ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸೋಲುವ ಭೀತಿ ಕಾಡುತ್ತಿದೆ. ಹಿಂದೂಗಳ ಮತಕ್ಕೆ 7000 ರೂ., ಮುಸ್ಲಿಮರ ಮತಕ್ಕೆ 10,000 ರೂ. ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರಿಗೆ ಆಪತ್ತು ಬಂದಾಗ ಮಾತ್ರ ಅಹಿಂದ ನೆನಪಾಗುತ್ತದೆ. ದಾವಣಗೆರೆಗೆ ಬಂದ್ರೆ ಅಹಿಂದಗೆ ಮತ ನೀಡಬೇಡಿ ಎನ್ನುತ್ತಾರೆ. ಬಾಗಲಕೋಟೆಗೆ ಪ್ರಚಾರಕ್ಕೆ ಹೋದ್ರೆ ಅಹಿಂದಗೆ ಮತಹಾಕಿ ಎನ್ನುತ್ತಾರೆ. ಅವರಿಗೆ ಸೋಲುವ ಭೀತಿ ಕಾಡುತ್ತಿದೆ. ನಮ್ಮ ಅಭ್ಯರ್ಥಿ ಇಲ್ಲಿ ಸಂಪತ್ತಿಗೆ ಸವಾಲ್ ಆಗಿ ನಿಂತಿದ್ದಾರೆ.
Laxmi News 24×7