ಅಂಕೋಲಾ : ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ರಾ.ಹೆ. 63 ಹೆಬ್ಬುಳ ಬಳಿ ಶುಕ್ರವಾರ ನಡೆದಿದೆ. ಗದಗ ಜಿಲ್ಲೆಯ ಪಂಚಾಕ್ಷರಿನಗರದ ವಸಂತ ದಾಕಪ್ಪ ಅಕ್ಕಿ(73) ಮೃತ ದುರ್ದೈವಿ, ಕಾರಿನಲ್ಲಿದ್ದ ಉಳಿದ ಮೂವರಿಗೆ ಗಂಭಿರ ಗಾಯಗಳಾಗಿದ್ದು ಅವರಿಗೆ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ಈ ಅವಘಡಕ್ಕೆ ಕಾರಣ …
Read More »ಖಾತೆ ಹಂಚಿಕೆಗೂ ಮುನ್ನ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ
ತುಮಕೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು. ಜತೆಗೆ ಮಠದ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಠದಲ್ಲಿಯೇ ಪ್ರಸಾದ ಸೇವಿಸಿದರು. ಇಂದೇ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಈಮುನ್ನ ತಿಳಿಸಿದ್ದ ಅವರು ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಹಿಂದುರಿಗಿದ ನಂತರ ಖಾತೆ ಹಂಚಿಕೆ ಮಾಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ಸಿದ್ದಗಂಗಾ ಮಠಕ್ಕೆ …
Read More »ಗೋಕಾಕ್ ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳ ತೆರವು
ಘಟಪ್ರಭಾ : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ರಿ.ಸ.ನಂ-120 ರಲ್ಲಿ ನೀರಾವರಿ ನಿಗಮಕ್ಕೆ ಸೇರಿದ ಜಾಗದಲ್ಲಿ ಅತಿಕ್ರಮಣವಾಗಿ ನಿರ್ಮಿಸಿದ್ದ ಮನೆಗಳನ್ನು ಶುಕ್ರವಾರದಂದು ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪನವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ನೀರಾವರಿ ನಿಗಮದ ಕಛೇರಿ ಹಿಂದುಗಡೆ ಇರುವ ರಿ.ಸ.ನಂ-120 ರಲ್ಲಿ ಇರುವ ನೀರಾವರಿ ಇಲಾಖೆಗೆ ಸೇರಿದ 82 ಎಕರೆ ಜಮೀನಿನ ಪೈಕಿ ಸುಮಾರು 30 ಎಕರೆ ಜಮೀನು ಅತಿಕ್ರಮಣವಾಗಿತ್ತು. ಸುಮಾರು 30ಕ್ಕೂ ಹೆಚ್ಚು ಅನಧಿಕೃತ ಮನೆಗಳು ತೆರವುಗೊಳಿಸುವ ಕಾರ್ಯ ಮುಂದುವರೆದಿದ್ದು, …
Read More »ಬೊಮ್ಮಾಯಿ V/s ಶೆಟ್ಟರ್: ಸಿಕ್ಕಾಪಟ್ಟೆ ಸಸ್ಪೆನ್ಸ್! ಜೂನಿಯರ್ ಆದ ಬೊಮ್ಮಾಯಿಯವರ ಸಂಪುಟದಲ್ಲಿ ನಾನು ಸಚಿವನಾಗಿರಲಾರೆ’
ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಎಂದು ಘೋಷಿಸಿದ ನಂತರ ನೀಡಿದ ಸಂದರ್ಶನದಲ್ಲಿ, ‘ನನಗಿಂತ ಜೂನಿಯರ್ ಆದ ಬೊಮ್ಮಾಯಿಯವರ ಸಂಪುಟದಲ್ಲಿ ನಾನು ಸಚಿವನಾಗಿರಲಾರೆ’ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದರು. ತಮ್ಮನ್ನು ಡ್ರಾಪ್ ಮಾಡಬಹುದೆಂಬ ವಿಷಯ ಮೊದಲೇ ಗೊತ್ತಿತ್ತೋ ಅಥವಾ ಹುಬ್ಬಳ್ಳಿ ರಾಜಕೀಯದಲ್ಲಿ ಒಂದು ಲೆಕ್ಕದಲ್ಲಿ ಬೊಮ್ಮಾಯಿ ಅಗೋಚರ ಪರ್ಯಾಯ ಲಿಂಗಾಯತ ನಾಯಕರಾಗುವ ಆತಂಕವೋ ಗೊತ್ತಿಲ್ಲ. ಒಟ್ಟಿನಲ್ಲಿ ಶೆಟ್ಟರ್ ಮೊದಲೇ ಸಂಪುಟ ಸೇರಲಾರೆ ಎಂದರು. ಈ ಹಿಂದೆ ಒಮ್ಮೆ ಸ್ಪೀಕರ್ ಸ್ಥಾನದಲ್ಲಿ, 4 ತಿಂಗಳು …
Read More »ತಾವು ಮಾಡದ ತಪ್ಪಿಗೆ ಅಗ್ನಿಪರೀಕ್ಷೆ ಎದುರಿಸಿ ಬಂದಿದ್ದೇನೆ ಎಂದ ಸಚಿವೆ ಶಶಿಕಲಾ ಜೊಲ್ಲೆ
ನಿಪ್ಪಾಣಿ : ತಾವು ಮಾಡದ ತಪ್ಪಿಗೆ ಅಗ್ನಿಪರೀಕ್ಷೆ ಎದುರಿಸಿ ಬಂದಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆಯವರು ಭಾವುಕರಾಗಿ ನುಡಿದರು. ನಿಪ್ಪಾಣಿ ಕ್ಷೇತ್ರಕ್ಕೆ ಸಚಿವರಾಗಿ ಮೊದಲಬಾರಿಗೆ ಆಗಮಿಸಿ ಪಕ್ಷದ ಕಚೇರಿಗೆ ಭೇಟಿ ಮಾಡಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಅದ್ದೂರಿ ಸತ್ಕಾರ ಮಾಡಿದ್ದೀರಿ ನಾನು ಇದನ್ನು ಯಾವತ್ತೂ ಮರೆಯುವುದಿಲ್ಲ. ನಮ್ಮೆಲ್ಲರ ಮೇಲೆ ದೊಡ್ಡ ಜವಾಬ್ದಾರಿ ಇದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಅವರು, ಹಿಂದಿನ ಮುಖ್ಯಮಂತ್ರಿಗಳಾದ …
Read More »‘ಮುಸ್ಲಿಂ ನಾಯಕ ವೀಕ್ ಆಗ್ಲಿ ಅಂತ ರೇಡ್’ ED ದಾಳಿ ಬಗ್ಗೆ ಸಿದ್ದರಾಮಯ್ಯ ಆಪ್ತನ ಆಕ್ರೋಶ
ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ರೇಡ್ಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ನಿವಾಸದ ಬಳಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿರುವ ಮಾಜಿ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅಶೋಕ್ ಪಟ್ಟಣ್.. ಐಎಂಎ ಪ್ರಕರಣ ನಡೆದು ತುಂಬಾ ದಿನ ಆಯ್ತು.. ಈ ದಾಳಿ ರಾಜಕೀಯ ಪ್ರೇರಿತ ಅಂತ ಗೊತ್ತಾಗುತ್ತಿದೆ.. ತಪ್ಪಿದ್ರೆ ಆವತ್ತೇ ಅರೆಸ್ಟ್ ಮಾಡ್ತಾ ಇದ್ರು.. ಇದು ರಾಜಕೀಯ ಪ್ರೇರಿತ ಎಂದಿದ್ದಾರೆ. ಅಶೋಕ್ ಪಟ್ಟಣ್, …
