Breaking News

Monthly Archives: ಏಪ್ರಿಲ್ 2025

ರಸ್ತೆಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಸಿಸಿಟಿವಿಯಲ್ಲಿ ಕಾಮುಕನ ದುಷ್ಕೃತ್ಯ ಸೆರೆ

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರನ್ನು ಹಿಂಬಾಲಿಸಿದ ಕಾಮುಕನೊಬ್ಬ ಯುವತಿಯೋರ್ವಳ ಮೇಲೆರಗಿ ಆಕೆಯ ಖಾಸಗಿ ಅಂಗ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಏಪ್ರಿಲ್ 3ರಂದು ಮುಂಜಾನೆ ಸುಮಾರು 1.55ಕ್ಕೆ ಘಟನೆ ನಡೆದಿದೆ. ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್‌ ಗೌಡ ಎಂಬುವವರು ನೀಡಿದ ದೂರಿನನ್ವಯ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. …

Read More »

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರೆಸುವಂತೆ ಬೃಹತ್ ಜಾಥಾ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರೆಸಬೇಕು, ಯಾವುದೇ ಸಡಿಲಿಕೆ ಇರಬಾರದು ಎಂದು ಆಗ್ರಹಿಸಿ ಪರಿಸರಪ್ರೇಮಿಗಳು ಇಂದು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು. ಕೇರಳಕ್ಕೆ ಹಾದುಹೋಗುವ ಕಗ್ಗಳದಹುಂಡಿ ಗೇಟ್​ನಿಂದ ಮದ್ದೂರು ಚೆಕ್​ಪೋಸ್ಟ್ ವರೆಗೆ ಪರಿಸರ ಹೋರಾಟಗಾರರು, ರೈತರು, ಟೆಕ್ಕಿಗಳು, ಕೇರಳದ ಪರಿಸರ ಹೋರಾಟಗಾರರು, ಸ್ಥಳೀಯ ಯುವಕರು ಸೇರಿದಂತೆ ಸಹಸ್ರಾರು ಮಂದಿ ಜಾಥಾದಲ್ಲಿ ಭಾಗಿಯಾದರು. ಕೇರಳದ ವಯನಾಡ್ ಪ್ರಕೃತಿ ಸಂರಕ್ಷಣಾ ಸಮಿತಿಯ ಬಾದೂಷಾ ಮಾತನಾಡಿ, “ನಾವು ಕೂಡ ರಾತ್ರಿ ಸಂಚಾರ …

Read More »

ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್​ಗೆ 5 ನಿಮಿಷದ ಕೆಲಸ: ಬೊಮ್ಮಾಯಿ

ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್​ಗೆ 5 ನಿಮಿಷದ ಕೆಲಸ: ಬೊಮ್ಮಾಯಿ ಹಾವೇರಿ: “ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಐದು ನಿಮಿಷದ ಕೆಲಸ. ಆದರೆ ಅದನ್ನು ಜಾರಿ ಮಾಡುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ” ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ತಮಿಳುನಾಡಿನಲ್ಲಿ ಇವರದೇ ಮಿತ್ರ ಪಕ್ಷ ಡಿಎಂಕೆ ಅಡಳಿತದಲ್ಲಿದೆ. ಇವರು ಮನಸ್ಸು ಮಾಡಿದರೆ …

Read More »

