Breaking News

Yearly Archives: 2025

ಜಾತಿ ಗಣತಿಯಿಂದ ಹಾನಿಯಾಗುತ್ತಿದ್ದರೆ ಪೂರ್ವಾಲೋಚನೆ ಅಗತ್ಯ: ಶಿವಾನಂದ ಪಾಟೀಲ*

 ಮಾಜಿ ಸಚಿವ ಶ್ರೀರಾಮುಲು ಅವರಿಗೆ ಅವರ ಪಕ್ಷದಲ್ಲಿ ಏನು ನಡೆದಿದೆ ಎಂಬುದು ಗೊತ್ತಿಲ್ಲ ಎಂಬಂತೆ ಕಾಣುತ್ತಿದೆ ಎಂದು ಜವಳಿ, ಸಕ್ಕರೆ, ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ವ್ಯಂಗ್ಯವಾಡಿದರು. ವಿಜಯಪುರ ನಗರದಲ್ಲಿ ಶನಿವಾರ ಮಾದ್ಯಮಗಳ ಜೊತೆಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿಕೆಶಿ ಮಧ್ಯೆ ಗಲಾಟೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ತಮಗೆ ಗೊತ್ತಿದೆಯಲ್ಲ, ಅದನ್ನು ಮೊದಲು ಶ್ರೀರಾಮುಲು …

Read More »

ಕುಡಿಯುವ ನೀರಿಗೆ ಹಾಹಾಕಾರ: ಸಚಿವ ಎಂಬಿಪಿ, ಶಾಸಕ ವಿಠ್ಠಲ ಕಟಕದೊಂಡ ವಿರುದ್ಧ ಗ್ರಾಮಸ್ಥರ ಆಕ್ರೋಶ*

ಕುಡಿಯುವ ನೀರಿಗೆ ಹಾಹಾಕಾರ: ಸಚಿವ ಎಂಬಿಪಿ, ಶಾಸಕ ವಿಠ್ಠಲ ಕಟಕದೊಂಡ ವಿರುದ್ಧ ಗ್ರಾಮಸ್ಥರ ಆಕ್ರೋಶ* ಬೇಸಿಗೆ ಬಿಸಿಲಿನ ತಾಪದ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ನಡುವೆ ಮಡಸನಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಕೆರೆಗೆ ನೀರು ಹರಿಸುವಂತೆ ರೈತರು ಒತ್ತಾಯ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಕನ್ನೂರು ಹಾಗೂ ಮಡಸನಾಳ ಗ್ರಾಮದ ರೈತರು ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿದ್ದಾರೆ. ಜನ, ಜಾನುವಾರುಗಳು ಕುಡಿಯುವ ನೀರಿಗೆ …

Read More »

ಜನಿವಾರ ತಗೆಸಿದ ಪ್ರಕರಣ. ಮೊದಲು ನೋಟಿಸ್ ನೀಡಬೇಕು ಎಂದ ಸಚಿವ ಸಂತೋಷ ಲಾಡ್

ಧಾರವಾಡದಲ್ಲಿ ಜನಿವಾರ ತಗೆಸಿದ ಪ್ರಕರಣ. ಸರ್ಕಾರಿ ನೌಕರರು ಇದ್ದರೆ ಚೆಕ್ ಮಾಡ್ತೇವೆ. ಖಾಸಗಿ ಸಂಸ್ಥೆ ಇದ್ರೆ ಅವರ ಮನಸ್ಥಿತಿ ಸರಿಯಿರಲ್ಲಾ. ಸಂಸ್ಥೆ ಗೆ ಮೊದಲು ನೋಟಿಸ್ ನೀಡಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ನಗರದಲ್ಲಿಂದು ಧಾರವಾಡದಲ್ಲಿ ಜನಿವಾರ ತಗೆಸಿದ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ ಅವರು. ಖಾಸಗಿ ಸಂಸ್ಥೆಯಲ್ಲಿ ಮಾಡಿದ್ರೆ ಏನು ಮಾಡೋಕೆ ಆಗುತ್ತೆ. ಮೊದಲು ಸಂಸ್ಥೆ ನಡೆಸೋರಿಗೆ ನೋಟಿಸ್ ನೀಡಬೇಕು. ಅದಕ್ಕೆ ಲಿಖಿತ ರೂಪದಲ್ಲಿ ದೂರು ನೀಡಿದ್ರೆ ಅವರ …

Read More »

