ಹಿಪ್ಪರಗಿ ಬ್ರಿಜ್ ದಿಂದ ಕೆಲ ದಿನಗಳ ಹಿಂದೆ ಗೇಟ್ ಕಟ್ಟಾಗಿ ಸುಮಾರು ಮೂರು ಟಿಎಂಸಿ ಆಗುವಷ್ಟು ನೀರು ಹರಿದು ಹೋಗಿದ್ದರಿಂದ, ಬೇಸಿಗೆ ಅವಧಿಯಲ್ಲಿ ನೀರಿನ ಕೊರತೆ ಉಂಟಾಗುವ ಆತಂಕ ವ್ಯಕ್ತವಾಗಿತ್ತು. ಕೃಷ್ಣಾ ನದಿಯ ಭಾಗದ ರೈತರ ಪರಿಸ್ಥಿತಿಯನ್ನು ಅರಿತು, ರೈತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಹಾರಾಷ್ಟ್ರ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ದೇವೇಂದ್ರ ಫಡ್ನವೀಸ್ ಸಾಹೇಬರು ಮಹಾರಾಷ್ಟ್ರದಿಂದ ರಾಜಾಪುರ ಅಣೆಕಟ್ಟು ಮುಖಾಂತರ ಕೃಷ್ಣಾ ನದಿಗೆ ನೀರನ್ನು ಬಿಡುಗಡೆಗೊಳಿಸಿದ್ದು, ಇವತ್ತು ರಾಜಾಪುರ ಬ್ರಿಜ್ ಗೆ ಸ್ಥಳೀಯ ಮುಖಂಡರು ಹಾಗೂ ರೈತ ಬಾಂಧವರೊಂದಿಗೆ ಭೇಟಿ ನೀಡಿ, ನೀರಿನ ಮಟ್ಟವನ್ನು ವೀಕ್ಷಣೆ ಮಾಡಿ ಸಮಸ್ತ ನಮ್ಮ ಕೃಷ್ಣಾ ನದಿಯ ಭಾಗದ ರೈತರ ಪರವಾಗಿ ಮಹಾರಾಷ್ಟ್ರ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ದೇವೇಂದ್ರ ಫಡ್ನವೀಸ್ ಸಾಹೇಬರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಕೋರಿದೇವು.
ಈ ಸಮಯದಲ್ಲಿ ಸ್ಥಳೀಯ ಮುಖಂಡರು ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.
Laxmi News 24×7