ಹಾವೇರಿಯಲ್ಲಿ ಹಾಲು ಉತ್ಪಾದಕರ ಆಕ್ರೋಶಕ್ಕೆ ಮಣಿದ ಹಾವೆಮುಲ್​: ಹಾಲಿಗೆ 2.50ರೂ. ಹೆಚ್ಚಳ (

ಹಾವೇರಿ: ಹಾವೇರಿ ಹಾಲು ಉತ್ಪಾದಕರ ಆಕ್ರೋಶಕ್ಕೆ ಮಣಿದ ಹಾವೆಮುಲ್ ಒಕ್ಕೂಟ ಹಾಲಿನ ದರವನ್ನು 2.50 ರೂ.ಗೆ ಏರಿಸಿ ಏಪ್ರಿಲ್​ 1 ರಿಂದ ಜಾರಿಗೊಳಿಸಿದೆ. ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿರುವ ಹಾವೆಮುಲ್​ನ ಅಧ್ಯಕ್ಷ ಮಂಜನಗೌಡ ಪಾಟೀಲ್​ ಹಾಲಿನ ದರ ಏರಿಕೆ ಬಗ್ಗೆ ವಿವರಿಸಿದ್ದಾರೆ. “ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘ ಒಕ್ಕೂಟ 28/03/25ರ ಹಾಲಿನ ದರ ಪರಿಷ್ಕರಣೆ ಆದೇಶವನ್ನು ಹಿಂಪಡೆದು ದಿನಾಂಕ 1/04/25 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್​ ಹಾಲಿಗೆ 34.05 …

Read More »

‘ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸೋಣ,

ಹುಬ್ಬಳ್ಳಿ: “ನೀನು ರಾಜೀನಾಮೆ ಕೊಡು, ನಾನು ರಾಜೀನಾಮೆ ಕೊಡ್ತೀನಿ. ಚುನಾವಣೆಗೆ ಹೋಗೋಣ, ಯಾರು ಗೆಲ್ಲುತ್ತಾರೆ ನೋಡೋಣ” ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಸವಾಲು ಹಾಕಿದ್ದಾರೆ. ನಗರದ ಮೂರುಸಾವಿರ ಮಠದ ಸ್ವಾಮೀಜಿ‌ ಭೇಟಿ‌ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಕೇವಲ ಭಗವಾ ಧ್ವಜದ ಮೇಲೆ ಗೆಲ್ಲುತ್ತೇನೆ. ನನಗೆ ಮುಸ್ಲಿಮರ ವೋಟ್ ಬೇಡ. ವಿಜಯೇಂದ್ರ ನಿನಗೆ ತಾಕತ್ ಇದೆಯಾ? ಎಂದು …

Read More »

ಜಮೀನು ವಿವಾದ ಮನೆಗೆ ನುಗ್ಗಿ ಕಬ್ಬಿನದ ರಾಡ್ ಗಳಿಂದ ಹಲ್ಲೆ ಆರೋಪ!*

ಜಮೀನು ವಿವಾದ ಮನೆಗೆ ನುಗ್ಗಿ ಕಬ್ಬಿನದ ರಾ**ಡ್ ಗಳಿಂದ ಹಲ್ಲೆ ಆರೋಪ!* ಸಹೋದರರ ಸಂಬಂಧಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಏಳು ಜನರಿಗೆ ಗಾ** ಯ ಎರಡು ಕಡೆಯ ಏಳು ಜನರಿಗೆ ಗಾ**ಯ, ಬೆಳಗಾವಿ ಬೀಮ್ಸ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಘಟನೆ ಅಂಬೇವಾಡಿ ಗ್ರಾಮದ ಲಖನ್ ರಾಕ್ಷೆ, ಗೋವಿಂದ ರಾಕ್ಷೆ ಕುಟುಂಬದ ಮಧ್ಯೆ 20ಗುಂಟೆ ಜಮೀನು ವಿವಾದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಹೋದರ ಕುಟುಂಬಗಳ …

Read More »

ಯತ್ನಾಳ ಹೊಸ ಪಕ್ಷ ಕಟ್ಟಲ್ಲ, ಕಟ್ಟಿದರೂ ನಾವು ಹೋಗಲ್ಲ: ಶಾಸಕ ಬಿ ಪಿ ಹರೀಶ್

ದಾವಣಗೆರೆ: ಉಚ್ಚಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟಲು ಬಿಡಲ್ಲ, ಈಗಲೂ ಅವರು ನಮ್ಮ‌ ನಾಯಕರು. ಪಕ್ಷ ಕಟ್ಟಿದರೆ ನಾವು ಹೋಗಲ್ಲ ಎಂದು ಹರಿಹರ ಶಾಸಕ ಬಿ ಪಿ ಹರೀಶ್​ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಹರೀಶ್​, ನಾವು ಬಿಜೆಪಿಯಲ್ಲೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಯತ್ನಾಳ್ ನಮ್ಮ ನಾಯಕರು ಹಿಂದೂ ಹುಲಿ ಎಂದು ಪ್ರಸಿದ್ದಿಯಾಗಿದ್ದಾರೆ ಅವರನ್ನು ಪಕ್ಷ ಉಚ್ಚಾಟನೆ ಮಾಡಿದೆ. ನಮ್ಮ ತಂಡ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂದು ಹೋರಾಟ ನಡೆಸುತ್ತಿದೆ …

