Breaking News

Daily Archives: ಅಕ್ಟೋಬರ್ 6, 2020

ನನ್ನ ಹತ್ತಿರ ಹೆಲ್ಮೆಟ್​ ಕೊಳ್ಳೋಕೂ ದುಡ್ಡಿಲ್ಲ. ಇನ್ನು ಮಾಸ್ಕ್​ಗೆ ದಂಡ ಎಲ್ಲಿಂದ ಕಟ್ಟೋದು

ಬೆಂಗಳೂರು: ನಗರದಲ್ಲಿ ಮಾಸ್ಕ್​ ಧರಿಸದವರಿಗೆ ಬಿಬಿಎಂಪಿ ಮಾರ್ಷಲ್​ಗಳು ದಂಡ ವಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ಮಾರ್ಷಲ್​ಗಳು ಕಾರ್ಯಾಚರಣೆಗೆ ಮುಂದಾದರು. ಈ ನಡುವೆ ಸರ್​ ನನ್ನ ಹತ್ತಿರ ಕಾಸಿಲ್ಲ. ಹಾಗಾಗಿ ಮಾಸ್ಕ್​ ಕೊಳ್ಳೋಕೆ ಆಗ್ಲಿಲ್ಲ. ಬೇಕಿದ್ರೆ ನನ್ ಬ್ಯಾಗ್​ ಚೆಕ್​ ಮಾಡಿ ಅಂತಾ ಯುವಕನೊಬ್ಬ ಮಾರ್ಷಲ್​ಗಳಿಗೆ ಹೇಳಿದ್ದಾನೆ. ಮಾರ್ಷಲ್​ಗಳು ಪ್ರಶ್ನಿಸುತ್ತಿದ್ದಂತೆ ಜೇಬಿನಲ್ಲಿ ‌ಕೈಹಾಕಿ‌ ಮಾಸ್ಕ್​ಗಾಗಿ ಹುಡುಕಾಟ ನಡೆಸಿದನು. ಬಳಿಕ ಮಾಸ್ಕ್ ಹಾಕಿಲ್ಲ, ಫೈನ್ ಕಟ್ಟಿ ಅಂತಿದ್ದ ಹಾಗೆ ಗಳಗಳನೆ ಅಳಲು …

Read More »

2017-18ರಲ್ಲಿನ ಪ್ರಕರಣ​ಗಳು ಈಗ ಮುಂದುವರಿದಿವೆ. ಸಿಬಿಐ ತನ್ನ ಕೆಲಸ ಮಾಡುತ್ತಿದೆ:R.ಅಶೋಕ್

ಬೆಂಗಳೂರು: ಡಿ.ಕೆ. ಶಿವಕುಮಾರ್ ಹೆಸರು ಬಳಸಿಕೊಂಡು ಗೆಲ್ಲುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದ್ದಾರೆ. 2017-18ರಲ್ಲಿನ ಪ್ರಕರಣ​ಗಳು ಈಗ ಮುಂದುವರಿದಿವೆ. ಸಿಬಿಐ ತನ್ನ ಕೆಲಸ ಮಾಡುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೇ ಗೆಲ್ತಾರೆ ಅಂತಾ ಅಶೋಕ್​ ಹೇಳಿದ್ದಾರೆ. 50 ಕೋಟಿ ತಂದು RSSನವರು ಖರ್ಚು ಮಾಡುತ್ತಿದ್ದಾರೆ ಎಂದು ನಿನ್ನೆ ಶಿರಾದಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಅವರು …

Read More »

ವಿನಯ್ ಕುಲಕರ್ಣಿ BJPಗೆ ಸೇರ್ಪಡೆಯಾವುದೇ ಚರ್ಚೆ ಆಗಿಲ್

ಹುಬ್ಬಳ್ಳಿ: ಮಾಜಿ ಸಚಿವ, ಕಾಂಗ್ರೆಸ್ಸಿನ ವಿನಯ್ ಕುಲಕರ್ಣಿ BJPಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮಾತನಾಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಮ್ಮ ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಹುಬ್ಬಳ್ಳಿಯಲ್ಲಿ ತಿಳಿಸಿದ್ರು. ನಮ್ಮದು ರಾಷ್ಟ್ರೀಯ ಪಕ್ಷ ಆ ರೀತಿ ಸೇರ್ಪಡೆ ಆಗುವುದಿಲ್ಲ. ಜಿಲ್ಲಾ, ರಾಜ್ಯ, ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡೇ ಮಾಡ್ತಾರೆ‌. ನಾನು ಇದೇ ಜಿಲ್ಲೆಯ‌ ಜನಪ್ರತಿನಿಧಿ, ನನ್ನ …

