Breaking News

Monthly Archives: ಜನವರಿ 2022

50ನೆಯ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ ಸೂ ಪ್ರಸಿದ್ಧ ದೇವಸ್ತಾನ ತುಳಸಿಗೆರೆ ಹನುಮಂತನ ಸನ್ನಿಧಿಯಲ್ಲಿ ನೆರವೇರಿಸಿದ ಶ್ರೀ ಸಂತೋಷ್ ಜಾರಕಿಹೊಳಿ ಅವರು

ಸಂತೋಷ್ ಜಾರಕಿಹೊಳಿ ಅವರು ಸುಮಾರು ಎರಡು ವರ್ಷ ವಾಯಿತು ಸತತವಾಗಿ ಪ್ರತಿ ಶನಿವಾರ ಗೋಕಾಕ ,ಸವದತ್ತಿ ,ಯರಗಟ್ಟಿ, ಹಾಗೂ ಸುತ್ತಮುತ್ತಲಿನ ಹಳ್ಳಿ ಹಳ್ಳಿಗೆ ತೆರಳಿ ಪ್ರತಿ ಶನಿವಾರ ಒಂದೊಂದು ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಇಂದು ಐವತ್ತನೇ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನಾ ಬಾಗಲಕೋಟೆ ಜಿಲ್ಲೆಯ ಸುಪ್ರಸಿದ್ದ ಆಂಜನೇಯ ಸ್ವಾಮಿ ದೇವಾಲಯ ದಲ್ಲಿ ಹಮ್ಮಿ ಕೊಂಡಿದ್ದ ಅವರು ಇಲ್ಲಿಯೂ ಕೂಡ ಸುಮಾರು ಜನಾ ಭಕ್ತಾದಿಗಳು ಪ್ರಸಾದ …

Read More »

ರೇಪ್ ದೃಶ್ಯಗಳಲ್ಲಿ ನಟಿಸುವ ಆಫರ್‌ಗಳನ್ನೇ ನೀಡುತ್ತಿದ್ದರು: ಹಿರಿಯ ನಟಿ ಬೇಸರ

ಹಮ್ ಆಪ್‌ ಕೇ ಹೈ ಕೋನ್’ ಸಿನಿಮಾ ಹಿಂದಿ ಚಿತ್ರರಂಗದ ಸೂಪರ್-ಡೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. 14 ಹಾಡುಗಳಿದ್ದ ‘ಹಮ್ ಆಪ್ಕೆ ಹೈ ಕೋನ್’ ಸಿನಿಮಾ ವರ್ಷಗಳ ಕಾಲ ಚಿತ್ರಮಂದರಿಗಳಲ್ಲಿ ಓಡಿತ್ತು, ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆಯನ್ನು ಬಹು ಸಮಯ ಹೊಂದಿತ್ತು. ನಂತರ ಅದನ್ನು ಡಿಡಿಎಲ್‌ಜೆ ಮುರಿಯಿತು. ಈ ಸಿನಿಮಾದಲ್ಲಿ ನಟಿಸಿದ್ದ ಎಲ್ಲ ನಟ-ನಟಿಯರೂ ಆ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾದರು. ‘ಹಮ್ ಆಪ್ಕೆ ಹೈ …

Read More »

ವಿದ್ಯಾರ್ಥಿಗಳಿಗೆ `BMTC’ ಯಿಂದ ಗುಡ್ ನ್ಯೂಸ್ : `ಬಸ್ ಪಾಸ್’ ಅವಧಿ ವಿಸ್ತರಣೆ

ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆ (BMTC) ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ್ದು, ವಿದ್ಯಾರ್ಥಿಗಳ ಬಸ್ ಪಾಸ್ ಗಳ ಅವಧಿಯನ್ನು ಜನವರಿ 15 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳು 2021-22 ನೇ ಸಾಲಿನ ಶುಲ್ಕ ರಶೀದಿ ಅಥವಾ ಗುರುತಿನ ಚೀಟಿಯೊಂದಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. 1 ರಿಂದ 10 ನೇ ತರಗತಿ, ಪಿಯುಸಿ, ಐಟಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ, ಸಂಜೆ ಕಾಲೇಜು ಹಾಗೂ ಪಿಎಚ್ ಡಿ ವಿದ್ಯಾರ್ಥಿಗಳಿಗೆ …