Read More »

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ…

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ… ಜನರಿಗೆ ಹೊರೆಯಾಗದಂತೆ ಕೇವಲ ಶೇ. 3 ರಷ್ಟು ಹೆಚ್ಚಿಸುವಂತೆ ಶಾಸಕ-ಸದಸ್ಯರಿಂದ ಸಲಹೆ ಬೆಳಗಾವಿ ಮಹಾನಗರದಲ್ಲಿ ಆಸ್ತಿ ತೆರಿಗೆಯನ್ನು ಅತಿಯಾಗಿ ಹೆಚ್ಚಳ ಮಾಡದಂತೆ ಮತ್ತು ಸರ್ಕಾರಕ್ಕೆ ಮನವರಿಕೆ ಮಾಡಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಹೆಚ್ಚಿಸಬೇಕೆಂದು ಶಾಸಕ ಅಭಯ್ ಪಾಟೀಲ್ ಅವರು ಸಲಹೆ ನೀಡಿದರು. ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್’ ಸಭೆಯಲ್ಲಿ, ಶಾಸಕ ಅಭಯ್ ಪಾಟೀಲ್ ಅವರು ಸರ್ಕಾರ ಆಸ್ತಿ ತೆರಿಗೆಯನ್ನು …

Read More »

ಕಲ್ಬುರ್ಗಿಯಲ್ಲಿ ಭೀಕರ ಅಪಘಾತ ಐವರ ದುರ್ಮರಣ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ; ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ

ಕಲ್ಬುರ್ಗಿಯಲ್ಲಿ ಭೀಕರ ಅಪಘಾತ ಐವರ ದುರ್ಮರಣ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ; ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಭೀಕರವಾದ ಅಪಘಾತ ಸಂಭವಿಸಿ, ಸ್ಥಳದಲ್ಲೇ ಐವರು ಮೃತಪಟ್ಟು, ಹನ್ನೊಂದು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೊನ್ನ ಕ್ರಾಸ್ ಹತ್ತಿರ ಶುಕ್ರವಾರ ತಡರಾತ್ರಿ ನಡೆದಿದೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ …

Read More »

ಕೇಂದ್ರ ಸಚಿವ ಅಮೀತ ಶಾ ಹಾಗೂ ಸಂಸದ ತೇಜಸ್ವಿ ಸೂರ್ಯ ಮೇಲೆ ಸಚಿವ ಎಂ.ಬಿ.ಪಾಟೀಲ ಅಸಮಾಧಾನ

ಕೇಂದ್ರ ಸಚಿವ ಅಮೀತ ಶಾ ಹಾಗೂ ಸಂಸದ ತೇಜಸ್ವಿ ಸೂರ್ಯ ಮೇಲೆ ಸಚಿವ ಎಂ.ಬಿ.ಪಾಟೀಲ ಅಸಮಾಧಾನ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿ ವಿಜಯಪುರದಲ್ಲಿ ಸಮಾವೇಶ ಜೋರಾಗಿ ಮಾಡಲಿ. ಹೊಸ ಪಕ್ಷ ಕಟ್ಟುವುದು ಒಳ್ಳೆಯದು. ರಾಜ್ಯಾದ್ಯಂತ ಅವರನ್ನು ಮೀರಿಸಲಿ ಎಂದು, ಹೊಸ ಪಕ್ಷ ಕಟ್ಟುವುದಕ್ಕೆ ಶುಭ ಹಾರೈಸಿದರು. ಯತ್ನಾಳ್ ಹೊಸ ಪಕ್ಷ ಕಟ್ಟುವುದರಿಂದ ಕಾಂಗ್ರೆಸ್ ಗೆ …

Read More »