ಬೆಳಗಾವಿ : ಕಮೀಷನ್ ಆರೋಪದಿಂದ ನುಣುಚಿಕೊಳ್ಳಲು ಸಚಿವ ಕೆ.ಎಸ್. ಈಶ್ವರಪ್ಪನವರು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆರೋಪಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಜೊತೆಗೆ ಬಿಜೆಪಿ ಮೆಂಬರ್ಶಿಪ್ ಕಾರ್ಡ್ ಸಹ ಬಿಡುಗಡೆ ಮಾಡಿದ್ದಾರೆ. ಮುಂದೆ ಆಗುವ ಅನಾಹುತಕ್ಕೆ ಈಶ್ವರಪ್ಪನವರೇ ಹೊಣೆ : ನಿಮ್ಮ ಮೇಲೆ ವಿಶ್ವಾಸವಿಟ್ಟು ಕಾಮಗಾರಿ ಪೂರ್ಣ ಮಾಡಿದ್ದೇನೆ. ವರ್ಕ್ ಆರ್ಡರ್, ಪೇಮೆಂಟ್ ಇಸ್ಯೂ ಮಾಡುವುದಾಗಿ ಹೇಳಿದ್ದಾಗಲೇ ಕಾಮಗಾರಿ ಮಾಡಿದ್ದೇನೆ. ಸುಮ್ಮನೇ ನುಣುಚಿಕೊಳ್ಳುವ ಸಲುವಾಗಿ ಅವನು ಯಾರು …
Read More »Monthly Archives: ಮಾರ್ಚ್ 2022
ನಾಲ್ಕು ದಿನಗಳ ಹಿಂದೆ ಸಿದ್ದಗೌಡ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿ
ಬೆಳಗಾವಿ: ಕೊಲೆ ಪ್ರಕರಣವೊಂದರಲ್ಲಿ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹ ಸೇರಿರುವ ವಿಚಾರಣಾಧೀನ ಕೈದಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೂಳೆ ಗ್ರಾಮದ ಸಿದ್ದಗೌಡ ಹಿಪ್ಪಲಕರ್ (34) ಆತ್ಮಹತ್ಯೆಗೆ ಶರಣಾಗಿರುವ ಕೈದಿ. ಪಕ್ಕದ ಮನೆಯ ಮಗುವನ್ನು ಕೊಲೆಗೈದ ಆರೋಪ ಈತನ ಮೇಲಿದೆ. ಕಳೆದ ಆರು ವರ್ಷಗಳಿಂದ ವಿಚಾರಣಾಧೀನ ಕೈದಿಯಾಗಿ ಸಿದ್ದಗೌಡ ಹಿಂಡಲಗಾ ಜೈಲಿನಲ್ಲಿದ್ದನು.ನಾಲ್ಕು ದಿನಗಳ ಹಿಂದೆ ಸಿದ್ದಗೌಡ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ತಕ್ಷಣವೇ ಇದನ್ನು ಗಮನಿಸಿದ ಸಹ …
Read More »ಸ್ಮಾರ್ಟ್ ಸಿಟಿಕುಂದಾನಗರಿ ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ ಶುರು
ಬೆಳಗಾವಿ ನಗರಕ್ಕೆ ಎರಡು ಡ್ಯಾಂಗಳಿಂದ ನೀರು ಸಪ್ಲೈ ಆಗುತ್ತದೆ. ಬರ ಬಂದರೂ ಮೂರು ವರ್ಷ ಸಾಕಾಗುವಷ್ಟು ನೀರು ಡ್ಯಾಂಗಳಲ್ಲಿ ಇರುತ್ತದೆ. ರಕ್ಕಸಕ್ಕೊಪ್ಪ ಡ್ಯಾಂ ಮತ್ತು ಹಿಡಕಲ್ ಡ್ಯಾಂ ನಿಂದ ನೀರು ಸಪ್ಲೈ ಆಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ನೀರಿದೆ. ಬೆಳಗಾವಿ: ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರಗಳ ಪೈಕಿ ಬೆಳಗಾವಿ (Belagavi) ಕೂಡ ಒಂದು. ಸುಮಾರು ಹದಿನೈದು ಲಕ್ಷ ಜನರು ನಗರದಲ್ಲಿ ವಾಸ ಮಾಡುತ್ತಿದ್ದು, ಮೂಲಭೂತ ಸೌಕರ್ಯಗಳು ಸೇರಿದಂತೆ ಎಲ್ಲವೂ ಇಲ್ಲಿನ …
Read More »ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸೊಸೆ ಮೇಘನಾ ಕಾರಣ ಎನ್ನುತ್ತಾರೆ ಶಂಕ್ರಣ್ಣನ ತಾಯಿ
