Breaking News

Daily Archives: ಆಗಷ್ಟ್ 12, 2022

ರಜೆಯ ಮೇಲೆ ಊರಿಗೆ ಬಂದಿದ್ದ ಯೋಧನನ್ನು ಬಾಮೈದನೇ ಹತ್ಯೆ ಮಾಡಿದ

ಬಾಗಲಕೋಟೆ: ರಜೆಯ ಮೇಲೆ ಊರಿಗೆ ಬಂದಿದ್ದ ಯೋಧನನ್ನು ಬಾಮೈದನೇ ಹತ್ಯೆ ಮಾಡಿರುವ ಘೋರ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ. 25 ವರ್ಷದ ಕರಿಸಿದ್ದಪ್ಪ ಕಳಸದ ಮೃತ ದುರ್ದೈವಿ. ಸಿದ್ದನಗೌಡ ದೂಳಪ್ಪ ಹತ್ಯೆಗೈದ ಆರೋಪಿ. ಊಟದ ವಿಚಾರವಾಗಿ ಯೋಧ ಹಾಗೂ ಆತನ ಪತ್ನಿ ವಿದ್ಯಾ ನಡುವೆ ಗಲಾಟೆ ನಡೆದಿದೆ. ಇದರಿಂದ ಬೇಸರಗೊಂಡ ವಿದ್ಯಾ ತನ್ನ ಸಹೋದರ ಸಿದ್ದನಗೌಡನಿಗೆ ಕರೆ ಮಾಡಿ ಹೇಳಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಂಡ-ಹೆಂಡತಿ …

Read More »

ಒಳ ಉಡುಪಿನಲ್ಲಿ ಚಿ‌ನ್ನ ಸಾಗಣೆ: ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕ ವಶಕ್ಕೆ

ಮಂಗಳೂರು: ಒಳ ಉಡುಪಿನ ಕಿಸೆಯೊಳಗೆ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಬುಧವಾರ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ‌ಆಗಮಿಸಿದ ಪ್ರಯಾಣಿಕನ ಬಳಿಯಿದ್ದ ಒಳ ಉಡುಪಿನ ಪಾಕೆಟ್​ನೊಳಗೆ ಚಿನ್ನ ಪತ್ತೆಯಾಗಿದೆ. ಪ್ರಯಾಣಿಕನನ್ನು ತಪಾಸಣೆ ನಡೆಸಿದ ವೇಳೆ, ಆತನ ಬ್ಯಾಗ್​ನಲ್ಲಿದ್ದ ಒಳ ಉಡುಪಿನ ಹೊಲಿಗೆ ಹಾಕಲಾದ ಪಾಕೆಟ್​ನೊಳಗೆ ಚಿನ್ನ ಪತ್ತೆಯಾಗಿದೆ. 24K ನ 831 ಗ್ರಾಂ ಚಿನ್ನ …

Read More »

ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಅಮೆಜಾನ್​ಗೆ 33 ಲಕ್ಷ ಡಾಲರ್ ದಂಡ

ಬಾರ್ಸಿಲೋನಾ (ಸ್ಪೇನ್): ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಕಂಪನಿಯಾಗಿರುವ ಅಮೆಜಾನ್ ವಿರುದ್ಧ ಬಾರ್ಸಿಲೋನಾ ಸ್ಥಳೀಯ ಕಾರ್ಮಿಕ ಇಲಾಖೆ ತನಿಖೆ ಆರಂಭಿಸಿದೆ. ಅಮೆಜಾನ್ ಸ್ಪೇನ್​ನ ಕ್ಯಾಟಲೋನಿಯಾದಲ್ಲಿ ಹಲವಾರು ವರ್ಷಗಳವರೆಗೆ ಉಪಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. 2020ರಲ್ಲಿಯೂ ಇದೇ ರೀತಿಯ ಕಾನೂನು ಬಾಹಿರ ಕೃತ್ಯಕ್ಕಾಗಿ ಕಂಪನಿಯು ಅಂದಾಜು 8 ಲಕ್ಷ 26 ಸಾವಿರ ಡಾಲರ್​ಗೂ ಅಧಿಕ ದಂಡ ಪಾವತಿಸಿತ್ತು. ಈ ಬಾರಿ ಅಮೆಜಾನ್​ಗೆ 33 ಲಕ್ಷ ಡಾಲರ್​ ದಂಡ ವಿಧಿಸಲಾಗಿದೆ …

Read More »

ಕಾಶಿ ವಿಶ್ವನಾಥನ ಪಲ್ಲಕ್ಕಿಯ ಅದ್ದೂರಿ ಮೆರವಣಿಗೆ. ದೇವರ ದರ್ಶನ ಪಡೆದು ಪುನೀತರಾದ ಭಕ್ತಗಣ. ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಅಲಂಕೃತವಾಗಿದ್ದ ಪಲ್ಲಕ್ಕಿ.

ವಾರಾಣಸಿ (ಉತ್ತರ ಪ್ರದೇಶ): ನೂರಾರು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ರೀತಿಯಲ್ಲಿ ಭಗವಾನ್ ವಿಶ್ವನಾಥನ ಪಲ್ಲಕ್ಕಿಯ ಮೆರವಣಿಗೆಯು ಧಾರ್ಮಿಕ ಉತ್ಸಾಹ ಮತ್ತು ಸಂಭ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು. ಕಾಶಿ ವಿಶ್ವನಾಥ ದೇಗುಲದಲ್ಲಿ ಕಳೆದ 356 ವರ್ಷಗಳಿಂದ ಈ ಧಾರ್ಮಿಕ ಆಚರಣೆಯನ್ನು ಅನುಸರಿಸಲಾಗುತ್ತಿದೆ. ಸುಂದರವಾಗಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರ ಬೆಳ್ಳಿಯ ಪ್ರತಿಕೃತಿಯು ವಾರಾಣಸಿ ನಗರದ ಪ್ರಮುಖ ರಸ್ತೆಗಳು ಮತ್ತು ಪಥಗಳಲ್ಲಿ ಸಂಚರಿಸಿದ ನಂತರ ಗುರುವಾರ ಕಾಶಿಧಾಮ ದೇವಾಲಯದ ಆವರಣಕ್ಕೆ ಆಗಮಿಸಿತು. ವಿಶ್ವನಾಥನ ದರ್ಶನ …

Read More »