ವೀರಭದ್ರಪ್ಪಾ ಗಂಗಪ್ಪಾ ಮಾದಮ್ಮನವರ ನಿಧನ

Spread the love

ಬೆಳಗಾವಿ ಸಮೀಪದ ಮಾರಿಹಾಳ ಗ್ರಾಮದ ಗಣ್ಯ ವ್ಯಕ್ತಿಗಳು ಸಹಕಾರಿ ಧುರಿಣರಾಗಿ ಮುತ್ಸದ್ದಿ ರಾಜಕಾರಣಿಗಳು ಗ್ರಾಮದ ಮಾದಮ್ಮನವರ ಕಾಕಾ ಎಂದೆ ಹೆಸರುವಾಸಿಯಾಗಿದ್ದ ಗ್ರಾಮದ ವೀರಭದ್ರಪ್ಪಾ ಗಂಗಪ್ಪಾ ಮಾದಮ್ಮನವರ (80) ವಯೋಸಹಜ ಅನಾರೋಗ್ಯದಿಂದ ಗುರುವಾರ ನಿಧನರಾದರು. ಮೃತರಿಗೆ ಬೆಳಗಾವಿ (ಗ್ರಾ) ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ ಸೆರಿದಂತೆ ಮೂರು ಜನ ಗಂಡು ಮಕ್ಕಳು ಒರ್ವ ಹೆಣ್ಣು ಮಕ್ಕಳು ಅಪಾರ ಬಂಧು-ಬಳಗ ಹೊಂದಿದ್ದಾರೆ. ಗ್ರಾಮದ ಪ್ರಮುಖ ಧಾರ್ಮಿಕ ಸ್ಥಾನಗಳಾದ ನವಗ್ರಹ ದೇವಸ್ಥಾನ, ಹನುಮಾನ ಮಂದಿರ ನಿರ್ಮಾಣ ಮಾಡಿ ಗ್ರಾಮದ ಜನತೆಗೆ ಸಮರ್ಪಿಸಿದ್ದರು. ಕರಡಿಗುದ್ದಿ ಜಡಿಸಿದ್ದೆಶ್ವರ ದೇವಸ್ಥಾನದ ಆವರಣದಲ್ಲಿ ಗಣಪತಿ ಮುರ್ತಿ ಹಾಗೂ ನವಗ್ರಹ ಮೂರ್ತಿ, ಪಂಥನಗರದಲ್ಲಿ ಗಣಪತಿ ಹಾಗೂ ಸಾಯಿ ಮಂದಿರ ಸ್ಥಾಪಿಸಿದ್ದ ಇವರು ಗೊಕಲು ನಗರದ ದುರ್ಗಾಮಾತಾ ಮೂರ್ತಿಯನ್ನು ನೀಡಿದ್ದರ ಮಾರಿಹಾಳ ಗ್ರಾಮದ ಕೊಡಿಬಸವೇಶ್ವರ ದೇವಸ್ಥಾನದ ಟ್ರಸ್ಟಿಗಳಾಗಿ, ದೇವಸ್ಥಾನದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದು ಹಾಗೂ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 40 ವರ್ಷಗಳ ಕಾಲ ಅಧ್ಯಕ್ಷರಾಗಿ ನಿರ್ದೇಶಕರಾಗಿ ರೈತರ ಶ್ರಯೋಭಿವರದ್ದಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು.
ಮೃತರು ಗ್ರಾಮಗಳಲ್ಲಿ ದೇವಸ್ಥಾನಗಳ ನಿರ್ಮಾಣ ಅವುಗಳ ಉಸ್ತುವಾರಿ ಹಾಗೂ ಜಾತ್ರಾ ಕಮಿಟಿಯ ಪ್ರಮುಖರಾಗಿ ಗ್ರಾಮದಲ್ಲಿ ಧಾರ್ಮಿಕ ಸಂಸ್ಕಾರದ ಹರಿಕಾರರಾಗಿದ್ದರು. ತಾಲೂಕಾ ಮಟ್ಟದಲ್ಲಿ ಗ್ರಾಮದ ಹೆಸರುವಾಸಿಯಾಗಲು ಕಾರಣಿಕರ್ತರಾಗಿ ಬೆಳಗಾವಿ ತಾಲೂಕಾ ಎಪಿಎಂಸಿ ಹಾಗೂ ಟಿಎಪಿಸಿಎಮ್ ಎಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು ಗ್ರಾಮದ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕಾಯುಕ ಜೀವಿಗಳ ನಿಧಾನಕ್ಕೆ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತಿಮ ದರ್ಶನ ಶುಕ್ರವಾರ 27ಮಾ‌ 11 ಘಂಟೆಯವರೆಗೆ ಮಾರಿಹಾಳ ಗ್ರಾಮದ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನದ ನಂತರ ಸ್ವಜಮೀನಿನಲ್ಲಿ ಅಂತಿಮ ಕ್ರಿಯೆ ನೆರವೆರಲಿದೆ. ಮೃತರ ನಿಧನಕ್ಕೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಮೃತ್ಯುಂಜಯ ಮಹಾಸ್ವಾಮಿಗಳು, ಮುರಗೋಡ ನೀಲಕಂಠ ಮಹಾಸ್ವಾಮಿಗಳು, ನಾಗನೂರ ಮಠದ ಸ್ವಾಮೀಜಿಗಳು, ಕುಂದರಗಿ ಸ್ವಾಮೀಜಿ, , ಕಾರಂಜಿಮಠದ ಗುರುಸಿದ್ದ‌ ಮಹಾಸ್ವಾಮೀಜಿ, ಸಂಪಗಾಂವ ಕಠಾಪೂರಿಮಠ ಸ್ವಾಮೀಜಿಗಳು,
ಬೈಲಹೊಂಗಲ ದುರ್ಗಾದೇವಿ ಆರಾಧಕರಾದ ಮಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು, ಹಾಗೂ ಸಂಸದರಾದ ಜಗದೀಶ್ ಶೆಟ್ಟರ್ , ರಾಜ್ಯಸಭಾ ಸಂಸದರಾದ ಈರಣ್ಣಾ ಕಡಾಡಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಡಾ ವಿ.ಆಯ್. ಪಾಟೀಲ್, ಜಗದೀಶ ಮೆಟಗುಡ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ,ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್ ಸಿದ್ದನಗೌಡರ, ನ್ಯಾಯವಾದಿ ಎಮ್.ವಾಯ್.ಸೋಮಣ್ಣವರ, ಡಾ. ಸಿದ್ದಪ್ಪ ದೊಡಮನಿ, ಮಾರಿಹಾಳ ಪಿಕೆಪಿಎಸ್ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಜನತೆ ಹಿರಿಯರ ಸಾವಿಗೆ ಕಂಬನಿ ಮಿಡಿದಿದ್ದಾರೆ.


Spread the love

About Laxminews 24x7

Check Also

ಮನೆಗಳ್ಳತನ ಮಾಡಿದ ಕಳ್ಳಿ ಬಂಧನ: 68.74 ಗ್ರಾಂ ಬಂಗಾರದ ಆಭರಣ ಜಪ್ತಿ

Spread the loveಬೆಳಗಾವಿ: ಮನೆ ಕಳ್ಳತನ ಮಾಡಿದ ಕಳ್ಳಿಯನ್ನು ಬಂಧಿಸಿರುವ ಬೆಳಗಾವಿ ಪೊಲೀಸರು ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸುರೇಖಾ ಕೊಂ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