ಹೊನ್ನಾವರ: ತಾಲ್ಲೂಕಿನ ನಗರಬಸ್ತಿಕೇರಿ ಗ್ರಾಮದ ಕುಂಟೋಡಿಯಲ್ಲಿ ಶನಿವಾರ ಮಹಿಳೆಯೊಬ್ಬಳು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಕುದ್ರಗಿಯ ಅಕ್ಷತಾ ಮಂಜುನಾಥ ನಾಯ್ಕ(26) ಮೃತರು.
‘ಅನಾರೋಗ್ಯಕ್ಕೊಳಗಾಗಿದ್ದ ಸಹೋದರನ್ನು ನೋಡಿಕೊಳ್ಳಲು 15 ದಿನದ ಹಿಂದೆ ಅಕ್ಷತಾ ತವರು ಮನೆ ಕುದ್ರಿಗೆ ಬಂದಿದ್ದಳು.ಮನೆಯ ಸಮೀಪ ಬಾವಿಯಲ್ಲಿ ಕಂಡುಬಂದ ಹಾವೊಂದನ್ನು ನೋಡಲು ಬಾವಿಯ ಕಟ್ಟೆಯ ಮೇಲೆ ಕೈಯೂರಿ ಬಗ್ಗಿ ನೋಡುವಾಗ ಆಕಸ್ಮಿಕವಾಗಿ ಜಾರಿ ತಲೆಕೆಳಗಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ’ ಎಂದು ಅವರ ಅಕ್ಷತಾ ತಾಯಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.