Read More »

ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್ಕುಮಾರ್ ಭಾವಚಿತ್ರ: KMF ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

ಬೆಂಗಳೂರು : ಕನ್ನಡ ಚಿತ್ರರಂಗದ ರಾಜರತ್ನ ಹಾಗೂ ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದಿವೆ. ಆದರೆ, ಅವರಿಗೆ ಇದ್ದ ಪರಿಸರ ಕಾಳಜಿ, ಸಮಾಜದ ಮೇಲೆ ಇದ್ದ ಪ್ರೀತಿ ಹಾಗೂ ದೊಡ್ಡವರ ಮೇಲೆ ಇದ್ದ ಗೌರವ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತೆ. ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ನಂದಿನ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್​ಕುಮಾರ್ ಭಾವಚಿತ್ರವನ್ನ ಮುದ್ರಿಸುವ ಮೂಲಕ …

Read More »

ಹೊಸ ವರ್ಷದ ದಿನವೇ ಭರ್ಜರಿ ಗಿಫ್ಟ್ : LPG ಸಿಲಿಂಡರ್ ಬೆಲೆಯಲ್ಲಿ ₹100 ಇಳಿಕೆ!

ನವದೆಹಲಿ : ಹೊಸ ವರ್ಷದಂದು ಇಂಡಿಯನ್ ಆಯಿಲ್ ಜನತೆಗೆ ಭರ್ಜರಿ ಗಿಫ್ಟ್ ನೀಡಿದೆ. ಇಂಡಿಯನ್ ಆಯಿಲ್ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 100 ರೂಪಾಯಿ ಕಡಿತಗೊಳಿಸಲು ನಿರ್ಧರಿಸಿದೆ. ಇದರಿಂದ ಜನತೆಗೆ ಹೆಚ್ಚಿನ ನೆಮ್ಮದಿ ದೊರೆಯಲಿದೆ. ಆದರೆ, ದೇಶೀಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ LPG ಸಿಲಿಂಡರ್ ಬೆಲೆ ಇಳಿಕೆ ಡಿಸೆಂಬರ್ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ(LPG Cylinder Price)ಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸೋಣ. ಡಿಸೆಂಬರ್ ನಲ್ಲಿ …

Read More »

15ವರ್ಷಗಳ ನಂತರ ತಿರುಪತಿಯಲ್ಲಿ ಅಪರೂಪದ ಸೇವೆ ಪುನರಾರಂಭ: ಟಿಕೆಟ್ ದರಕ್ಕೆ ಬೆಚ್ಚಿಬಿತ್ತು ಭಕ್ತಗಣ

ಕಲಿಯುಗದಲ್ಲಿ ಬೇಡಿದ್ದನ್ನು ಕರುಣಿಸುವ ಕಾಮಧೇನು ಎಂದೇ ಹೆಸರಾಗಿರುವ ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಹದಿನೈದು ವರ್ಷಗಳ ನಂತರ ಅಪರೂದ ಸೇವೆಯನ್ನು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಪುನರ್ ಆರಂಭಿಸಲು ನಿರ್ಧರಿಸಿದೆ. ಕೆಲವೇ ಕೆಲವು ಸೆಕೆಂಡ್ ನಷ್ಟು ಮಾತ್ರ ದೇವರನ್ನು ನೋಡಲು ಅವಕಾಶವಿರುವ ಈ ದೇವಾಲಯದಲ್ಲಿ, ಸ್ಥಿತಿವಂತರು ದುಡ್ಡು ಕೊಟ್ಟರೆ ದಿನವಿಡೀ ದೇವರ ಮುಂದೆ ಕೂತು ಎಲ್ಲಾ ಪೂಜೆ/ಅಭಿಷೇಕಗಳನ್ನು ಮತ್ತೆ ಆರಂಭವಾದ ಸೇವೆಯ ಮೂಲಕ ನೋಡಬಹುದಾಗಿದೆ.   ಉದಯಾಸ್ಥಮಾನ ಆರ್ಜಿತ ಸೇವೆಯನ್ನು ಒಂದೂವರೆ …

