಓಗಳಾಗಲಿ ಕ್ಯಾರೆ ಎನ್ನುತ್ತಿಲ್ಲ. ಪ್ರತಿನಿತ್ಯವೂ ಸಾವಿರಾರು ಜನ ಸಂಚರಿಸುವ …

Read More »

ವಿಜಯಪುರದಲ್ಲಿ ಮೆಚ್ಚಿನ ಅಪ್ಪುವಿನ ಜನ್ಮದಿನಾಚರಣೆ

ವಿಜಯಪುರದಲ್ಲಿ ಮೆಚ್ಚಿನ ಅಪ್ಪುವಿನ ಜನ್ಮದಿನಾಚರಣೆ:ಪ್ರಸಾದ ವಿತರಣಾ ಕಾರ್ಯದಲ್ಲಿ ಅಪ್ಪುಗೆ ನಮನ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ 50ನೇ ವರ್ಷದ ಜನ್ಮದಿನ ಹಿನ್ನಲೆಯಲ್ಲಿ ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿನ ಗಜಾನನ ಮಹಾಮಂಡಳದ ವತಿಯಿಂದ ಜನ್ಮದಿನವನ್ನು ಆಚರಿಸಲಾಯಿತು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆಯುವ ಮಹಾಮಂಡಳದಿಂದ ಪ್ರತಿ ಸೋಮವಾರ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಬಡವರಿಗೆ ಅನ್ನ ಪ್ರಸಾದ ವಿತರಿಸಲಾಗುತ್ತದೆ. ಈ ಸೋಮವಾರ ನಟ ದಿವಂಗತ ಪುನೀತ …

Read More »

15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಕರ್ನಾಟಕದ ತಂಡ…

15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಕರ್ನಾಟಕದ ತಂಡ… ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಬೆಳಗಾವಿಯ ದೇಹದಾರ್ಢ್ಯಪಟುಗಳು… ಇದೇ ತಿಂಗಳು ನಡೆಯಲಿರುವ 15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆ 2025ರಲ್ಲಿ ಕರ್ನಾಟಕದ ತಂಡವು ಭಾಗವಹಿಸಲಿದ್ದು, ಈ ತಂಡಕ್ಕೆ ಬೆಳಗಾವಿ ಸೇರಿದಂತೆ ವಿವಿಧೆಡೆ ದೇಹದಾರ್ಢ್ಯಪಟುಗಳು ಆಯ್ಕೆಯಾಗಿದ್ದಾರೆ. ಇದೇ ತಿಂಗಳ 29 ಮತ್ತು 30 ರಂದು ಛತ್ತೀಸಗಢದ ಬಿಲಾಸಪುರದಲ್ಲಿ ನಡೆಯಲಿರುವ 15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆ 2025ರಲ್ಲಿ ಕರ್ನಾಟಕ …

Read More »