Breaking News

Yearly Archives: 2025

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಈ ಬಾರಿ ಅತಿ ಹೆಚ್ಚು ಅತಿಥಿಗಳ ಆಗಮನ

ಆನೇಕಲ್​​(ಬೆಂಗಳೂರು): ಫೆಬ್ರವರಿ 15ರಿಂದ ನವೆಂಬರ್​ವರೆಗೆ ಈ ವರ್ಷದಲ್ಲಿ ಹೊಸ ಹೊಸ ಮರಿಗಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಾಕ್ಷಿಯಾಗಿ ಹೊಸ ಭಾಷ್ಯ ಬರೆಯಿತು. ಫೆಬ್ರವರಿ 15ರಲ್ಲಿ ಹುಲಿ ‘ಅರುಣ್ಯ’ ಎರಡು ಆರೋಗ್ಯಕರ ಮರಿಗಳಿಗೆ ಜನ್ಮ ನೀಡಿದ್ದು, ಉದ್ಯಾನವನದ ಹುಲಿ ಸಂರಕ್ಷಣೆಗಳಿಗೆ ಪ್ರೋತ್ಸಾಹದಾಯಕ ಬೆಳವಣಿಗೆಯಾಗಿ ನಾಂದಿ ಹಾಡಿತು. ಇದರ ನಂತರ ಮಾರ್ಚ್ 5ರಂದು ಎರಡು ಕಾಡು ಬೆಕ್ಕು ಮರಿಗಳ ಜನನ. ಇವುಗಳ ಜೊತೆಗೆ, ಸಿಂಹಿಣಿ ‘ಸಾವಿತ್ರಿ’ ಮೇ 30ರಂದು ಆರೋಗ್ಯಕರ ಮರಿಗೆ ಜನ್ಮ ನೀಡಿತ್ತು. …

Read More »

ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಪಡೆಯಲು ಹಸು ಮಾರಿದ ರೈತ!

ಹಾಸನ : ಮಾಹಿತಿ ಹಕ್ಕು ಕಾಯ್ದೆಯಡಿ ಶುಲ್ಕ ಕಟ್ಟಿ ದಾಖಲಾತಿ ಪಡೆಯುವುದಕ್ಕಾಗಿ, ಹಣ ಹೊಂದಿಸಲು ಸಾಧ್ಯವಾಗದೇ ರೈತರೊಬ್ಬರು ತನ್ನ ಒಂದು ಹಸುವನ್ನೇ ಮಾರಾಟ ಮಾಡಿರುವ ವಿಶೇಷ ಘಟನೆಯೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹೌದು, ಸರ್ಕಾರಿ ಕಚೇರಿಗಳಿಗೆ ವಿನಾಕಾರಣ ಅಲೆದಾಡಿಸುವ ಅಧಿಕಾರಿಗಳ ಪ್ರವೃತ್ತಿಯಿಂದ ಬೇಸತ್ತ ರೈತರೊಬ್ಬರು, ಮಾಹಿತಿ ಹಕ್ಕು ಕಾಯ್ದೆಯಡಿ ಗ್ರಾಮ ಪಂಚಾಯತಿಯೊಂದರ ಕಾಮಗಾರಿಗಳಿಗೆ ಸಂಬಂಧಿಸಿದ ಸಾವಿರಾರು ಪುಟಗಳ ದಾಖಲಾತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ಹಸು ಮಾರಾಟದಿಂದ ಬಂದ ಹಣದಿಂದ …

Read More »

ನಿಪ್ಪಾಣಿ ಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿರಕ್ತದಾನಶಿಬಿರಕ್ಕೆ ಶ್ರೀ ಬಸವಪ್ರಸಾದ ಜೊಲ್ಲೆ ಚಾಲನೆ

ರಕ್ತದಾನ ಶ್ರೇಷ್ಠದಾನ!ನಿಪ್ಪಾಣಿ ಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿ ನನ್ನ ಜನ್ಮ ದಿನದ ಪ್ರಯುಕ್ತ ಪಕ್ಷದ ಕಾರ್ಯಕರ್ತರು ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಶ್ರೀ ಬಸವಪ್ರಸಾದ ಜೊಲ್ಲೆ ಯವರು ಚಾಲನೆ ನೀಡಿದರು. ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವುದು ಮತ್ತು ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.ಇದೇವೇಳೆ ರಕ್ತದಾನ ಮಾಡಿದವರಿಗೆ ಹೆಲ್ಮೆಟ್ ವಿತರಿಸಿದರು. ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ಶ್ರೀ ಶರದ ಜಂಗಟೆ,ಶ್ರೀ ಜೀತು ಪಾಟೀಲ,ಶ್ರೀ ಬಿ.ಕೆ ಮಹಾಜನ ಶ್ರೀ ಅಜೀತ …

Read More »

ಸಂಕೇಶ್ವರ–ಸದಲಗಾ ಮಾರ್ಗದ ಮರುಡಾಂಬರೀಕರಣ ಕಾಮಗಾರಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ

ಇಂದು ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಅಂಕಲಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಡಿ, ಸುಮಾರು ₹3 ಕೋಟಿ ವೆಚ್ಚದ ರಾಜ್ಯ ಹೆದ್ದಾರಿ–97ರ ಸಂಕೇಶ್ವರ–ಸದಲಗಾ ಮಾರ್ಗದ ಮರುಡಾಂಬರೀಕರಣ ಕಾಮಗಾರಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು ಅದೇ ರೀತಿ, ಕಮತನೂರ ಗ್ರಾಮದಲ್ಲಿ ಶ್ರೀ ದುರದುಂಡೀಶ್ವರ ಮಠದ ಹತ್ತಿರ ಇರುವ ಹಳ್ಳಕ್ಕೆ ಸ್ಥಳೀಯ ಜನರ ಸುಗಮ ಸಂಚಾರಕ್ಕೆ ಅಂದಾಜು ₹34 ಲಕ್ಷ ವೆಚ್ಚದ ಕಾಲಸುಂಕ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಿದರು. ಈ …

Read More »

ಬಿಡಿಸಿಸಿ (BDCC) ಬ್ಯಾಂಕ್‌ನ ನಿರ್ದೇಶಕನಾಗಿ ಆಯ್ಕೆಯಾದ ಬಳಿಕ, ಆಡಳಿತ ಮಂಡಳಿಯ ಮೊದಲ ಸಭೆ

ಬೆಳಗಾವಿ: ಬಿಡಿಸಿಸಿ (BDCC) ಬ್ಯಾಂಕ್‌ನ ನಿರ್ದೇಶಕನಾಗಿ ಆಯ್ಕೆಯಾದ ಬಳಿಕ, ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಪಾಲ್ಗೊಂಡೆನು. ಈ ವಿಶೇಷ ಸಂದರ್ಭದಲ್ಲಿ ಬ್ಯಾಂಕ್‌ನ ಸಿಬ್ಬಂದಿ ಹಾಗೂ ಯೂನಿಯನ್ ವತಿಯಿಂದ ನೀಡಲಾದ ಆತ್ಮೀಯ ಗೌರವ ಸನ್ಮಾನವನ್ನು ಸ್ವೀಕರಿಸಿದೆ. ​ಈ ಜವಾಬ್ದಾರಿಯುತ ಸ್ಥಾನದ ಮೂಲಕ ಬ್ಯಾಂಕ್‌ನ ಸಮೃದ್ಧಿ, ಪಾರದರ್ಶಕತೆ ಮತ್ತು ಜನಕೇಂದ್ರಿತ ಸೇವೆಗಾಗಿ ಮತ್ತಷ್ಟು ಬದ್ಧತೆಯಿಂದ ಕೆಲಸ ಮಾಡುವ ಸಂಕಲ್ಪವನ್ನು ಇದೇ ವೇಳೆ ಮಾಡಲಾಯಿತು. ​ಈ ಸಂದರ್ಭದಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ, …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.

  ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲ್ಲೂಕಿನ ವೆಂಕಟಾಪೂರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ …

Read More »

ನಾವು ಡಿಸಿಎಂ ಮಾಡದಿದ್ದರೆ ಕಾಂಗ್ರೆಸ್ ಸಿದ್ದರಾಮಯ್ಯರನ್ನು ಮೂಸಿ ನೋಡುತ್ತಿರಲಿಲ್ಲ: ಹೆಚ್.​ಡಿ.ಕುಮಾರಸ್ವಾಮಿ

ಬೆಂಗಳೂರು: ನಾವು ಡಿಸಿಎಂ ಮಾಡದೇ ಇದಿದ್ದರೆ ಕಾಂಗ್ರೆಸ್ ಅವರನ್ನು ಮೂಸಿ ನೋಡುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಪಕ್ಷದಲ್ಲಿ ರಾಜಕೀಯ ಜನ್ಮ ಪಡೆದು ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ ಬೇರೆ ಪಕ್ಷಕ್ಕೆ ಜಂಪ್​ ಮಾಡಿದ ವ್ಯಕ್ತಿ, ನನ್ನ ರಾಜಕೀಯ ಉದ್ಧಾರಕ್ಕೆ ಮತ್ತೊಬ್ಬರು ಕಾರಣರು ಅಂತ ಕೋಲಾರದಲ್ಲಿ ಹೇಳಿದ್ದರು. ನಿನ್ನೆ ಚಾಮರಾಜನಗರದಲ್ಲಿ ಇದೇ …

Read More »

5 ವರ್ಷ ಇರುವುದಾಗಿ ಸಿಎಂ ಹೇಳಿದ್ದಾರೆ, ಅವರು ಹೇಳಿದ್ದನ್ನು ನಾವು ಚಿಕ್ಕವರು ಗೌರವದಿಂದ ಕೇಳಬೇಕು: ಡಿಸಿಎಂ

