ಮಹಾತ್ಮಾ ಗಾಂಧೀಜಿಯವರ ಪುಣ್ಯಸ್ಮರಣೆಯಂದು ವಿಬಿಜಿ ರಾಮಜೀ ತಿರಸ್ಕರಿಸಿ ಮನರೇಗಾ ಉಳಿಸಿ ಹೋರಾಟವನ್ನು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ವತಿಯಿಂದ ನಡೆಸಲಾಯಿತು.
ಮಹಾತ್ಮಾ ಗಾಂಧೀಜಿಯವರ ಪುಣ್ಯಸ್ಮರಣೆಯಂದು ವಿಬಿಜಿ ರಾಮಜೀ ತಿರಸ್ಕರಿಸಿ ಮನರೇಗಾ ಉಳಿಸಿ ಹೋರಾಟವನ್ನು ಬೆಳಗಾವಿಯ ತಾಲೂಕಾ ಪಂಚಾಯಿತಿ ಕಾರ್ಯಾಲಯದ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ವತಿಯಿಂದ ನಡೆಸಲಾಯಿತು.

ಹೊಸ ವಿಬಿಜಿ ರಾಮಜೀ ಯೋಜನೆಯೂ ಕಾರ್ಮಿಕ ಕೆಲಸದ ಹಕ್ಕುಗಳನ್ನು ಕಿತ್ತುಕೊಂಡಿದೆ. ಫಾರ್ಮ ನಂ. 6ರಡಿ 10 ದಿನಗಳಲ್ಲಿ ಕೆಲಸ ನೀಡಬೇಕು ಇಲ್ಲದಿದ್ದರೇ, ಭತ್ಯೆ ನೀಡಬೇಕೆಂದಿತ್ತು. ಆದರೇ, ಈಗ ಕೇಂದ್ರವು ಕೆಲಸ ನೀಡಿದಾಗ ಮಾತ್ರ ಕೆಲಸ ಮಾಡುವ ಸಂದರ್ಭ ಬಂದೊದಗಿದೆ. ವಲಸೆ ತಡೆಯುವ ಬದಲೂ ವಲಸೆ ಹೋಗಲು ಪ್ರೇರೆಪಿಸುತ್ತಿದೆ. ಬಡಜನರಿಗೆ ಈ ಕಾನೂನು ಕುತ್ತು ತಂದಿದೆ. ಬಡಜನರ ಮಕ್ಕಳ ವಿದ್ಯಾಭ್ಯಾಸದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ನಮಗೆ ಹೆಚ್ಚಿಗೆ ಹಾಜರಾತಿ ಬೇಡ. ಹಳೆಯ ಕಾನೂನೆ ಜಾರಿಗೊಳಿಸುವಂತೆ ಶಕುಂತಲಾ ಆಗ್ರಹಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
Laxmi News 24×7