Read More »

35 ವರ್ಷದ ಶಾಸಕ ಪ್ರಭು 19 ವರ್ಷದ ಸೌಂದರ್ಯ ಎಂಬಾಕೆ ಜೊತೆ ಮದುವೆ

ಚೆನ್ನೈ: ತಮಿಳುನಾಡಿದ ಕಲ್ಲಕುರಿಚಿ ಎಐಎಡಿಎಂಕೆಯ 35 ವರ್ಷದ ಶಾಸಕ ಪ್ರಭು 19 ವರ್ಷದ ಸೌಂದರ್ಯ ಎಂಬಾಕೆ ಜೊತೆ ಮದುವೆಯಾಗಿದ್ದಾನೆ. ಇದೀಗ ಈ ವಿವಾಹ ಸುದ್ದಿಯೂ ತಮಿಳುನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹರಡಿದೆ. ಇದೊಂದು ಅಂತರ್ಜಾತಿ ವಿವಾಹವಾಗಿದ್ದು, ವಧುವಿನ ತಂದೆ ಎಸ್.ಸ್ವಾಮಿನಾಥನ್ ಮದುವೆ ದಿನವೇ ವಧು-ವರರ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಈ ವಿವಾಹ ಭಾರೀ ವಿವಾದ ಸೃಷ್ಟಿಸಿದೆ. ಇವರ ಮದುವೆ ಅಕ್ಟೋಬರ್ 5 ಅಂದರೆ ಸೋಮವಾರ ನಡೆದಿದೆ. ಪ್ರಭು …

Read More »

ರೈಲ್ವೇ ಟ್ರ್ಯಾಕ್ ನಲ್ಲಿ ರೈಲು ಮಾತ್ರ ಚಲಿಸುತ್ತೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ.ಟ್ರ್ಯಾಕ್ ನಲ್ಲಿ ಬೈಕ್ ಓಡಿಸುತ್ತಾರೆ ಅಚ್ಚರಿಯಾದರೂ ಸತ್ಯ.

ಪಾಟ್ನಾ: ಸಾಮಾನ್ಯವಾಗಿ ರೈಲ್ವೇ ಟ್ರ್ಯಾಕ್ ನಲ್ಲಿ ರೈಲು ಮಾತ್ರ ಚಲಿಸುತ್ತೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಹೆಚ್ಚೆಂದರೆ ಜನ ಟ್ರ್ಯಾಕ್ ನಲ್ಲಿ ನಡೆದುಕೊಂಡು ಹೋಗಬಹುದು ಅಷ್ಟೆ. ಆದರೆ ಈ ಟ್ರ್ಯಾಕ್ ನಲ್ಲಿ ಬೈಕ್ ಓಡಿಸುತ್ತಾರೆ ಅಚ್ಚರಿಯಾದರೂ ಸತ್ಯ. ಹೌದು. ಪ್ರಯಾಣಿಕರ ರೈಲು ಆಗಿರಲಿ ಅಥವಾ ಪ್ರಯಾಣಿಕರಿಗೆ ಸರಕು ಸಾಗಟ ಮಾಡುವ ರೈಲುಗಳು ಓಡಲು ಹಳಿಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಹಳಿಯಲ್ಲಿ ಬೇರೆ ಯಾವುದೇ ವಾಹನ ಚಲಿಸುವುದನ್ನು ನಿಷೇಧಿಸಲಾಗಿದೆ. ಆದರೆ ಬಿಹಾರದ …

Read More »