ಮೇಘನಾ ಪ್ರತಿದಿನ ತನ್ನೊಂದಿಗೆ ಮತ್ತು ಗಂಡನೊಂದಿಗೆ ಜಗಳವಾಡುತ್ತಿದ್ದಳು, ಮನೆಗೆಲಸ ಯಾವುದನ್ನೂ ಮಾಡುತ್ತಿರಲಿಲ್ಲ, ತಾನೇ ಅವಳ ಬಟ್ಟೆ ಒಗೆಯಬೇಕಿತ್ತು ಎಂದು ಶಂಕ್ರಣ್ಣನ ತಾಯಿ ಹೇಳುತ್ತಾರೆ.ಈ ತಾಯಿಯ ಕರುಣಾಜನಕ ಕತೆ ಕೇಳುತ್ತಿದ್ದರೆ ಕಷ್ಟಗಳೆಲ್ಲ ಹುಡುಕಿಕೊಂದು ಇವರ ಮನೆಗೆ ಬಂದು ಬಿಡುತ್ತವಾ ಅನಿಸದಿರದು. ನಾಲ್ಕು ಮಕ್ಕಳ ತಾಯಿಯಾಗಿರುವ ಇವರು ಬದುಕಿನಲ್ಲಿ ಬರೀ ಕಷ್ಟವೇ ಅನುಭವಿಸಿದ್ದಾರೆ ಅನಿಸುತ್ತೆ. ಮುದಿಪ್ರಾಯದಲ್ಲಿ ಆಸರೆಯಾಗಿದ್ದ ಮಗ ಕೂಡ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದಹಾಗೆ, ಇವರ ಮಗನ ಹೆಸರು ಶಂಕರ ಆದರೆ …
Read More »ಐಪಿಎಲ್ನಲ್ಲಿ ಕಠಿಣ ನಿಯಮ ಜಾರಿ ಮಾಡಲು ಮುಂದಾದ ಬಿಸಿಸಿಐ
IPL 2022: ಗುಜರಾತ್ ಟೈಟನ್ಸ್ ತಂಡದ ಆರಂಭಿಕನಾಗಿದ್ದ ಜೇಸನ್ ರಾಯ್ ಹಾಗೂ ಕೆಕೆಆರ್ ತಂಡಕ್ಕೆ ಆರಂಭಿಕನಾಗಿ ಅಲೆಕ್ಸ್ ಹೇಲ್ಸ್ ಆಯ್ಕೆಯಾಗಿದ್ದರು.ಐಪಿಎಲ್ ಸೀಸನ್ 15 (IPL 2022) ಶುರುವಾಗಿದೆ. ಈಗಾಗಲೇ ಬಹುತೇಕ ತಂಡಗಳ ಮೊದಲ ಪಂದ್ಯ ಮುಗಿದಿದೆ. ಇದಾಗ್ಯೂ ಅನೇಕ ವಿದೇಶಿ ಆಟಗಾರರು ಇನ್ನೂ ಕೂಡ ಐಪಿಎಲ್ನಲ್ಲಿ ಕಾಣಿಸಿಕೊಂಡಿಲ್ಲ. ರಾಷ್ಟ್ರೀಯ ತಂಡಗಳಲ್ಲಿರುವ ಆಟಗಾರರು ಇನ್ನಷ್ಟೇ ಐಪಿಎಲ್ಗೆ ಆಗಮಿಸಬೇಕಿದೆ. ಆದರೆ ಈ ಆಟಗಾರರು ಬಂದೇ ಬರಲಿದ್ದಾರೆ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ. ಹೀಗಾಗಿಯೇ …
Read More »50 ವರ್ಷಗಳ ಗಡಿ ವಿವಾದ ಬಗೆಹರಿಸಲು ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿಗಳಿಂದ ಐತಿಹಾಸಿಕ ಒಪ್ಪಂದಕ್ಕೆ ಸಹಿ
5 ದಶಕಗಳ ಕಾಲದ ಗಡಿ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.ನವದೆಹಲಿ: ಅಸ್ಸಾಂ (Assam) ಮತ್ತು ಮೇಘಾಲಯ (Meghalaya) ರಾಜ್ಯಗಳ ನಡುವೆ 50 ವರ್ಷಗಳಿಂದ ಬಾಕಿ ಇದ್ದ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಂದು ಮಧ್ಯಾಹ್ನ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು …
Read More »ಶಿವಕುಮಾರ ಸ್ವಾಮೀಜಿ ಜಯಂತೋತ್ಸವಕ್ಕೆ ತುಮಕೂರಿಗೆ ರಾಹುಲ್ ಗಾಂಧಿ: ಹಿರಿಯ ನಾಯಕರೊಂದಿಗೆ ಸಭೆ
ತುಮಕೂರು: ಪಂಚ ರಾಜ್ಯಗಳ ಚುನಾವಣೆಯಲ್ಲಿ ಮುಗ್ಗರಿಸಿರುವ ಕಾಂಗ್ರೆಸ್ ಇದೀಗ ಪಕ್ಷವನ್ನ ಸಂಘಟಿಸಲು ತೊಡೆ ತಟ್ಟಿ ನಿಂತಿದೆ. ಈ ನಿಟ್ಟಿನಲ್ಲಿ ಮಾರ್ಚ್ 31ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಾರ್ಚ್31 ನಡೆದಾಡುವ ದೇವರು, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತೋತ್ಸವ ಹಿನ್ನೆಲೆಯಲ್ಲಿ ತುಮಕೂರಿಗೆ ಭೇಟಿ ನೀಡಲಿದ್ದಾರೆ. ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಸಿದ್ದಲಿಂಗೇಶ್ವರನಿಗೂ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಅಲ್ಲಿಯೇ ಪ್ರಸಾದ ಸ್ವೀಕರಿಸಿ ಆನಂತರ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಮಧ್ಯಾಹ್ನ 2 …