ಬೆಳಗಾವಿಯಲ್ಲಿ 295ನೇ ಶಾಖೆಯನ್ನು ಆರಂಭಿಸಿದ ಎಸ್.ಎಸ್. ಮೊಬೈಲ್ಸ್…

ಬೆಳಗಾವಿಯಲ್ಲಿ 295ನೇ ಶಾಖೆಯನ್ನು ಆರಂಭಿಸಿದ ಎಸ್.ಎಸ್. ಮೊಬೈಲ್ಸ್… ಬೆಳಗಾವಿ ಸ್ಮಾರ್ಟ್ ಸಿಟಿಯ ಜನರಿಗೆ ಸ್ಮಾರ್ಟಾಗಿರುವ ಹೊಸ ಹೊಸ ಮೊಬೈಲ್ಸ್’ಗಳನ್ನು ಆಕರ್ಷಕ ಆಫರ್’ಗಳನ್ನು ನೀಡಲು ಈಗ ಬೆಳಗಾವಿಯಲ್ಲಿ ಕಾಲಿಟ್ಟಿದೆ ಎಸ್.ಎಸ್. ಮೊಬೈಲ್ಸ್… ಹೌದು, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆ ತನ್ನ ವಿಶ್ವಾಸನೀಯ ಸೇವೆಯಿಂದ ಗ್ರಾಹಕರ ಪ್ರೀತಿಗೆ ಪಾತ್ರವಾದ ಎಸ್.ಎಸ್. ಮೊಬೈಲ್ಸ್’ನ 295ನೇ ಶಾಖೆ ಬೆಳಗಾವಿಯ ಕಾಲೇಜ್ ರೋಡಿನಲ್ಲಿ ಆರಂಭಗೊಂಡಿದೆ. ಎಸ್.ಎಸ್ ಮೊಬೈಲ್ಸ್’ನಲ್ಲಿ ಕೇವಲ ಮೊಬೈಲ್ಸ್ ಅಷ್ಟೇ ಅಲ್ಲದೇ, ವಿವಿಧ ಏಕ್ಸಸರಿಗಳು, ಸ್ಮಾರ್ಟ್ …

Read More »

ಕೃಷಿಕರ ನಗರ ಪ್ರದೇಶದ ವಲಸೆಯಿಂದ ಕೃಷಿಗೆ ಪೆಟ್ಟು: ಸಿ.ಎಂ ಸಿದ್ದರಾಮಯ್ಯ*

ಕೃಷಿಕರ ನಗರ ಪ್ರದೇಶದ ವಲಸೆಯಿಂದ ಕೃಷಿಗೆ ಪೆಟ್ಟು: ಸಿ.ಎಂ ಸಿದ್ದರಾಮಯ್ಯ* *ಒಣ ಬೇಸಾಯ‌ ಮಾಡುವ ರೈತರೇ ಹೆಚ್ಚು: ಸಮಗ್ರ ಕೃಷಿ-ಕೃಷಿಕರ ಪ್ರಗತಿಗೆ ಕ್ರಮ: ಸಿ.ಎಂ* *ರೈತರು, ಶಿಕ್ಷಕರು, ಸೈನಿಕರು ದೇಶದ ರಕ್ಷಕರು: ಸಿಎಂ* *ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ನಾಳೆಯೇ ಮಹದಾಯಿ ಯೋಜನೆ ಜಾರಿ: ಸಿ.ಎಂ ಪುನರುಚ್ಚಾರ* ಬೆಳಗಾವಿ : ರೈತರು, ಶಿಕ್ಷಕರು, ಸೈನಿಕರು ದೇಶದ ರಕ್ಷಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ಇಲಾಖೆ ಸಹಾಯಧನದ …

Read More »

ತಮ್ಮ ಮೇಲೆ ಗುಂಡಿನ ದಾಳಿ ಮಾಡಿದವರ ಹೆಸರು ಬಿಚ್ಚಿಟ್ಟ ರಿಕ್ಕಿ ರೈ

ರಾಮನಗರ, ಏಪ್ರಿಲ್​ 20: ಬೆಂಗಳೂರು (Bengaluru) ಭೂಗತಲೋಕದ ಮಾಜಿ ಡಾನ್​ ಮುತ್ತಪ್ಪ ರೈ (Muthappa Rai) ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಆದರೆ ರಿಕ್ಕಿ ರೈ (Ricky Rai) ಜಸ್ಟ್ ಮಿಸ್ ಆಗಿದ್ದು, ಕೊಲೆ ಯತ್ನದ ಹಿಂದೆ ಸಾಕಷ್ಟು ಸಂಶಯ ಹುಟ್ಟಿಕೊಂಡಿದೆ. ಫೈರಿಂಗ್​ನಲ್ಲಿ ಗಾಯಗೊಂಡಿರುವ ರಿಕ್ಕಿ ರೈ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮಣಿಪಾಲ್​ ಆಸ್ಪತ್ರೆಗೆ ತೆರೆಳಿ ರಿಕ್ಕಿ ರೈ ಹೇಳಿಕೆ‌ …