ಹೋಮ್ ಮಿನಿಸ್ಟರ್ ತವರಲ್ಲೇ ಐಪಿಎಸ್ ಅಧಿಕಾರಿಗಳ ವಾರ್

ಧಾರವಾಡ/ಹುಬ್ಬಳ್ಳಿ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತವರೂರಿನಲ್ಲೇ ಐಪಿಎಸ್ ಅಧಿಕಾರಗಳ ವಾರ್ ತಾರಕಕ್ಕೇರಿದೆ. ಹುಬ್ಬಳ್ಳಿ-ಧಾರವಾಡ ಕಮೀಷನರ್ ಆರ್ ದಿಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ್ ಮಧ್ಯೆ ಜಗಳ ಶುರುವಾಗಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳ ತಿಕ್ಕಾಟ ಇದೀಗ ಪೊಲೀಸ್ ಮಹಾನಿರ್ದೇಶಕರವರೆಗೂ ತಲುಪಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ ಕಮೀಷನರ್ ಆರ್.ದಿಲೀಪ್ ಇಲಾಖೆಯ ವಿಚಾರಗಳು, ಅಕ್ರಮ ಚಟುವಟಿಕೆ, ಕೋವಿಡ್ 19 ವಿಚಾರದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸುವ ವಿಚಾರ ಹಾಗೂ ಸಾಮಾಜಿಕ ಅಂತರ ಕಾಪಾಡುವ …

Read More »

ಮಧ್ಯಾಹ್ನ ಟಿಕೆಟ್ ಘೋಷಣೆ – ಶಿರಾ ಜೆಡಿಎಸ್ ಅಭ್ಯರ್ಥಿಗೆ ಕೊರೊನಾ ಪಾಸಿಟಿವ್

ತುಮಕೂರು: ಉಪಚುನಾವಣೆಯಲ್ಲಿ ಶಿರಾ ಜೆಡಿಎಸ್ ಅಭ್ಯರ್ಥಿಯಾಗಿರುವ ಅಮ್ಮಾಜಮ್ಮ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಂದು ಮಧ್ಯಾಹ್ನವೇ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು, ದಿವಂಗತ ಶಾಸಕ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಪಕ್ಷದಿಂದ ಉಪಚುನಾವಣೆಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಆದರೆ ಅಮ್ಮಾಜಮ್ಮ ಅವರಿಗೆ ಇಂದೇ ಕೊರೊನಾ ಪಾಸಿಟಿವ್ ಬಂದಿದೆ. ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕತ್ಸೆ ಪಡೆಯುತ್ತಿದ್ದಾರೆ. ತಾಯಿಗೆ ಕೊರೊನಾ ಬಂದ ವಿಚಾರವಾಗಿ ಮಾತನಾಡಿರುವ ಅಮ್ಮಾಜಮ್ಮ ಪುತ್ರ ಸತ್ಯ ಪ್ರಕಾಶ್, …

Read More »

ಮಹಿಳೆಯೊಬ್ಬರು ಮಾಸ್ಕ್ ಹಾಕದ ಕಾರಣಕ್ಕೆ ದಂಡ ವಿಧಿಸುತ್ತಿದ್ದಾಗ ಮಾಜಿ ಕಾರ್ಪೋರೇಟರ್ ಆಕ್ಷೇಪಿಸಿದಕ್ಕೆ ಪೊಲೀಸರು ಲಾಠಿಯಿಂದ ಕಾಲು ಮುರಿದಿದೆ

ವಿಜಯಪುರ: ಮಾಜಿ ಮಹಾನಗರ ಪಾಲಿಕೆ ಬಿಜೆಪಿ ಕಾರ್ಪೊರೆಟರ್ ಮೇಲೆ ಪೊಲಿಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಪೊಲಿಸರ ವಿರುದ್ದ ಆರೋಪ ಮಾಡಿದ್ದಾರೆ. ವಿಜಯಪುರ ನಗರ ಗಾಂಧಿಚೌಕ್ ಹಾಗೂ ಸಂಚಾರಿ ಠಾಣೆಯ ಎ.ಎಸ್.ಐ. ಹಾಗೂ ಹೆಡ್ ಕಾನ್ಸಟೇಬಲ್ ನಿಂದ ಭಾನುವಾರ ಸಂಜೆ ತಮ್ಮ ಮೇಲೆ ಹಲ್ಲೆ ನಡೆಸಿ ಕಾಲು ಮುರಿದಿದ್ದಾರೆ ಎಂದು ಪ್ರಕಾಶ ಮಿರ್ಜಿ ಆರೋಪಿಸಿದ್ದಾರೆ. ಮಹಿಳೆಯೊಬ್ಬರು ಮಾಸ್ಕ್ ಹಾಕದ ಕಾರಣಕ್ಕೆ …