Read More »

ಪ್ರವಾಸಿಗರಿಂದ ತುಂಬಿದ್ದ ಮಹೀಂದ್ರಾ ಎಸ್‌ಯುವಿಯನ್ನು ಎಳೆದ ಹುಲಿ…! ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಬೆಂಗಳೂರು: ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಉದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಳ್ಳುವ ವಿಡಿಯೋಗಳನ್ನು ಬಹುಶಃ ನೋಡಿರುತ್ತೀರಿ. ಇದೀಗ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಬೆನ್ನಲ್ಲಿ ನಡುಕ ಹುಟ್ಟಿಸುತ್ತದೆ. Going around #Signal like wildfire. Apparently on the Ooty to Mysore Road near Theppakadu. Well, that car is a Xylo, so I guess I’m not surprised he’s chewing on …

Read More »

ಮಹಾರಾಷ್ಟ್ರ: 10 ಸಚಿವರು, 20 ಶಾಸಕರಿಗೆ ಕೊರೊನಾ ಸೋಂಕು ದೃಢ!

ನವದೆಹಲಿ: ಮಹಾರಾಷ್ಟ್ರ ಸರ್ಕಾರಕ್ಕೆ ಕೊರೊನಾ ಸಂಕಷ್ಟ ಎದುರಾಗಿದ್ದು, ರಾಜ್ಯದ 10 ಸಚಿವರಿಗೆ ಹಾಗೂ 20 ಶಾಸಕರಿಗೆ ಸೋಂಕು ತಗುಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವರ್ ಮಾಹಿತಿ ನೀಡಿದ್ದಾರೆ. ರಾಜ್ಯಕ್ಕೆ ಸಾಂಕ್ರಾಮಿಕ ಕಾಯಿಲೆಗಳು ಬಂದಾಗ ಮುಂದೆ ನಿಂತು ಎದುರಿಸಬೇಕಿದ್ದ ಸಚಿವರಿಗೆ ಹಾಗೂ ಶಾಸಕರಿಗೆ ಕೊರೊನಾ ಸೋಂಕು ತಗುಲಿರೋದು ಆತಂಕಕ್ಕೆ ಕಾರಣವಾಗಿದೆ.   ನಿನ್ನೆ ರಾಜ್ಯದಲ್ಲಿ 8,067 ಕೊರೊನಾ ಕೇಸ್ ದಾಖಲಾಗಿದೆ. ಕೊರೊನಾ ಉಲ್ಬಣ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನವನ್ನ ಮೊಟಕುಗೊಳಿಸಿದ್ದೇವೆ. ಎಲ್ಲರೂ ಕೂಡ …

Read More »

ಬೆಳಗಾವಿ ಪೊಲೀಸ್ ಕಮಿಷನರ್ ತ್ಯಾಗರಾಜನ್ ವರ್ಗಾವಣೆ

ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.   ಡಾ.ಎಂ.ಬಿ.ಬೋರಲಿಂಗಯ್ಯ ಬೆಳಗಾವಿ ನೂತನ್ ಪೊಲೀಸ್ ಕಮಿಷನರ್ ಆಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Read More »

ಪೊಲೀಸ್ ಇಲಾಖೆ ಸೇರಬಯಸುವವರಿಗೆ ಸಿಹಿಸುದ್ದಿ: ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಪೊಲೀಸ್ ಇಲಾಖೆ ಸೇರಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಇಲಾಖೆಯ ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಹುದ್ದೆ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಸಿಎಆರ್/ಡಿಎಆರ್) (ಪುರುಷ) ಮತ್ತು ಸೇವೆಯಲ್ಲಿರುವವರು (ಮಿಕ್ಕುಳಿದ ಮತ್ತು ಸ್ಥಳೀಯ ವೃಂದದ) ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಶಸ್ತ್ರ ಮೀಸಲು ಪೊಲೀಸ್ …

Read More »