Read More »

ವಾಯು ವಿಹಾರಕ್ಕೆ ಹೋಗಿದ್ದ ನಗರಸಭೆ ಮಾಜಿ ಸದಸ್ಯನ ಬರ್ಬರ ಹತ್ಯೆ

ಕಾರವಾರ, ಏಪ್ರಿಲ್ 20: ದುಷ್ಕರ್ಮಿಗಳು ಚಾಕುವಿನಿಂದ ಇರಿದು ನಗರಸಭೆ ಮಾಜಿ ಸದಸ್ಯನನ್ನು ಕೊಲೆ (kill) ಮಾಡಿ ಪರಾರಿ ಆಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಎಸ್​ಎನ್​ಎಲ್​ ಕಚೇರಿ ಬಳಿ‌ ನಡೆದಿದೆ. ಸತೀಶ್ ಕೋಳಂಕರ್ ಕೊಲೆಯಾದ ನಗರಸಭೆ ಮಾಜಿ ಸದಸ್ಯ (Council Member). ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಚಾಕು ಇರಿಯಲಾಗಿದ್ದು, ತಕ್ಷಣ ಸತೀಶ್​ರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕಾರವಾರ …

Read More »

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ

ರಾಯಚೂರು, ಏಪ್ರಿಲ್​ 20: ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ಮಂತ್ರಾಲಯ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಿವಾರ ಹಾಕಿಕೊಳ್ಳೋದು ಧರ್ಮ ಮತ್ತು ಸಂಪ್ರದಾಯದ ಸಂಕೇತವಾಗಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದು ಖಂಡನೀಯವಾಗಿದೆ. ಸಂವಿಧಾನದಲ್ಲಿ ಅವರವರ ಸಂಪ್ರದಾಯ ಆಚರಿಸುವ ಅವಕಾಶ ಇದೆ. ದೇಶದ ಸಂವಿಧಾನದ ಬಗ್ಗೆ ಮಾತನಾಡುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಂವಿಧಾನದ ವಿಚಾರ ಹರಣ ಕೆಲಸವಾಗುತ್ತಿದೆ. ಈ ದ್ವಂದ್ವ ನಿಲುವು ಖಂಡನೀಯ …

Read More »

ಮಜಲಟ್ಟಿ ಕ್ರಾಸ್ ಬಳಿ ಭೀಕರ ಅಪಘಾತ.

ಮಜಲಟ್ಟಿ ಕ್ರಾಸ್ ಬಳಿ ಭೀಕರ ಅಪಘಾತ. ಗಾಯಾಳುಗಳ ಸಹಾಯಕ್ಕೆ ಧಾವಿಸಿ ಮಾನವಿಯತೆ ಮೆರೆದ ಎಂಎಲ್‌ಸಿ ನಾಗರಾಜ ಯಾದವ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಕ್ರಾಸ್. ಟ್ಯಾಂಕರ್ ಹಾಗೂ ಕಾರ್ ನಡುವೆ ಸಂಭವಿಸಿದ ಅಪಘಾತ. ಕಾರ್‌ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ‌. ಬೆಳಗಾವಿಯಿಂದ ಚಿಕ್ಕೋಡಿಯ ಗೊಲ್ಲರ ಸಮಾವೇಶದಲ್ಲಿ ಭಾಗಿಯಾಗಲು ತೆರಳುತ್ತಿದ್ದ ಎಂಎಲ್‌ಸಿ ನಾಗರಾಜ ಯಾದವ್. ಮಾರ್ಗಮಧ್ಯೆ ಕಂಡ ಅಪಘಾತಕ್ಕೆ ಮಿಡಿದ ಎಂಎಲ್‌ಸಿ ನಾಗರಾಜ ಯಾದವ್. ಕೂಡಲೇ ಸ್ಥಳೀಯ ನಾಯಕರಿಗೆ ಫೋನ್ ಮಾಡಿ …

Read More »

ವಿಮಾನಕ್ಕೆ ಗುದ್ದಿದ ಟಿಟಿ ವಾಹನ

ದೇವನಹಳ್ಳಿ, ಏಪ್ರಿಲ್​ 20: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ಬಳಿಯ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ (Kempegowda Airport) ಸಾಲು ಸಾಲು ಅಪಘಾತಗಳು ಸಂಭವಿಸಿವೆ. ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ರನ್ ವೇನಲ್ಲಿರುವ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದಿರುವಂತಹ ಘಟನೆ ಕೂಡ ನಡೆದಿದೆ. ಸದ್ಯ ಈ ಎರಡು ಘಟನೆಗಳಿಂದು ಏರ್​ಪೋರ್ಟ್​ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ …

Read More »