Read More »ಬಜೆಟ್ನಲ್ಲಿ ಮಂಡಿಸಿದ ಎಲ್ಲ ಕಾರ್ಯಕ್ರಮಗಳಿಗೆ ಹಣ ಒದಗಿಸಲು ಬದ್ಧ: ಸದನದಲ್ಲಿ ಸಿಎಂ ಬೊಮ್ಮಾಯಿ ಭರವಸೆ
2021-22ರಲ್ಲಿ 5 ಸಾವಿರ ಕೋಟಿ ಕಡಿಮೆ ಇತ್ತು. 2022-23ರ ಬಜೆಟ್ನ ಒಟ್ಟು ಗಾತ್ರ 2 ಲಕ್ಷ 65 ಸಾವಿರದ 720 ಕೋಟಿ. ಇದು ಹಿಂದಿನ ಬಜೆಟ್ಗಿಂತ ಶೇ.7.9ರಷ್ಟು ಹೆಚ್ಚಾಗಿದೆ ಎಂದು ವಿಧಾನಸಭೆ ಸದನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಈ ಬಾರಿ ಬಜೆಟ್ ಗಾತ್ರ ಕಡಿಮೆ ಮಾಡಬೇಕಾಗುತ್ತದೆ ಎಂದು ನಮ್ಮ ಅಧಿಕಾರಿಗಳು ಹೇಳಿದ್ದರು. ಆದರೆ ಬಜೆಟ್ ಗಾತ್ರ ಕಡಿಮೆ ಮಾಡಿದ್ರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ನಾವು …
Read More »ಮಗುವಿನಂಥ ಮನಸ್ಸು.. ತೊಟ್ಟಿಲಲ್ಲಿ ಮಲಗಿ ಮಗುವಾದ ‘ದೊಡ್ಮನೆ’ ಶಿವಣ್ಣ..!
ಸರಳ, ಸಜ್ಜನಿಕೆ, ಸ್ನೇಹ ಜೀವಿ, ಮಗು ಥರಾ ಮನಸ್ಸಿನ ಶಿವಣ್ಣ ಮಕ್ಕಳ ಜೊತೆ ಅಕ್ಷರಶಃ ಮಗುವಾಗಿ ಬಿಡ್ತಾರೆ.. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣರಿಗೆ ಸಂಬಂಧಿಸಿದ ವಿಡಿಯೋ ಒಂದು ಭಾರೀ ವೈರಲ್ ಆಗ್ತಿದೆ. ಸಂಬಂಧಿಕರ ಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ತೆಗೆದ ಫೋಟೋ ಹಾಗೂ ವಿಡಿಯೋಗಳು ಇವು ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಶಿವಣ್ಣ, ತೊಟ್ಟಿಲಲ್ಲಿ ಮಲಗಿಕೊಂಡಿದ್ದಾರೆ. ಕಾಲು ಮೇಲೆ ಕಾಲು ಹಾಕಿ ಮಲಗಿ, ಒಂದು ಕೈಯನ್ನ ತಲೆ ದಿಂಬಾಗಿ ಇಟ್ಟುಕೊಂಡು …
Read More »ಕೈಕೊಟ್ಟ ಹುಡುಗಿ.. ಜೀವ ತೆಗೆದುಕೊಂಡ ಪ್ರಿಯತಮ
ಬೆಂಗಳೂರು: ಪ್ರೀತಿ ನಿರಾಕರಿಸಿದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡು ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿ 25 ವರ್ಷದ ಅರುಣ್ ಎಂಬ ಯುವಕ ಈ ರೀತಿ ನೇಣಿಗೆ ಶರಣಾಗಿದ್ದಾನೆ. ಮದುವೆ ಆಗುವಂತೆ ಅರುಣ್ ಯುವತಿಯ ಬೆನ್ನು ಬಿದ್ದಿದ್ದ, ಆದ್ರೆ ಯುವತಿ ವಿವಾಹವಾಗಲು ನಿರಾಕರಿಸಿದ್ದಾಳೆ. ಇದರಿಂದ ಮನನೊಂದು ಮನೆಯಲ್ಲಿಯೇ ಅರುಣ್ ನೇಣಿಗೆ ಶರಣಾಗಿದ್ದಾನೆ. ಇನ್ನು ರಾಮಮೂರ್ತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆಯನ್ನ ನಡೆಸಿದ್ದಾರೆ.
Read More »
Laxmi News 24×7