Read More »

ಡ್ರಗ್ ಕೇಸಿನಲ್ಲಿ ಚಿಕ್ಕದೊಂದು ಐಸ್ ಬರ್ಗ್ ಹೊರಬಂದಿದೆಯಷ್ಟೇ: ಭಾಸ್ಕರ್ ರಾವ್

ಧಾರವಾಡ: ಡ್ರಗ್ ಕೇಸ್‍ನಲ್ಲಿ ಈಗ ಹೊರ ಬಂದಿರೋದು ಟಿಪ್ ಆಫ್ ದಿ ಐಸ್ ಬರ್ಗ್ ಅಷ್ಟೇ ಎಂದು ಆಂತರಿಕ ಭದ್ರತಾ ದಳ (ಐಎಸ್‍ಡಿ) ಮುಖ್ಯಸ್ಥ ಭಾಸ್ಕರ್ ರಾವ್ ಹೇಳಿದ್ದಾರೆ .ಧಾರವಾಡದಲ್ಲಿ ಮಾತನಾಡಿದ ಅವರು, ಡ್ರಗ್ ಕೇಸಿನಲ್ಲಿ ಪೆಡ್ಲರ್ ಮತ್ತು ಗ್ರಾಹಕರವರೆಗೆ ಹೋಗಿದ್ದೇವೆ. ಇದು ಎಲ್ಲಿಂದ ಬರುತ್ತಿದೆ ಅದು ಪತ್ತೆ ಮಾಡಬೇಕಿದೆ ಎಂದು ಹೇಳಿದರು. ಕೆಮಿಕಲ್ ಮತ್ತು ಆರ್ಟಿಫಿಷಿಯಲ್ ಡ್ರಗ್ ಹೊರ ದೇಶದಿಂದ ಬರುತ್ತಿದೆ ಎಂದರು. ಡ್ರಗ್ಸ್ ಸಮುದ್ರ ಮತ್ತು ವಿಮಾನ …

Read More »

ಜೆಪಿಯವರ ಮೇಲೆ ಯಾಕೆ ಸಿಬಿಐ ರೋಟಿನ್ ದಾಳಿ ಮಾಡೋಲ್ಲ. ಅಲ್ಲಿ ಇರುವ ಎಲ್ಲರು ಸತ್ಯ ಹರಿಶ್ಚಂದ್ರರಾ?:ಸಿದ್ದರಾಮಯ್,

ಮೈಸೂರು: ಬಿಜೆಪಿಯವರ ಮೇಲೆ ಯಕೆ ಸಿಬಿಐ ರೊಟೀನ್ ದಾಳಿ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆ ಬ್ರದರ್ಸ್ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ರಾಜಕೀಯ ದುರುದ್ದೇಶದಿಂದ ಮಾಡಿರುವ ದಾಳಿಯಾಗಿದೆ. ಬಿಜೆಪಿಯವರ ಮೇಲೆ ಯಾಕೆ ಸಿಬಿಐ ರೋಟಿನ್ ದಾಳಿ ಮಾಡೋಲ್ಲ. ಅಲ್ಲಿ ಇರುವ ಎಲ್ಲರು ಸತ್ಯ ಹರಿಶ್ಚಂದ್ರರಾ?, ಅವರ್ಯಾರು ಭ್ರಷ್ಟಾಚಾರ ಅಕ್ರಮ ಹಣ ಸಂಪಾದನೆಯನ್ನೇ ಮಾಡಿಲ್ವಾ ಎಂದು ಪ್ರಶ್ನಿಸಿದರು. ಯಾಕೆ ಉಪಚುನಾವಣೆ …

Read More »