Breaking News

ರೇಣುಕಾಸ್ವಾಮಿ ಕೊಲೆ ಕೇಸ್​; ಆರೋಪಿ ವಿನಯ್​ ಕಪಾಳಕ್ಕೆ ಹೊಡೆದ ವಕೀಲರು

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ10 ಆಗಿರುವ ವಿನಯ್​ಗೆ ಅವರ ವಕೀಲರಿಂದಲೇ ಕಪಾಳ ಮೋಕ್ಷವಾಗಿರುವ ಘಟನೆ ಬೆಂಗಳೂರಿನ ಕೋರ್ಟ್​ ಆವರಣದಲ್ಲಿ ನಡೆದಿದೆ.
ಎ10 ವಿನಯ್  ಸ್ಟೋನಿಬ್ರೂಕ್ ಮಾಲೀಕ. ಇತ್ತೀಚೆಗೆ ಆರೋಪಿ ವಕೀಲರ ಬದಲಾವಣೆಗೆ ಮುಂದಾಗಿದ್ದರು. ಈ ಬಗ್ಗೆ ಮತ್ತೆ ತಕರಾರು ತೆಗೆದಿದ್ದರು. ಇದರಿಂದ ಸದ್ಯ ಕೋರ್ಟ್​ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾ.9ರಂದು  ನಟರಾಜ್ ಅವರು ವಿನಯ್ ಪರ ವಕಾಲತ್ತು ವಹಿಸಲು ಬಂದಿದ್ದರು. ಈ ವೇಳೆ ಅವರ ಬಳಿ ಬದಲಾವಣೆ  ಬಗ್ಗೆ   ವಾಗ್ವಾದಕ್ಕೆ ವಿನಯ್​ ಇಳಿದಿದ್ದರು. ಮಾತನಾಡುವ ಬರದಲ್ಲಿ ಕೊರ್ಟ್​ ಆವರಣದಲ್ಲೇ ವಕೀಲರ ಮೇಲೆ ಕಿರುಚಾಡಿದ್ದಾರೆ. ಅವರ   ವರ್ತನೆಯಿಂದ ಸಿಟ್ಟಾದ ವಕೀಲರು ಕಾರಿಡಾರ್​ನಲ್ಲಿ ಐದಾರು ಬಾರಿ ಅವರ ಕೆನ್ನೆಗೆ ಬಾರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2024 ಜೂನ್​​8 ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರ ಮೃತದೇಹವು ಪತ್ತೆಯಾಗಿತ್ತು. ಕೊಲೆಯ ಜಾಡು ಹಿಡಿದ ಕಾಮಾಕ್ಷಿ ಪಾಳ್ಯ ಪೊಲೀಸರು ಮೊದಲಿಗೆ ಬಂಧಿಸಿದ್ದು ನಟ ದರ್ಶನ್​ ಅವರನ್ನು.  ನಟಿ  ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನೆಲೆ, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್​ಗೆ ಕರೆತರಲಾಗಿತ್ತು. ಈ ವೇಳೆ ದರ್ಶನ್​ ಮತ್ತು ಅವರ ಗ್ಯಾಂಗಿನವರಿಂದ ಆತನ ಮೇಲೆ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಕೇಳಿಬಂದಿತ್ತು.  ಸದ್ಯ ಜಾಮೀನಿನ ಬಳಿಕ ದರ್ಶನ್​ ಮತ್ತು ಗ್ಯಾಂಗ್ ಮತ್ತೆ ಜೈಲುವಾಸ ಅನುಭವಿಸುತ್ತಿದ್ದಾರೆ.

Spread the love

About Laxminews 24x7

Check Also

ಡಿಕೆಶಿ ಪರವಾಗಿ ನಾವಿದ್ದೇವೆ, ದೆಹಲಿಯಿಂದ ನಾಳೆನೇ ಬರಲಿ ತೊಂದ್ರೆ ಇಲ್ಲ: ಸತೀಶ್ ಜಾರಕಿಹೊಳಿ

Spread the loveಬೆಂಗಳೂರು: ದೆಹಲಿಗೆ  ತೆರಳಿರುವ ಡಿಸಿಎಂ ಡಿಕೆಶಿ  ಪರವಾಗಿ ನಾವಿದ್ದೇವೆ. ಅವರು ನಾಳೆನೇ ಬರಲಿ ತೊಂದರೆ ಇಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