ಬೆಂಗಳೂರು: ಮುಖ್ಯಮಂತ್ರಿಗಳು ಐದು ವರ್ಷ ಇರುವುದಿಲ್ಲ ಎಂದು ನಾವುಗಳು ಹೇಳಿಲ್ಲ. ಅವರೇ ತಾನು ಐದು ವರ್ಷ ಇರುವುದಾಗಿ ಹೇಳಿದ್ದಾರೆ. ದೊಡ್ಡವರು ಹೇಳಿದ ಮೇಲೆ, ನಾವು ಚಿಕ್ಕವರು ಗೌರವದಿಂದ ಕೇಳಿಕೊಂಡು ನಮ್ರತೆಯಿಂದ ಇರಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿಎಂ ನುಡಿದಂತೆ ನಡೆಯುತ್ತಿದ್ದಾರಾ ಎಂಬ ಮಾಧ್ಯಮ ಪ್ರಶ್ನೆಗೆ, ಅವರು ಎಲ್ಲವನ್ನು ಹೇಳಿದ್ದಾರಲ್ಲ. ಮುಖ್ಯಮಂತ್ರಿಯವರ ಅಧಿಕಾರವನ್ನು ನಾವುಗಳು ಯಾರೂ ಪ್ರಶ್ನೆ ಮಾಡಿಲ್ಲ. ಸಂಪುಟ ಪುನಾರಚನೆ ಬಗ್ಗೆ …

Read More »

ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ನಡೆ ವಿರೋಧಿಸಿ ಧಾರವಾಡ AIDSO ಪ್ರೊಟೆಸ್ಟ್…. ರಾಜ್ಯದಲ್ಲಿ ಮತ್ತೊಂದು ನವೋದಯ ಚಳುವಳಿ ಆರಂಭಿಸಲು ಶಶಿಕಲಾ ಮೇಟಿ ಕರೆ.

ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ನಡೆ ವಿರೋಧಿಸಿ ಧಾರವಾಡ AIDSO ಪ್ರೊಟೆಸ್ಟ್…. ರಾಜ್ಯದಲ್ಲಿ ಮತ್ತೊಂದು ನವೋದಯ ಚಳುವಳಿ ಆರಂಭಿಸಲು ಶಶಿಕಲಾ ಮೇಟಿ ಕರೆ. ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳಡಿ ಸುತ್ತಲಿನ ಶಾಲೆಗಳ ವಿಲೀನದೊಂದಿಗೆ 25,000ಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ಕಂಟಕ ತಂದೊಡ್ಡಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಹಾಗೂ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರ ಕೈ ಬೀಡುವಂತೆ ಆಗ್ರಹಿಸಿ, ಧಾರವಾಡದಲ್ಲಿ ಇಂದು AIDSO ವಿದ್ಯಾರ್ಥಿ ಸಂಘಟನೆ ಬೀದಿಗೆ ಇಳಿದು …

Read More »

ಹೈನೋದ್ಯಮದಿಂದ ವರ್ಷಕ್ಕೆ ₹1.5 ಕೋಟಿ ಆದಾಯ: ದೊಡ್ಡ ಮನೆ ಕಟ್ಟಿ ಹಾಲಿನ ಡಬ್ಬಿಯೊಂದಿಗೆ ಹಸುವಿನ ಪ್ರತಿಕೃತಿ ನಿರ್ಮಿಸಿದ ಕುಟುಂಬ

ಹೈನೋದ್ಯಮದಿಂದ ವರ್ಷಕ್ಕೆ ₹1.5 ಕೋಟಿ ಆದಾಯ: ದೊಡ್ಡ ಮನೆ ಕಟ್ಟಿ ಹಾಲಿನ ಡಬ್ಬಿಯೊಂದಿಗೆ ಹಸುವಿನ ಪ್ರತಿಕೃತಿ ನಿರ್ಮಿಸಿದ ಕುಟುಂಬ ಕುಟುಂಬ ಸದಸ್ಯರ ಒಗ್ಗಟ್ಟು, ಕಠಿಣ ಶ್ರಮದ ಫಲವಾಗಿ ಎರಡು ಹಸುಗಳಿಂದ ಆರಂಭವಾದ ಇವರ ಹೈನುಗಾರಿಕೆ ಇಂದು ಬೃಹತ್​ ಉದ್ಯಮವಾಗಿ ಬೆಳೆದು ನಿಂತಿದೆ. ಕೊಲ್ಲಾಪುರ(ಮಹಾರಾಷ್ಟ್ರ):ಕಠಿಣ ಪರಿಶ್ರಮ, ದೃಢಸಂಕಲ್ಪ ಮತ್ತು ಕುಟುಂಬದ ಒಗ್ಗಟ್ಟಿನ ಫಲವಾಗಿ ಕೊಲ್ಲಾಪುರದ ನೂಲ್​ ಎಂಬಲ್ಲಿನ ಸಾವಂತ್​ ಸಹೋದರರ ಕುಟುಂಬ ಹೈನುಗಾರಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಕೃಷಿ ಭೂಮಿಯಲ್ಲಿ ಉಂಟಾದ …

Read More »