Read More »ಬಿಜೆಪಿ ಅಧಿಕಾರದಲ್ಲಿರೋವರೆಗೂ ಕೇಂದ್ರದಿಂದ ಅನುದಾನ ಬರಲ್ಲ,ನೂತನ ಸಚಿವರಿಂದ ಯಾವುದೇ ನಿರೀಕ್ಷೆ ಸಾಧ್ಯವಿಲ್ಲ
ಬೆಳಗಾವಿ: ನೂತನ ಸಚಿವರಿಂದ ಯಾವುದೇ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಂಪುಟದಲ್ಲಿದ್ದ ಬಹುತೇಕ ಸಚಿವರೇ, ಈಗ ಸಿಎಂ ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವರಾಗಿದ್ದಾರೆ. ಅವರ ಕಾರ್ಯವೈಖರಿಯನ್ನು ಈಗಾಗಲೇ ನಾವು ನೋಡಿದ್ದೇವೆ. ಹೀಗಾಗಿ, ಈಗ ಅಧಿಕಾರ ಸ್ವೀಕರಿಸಿರುವ ಸಚಿವರಿಂದ ಯಾವುದೇ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದರು. ಈ ಹಿಂದೆ ಜಿಲ್ಲೆಯಲ್ಲಿ ಮಂತ್ರಿಗಳಿದ್ದವರು, ಜಿಲ್ಲೆಯ ಯಾವುದೇ ಸಮಸ್ಯೆಗೆ ಸ್ಪಂದಿಸಿರಲಿಲ್ಲ. ಕೊರೊನಾ …
Read More »ವಿಸ್ಕಿ ಬಾಟಲ್ ಕಾಣಿಸುತ್ತಿಲ್ಲ ಎಂದು ತನಿಖೆ ಆರಂಭ
ವಿಸ್ಕಿ ಬಾಟಲ್ ಕಾಣಿಸಲಿಲ್ಲ ಎಂದು ಯುಎಸ್ ತನಿಖೆಯು ಬಹಿರಂಗಪಡಿಸಿದೆ. ಖಜಾನೆ ಇಲಾಖೆಯ ಪ್ರಕಾರ, ವಿಸ್ಕಿಯ ಬೆಲೆ $ 5,800 (ರೂ. 4.30 ಲಕ್ಷ) ಮತ್ತು ಜಪಾನ್ ಸರ್ಕಾರವು ಆಗಿನ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊಗೆ 2019 ರಲ್ಲಿ ಉಡುಗೊರೆಯಾಗಿ ನೀಡಿತು. ಅಧಿಕೃತ ಅಂಕಿಅಂಶಗಳಲ್ಲಿ ಬಾಟಲ್ ಕಾಣಿಸದಿರುವುದಕ್ಕೆ ಅಧಿಕಾರಿಗಳು ಪ್ರಸ್ತುತ ಕಾಳಜಿ ವಹಿಸಿದ್ದಾರೆ. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ವಿಸ್ಕಿ ಬಾಟಲ್ ಕಾಣೆಯಾದ ಬಗ್ಗೆ ತನಿಖೆ ಆರಂಭಿಸಿದರು. ಪೊಂಪಿಯೊ …
Read More »ಒಂದೇ ಬಾರಿ 300 ಬರ್ಗರ್ ಮತ್ತು 100 ಡ್ರಿಂಕ್ಸ್ ಆರ್ಡರ್ ಮಾಡಿದ ಗ್ರಾಹಕ
ಆಸ್ಟ್ರೇಲಿಯಾದಲ್ಲಿರುವ ಮ್ಯಾಕ್ಡೊನಾಲ್ಡ್ಸ್ ಸ್ಟೋರ್ ಒಂದರ ಸಿಬ್ಬಂದಿ ಒಮ್ಮೆಲೇ 3,400 ಡಾಲರ್ (1.86 ಲಕ್ಷ ರೂಪಾಯಿ) ಮೌಲ್ಯದ ಆರ್ಡರ್ ಬಂದಿದ್ದನ್ನು ನೋಡಿ ದಂಗು ಬಡಿದಿದ್ದಾರೆ. ಆರ್ಡರ್ನಲ್ಲಿ 300ಕ್ಕೂ ಹೆಚ್ಚು ಬರ್ಗರ್ಗಳು ಹಾಗೂ 100ಕ್ಕೂ ಹೆಚ್ಚು ಪಾನೀಯಗಳಿದ್ದು, ಜೊತೆಗೆ 20 ನಗೆಟ್ಗಳು, ಫ್ರೈಸ್ನ 69 ಪ್ಯಾಕ್ಗಳು, ವೆನಿಲ್ಲಾ ಕೋಕ್ ಹಾಗೂ ಚೀಸ್ಗಳನ್ನೂ ಸಹ ಹೇಳಲಾಗಿದೆ. ಈ ಜಂಬೋ ಆರ್ಡರ್ನ ವಿವರಗಳನ್ನು ಮ್ಯಾಕ್ಡೊನಾಲ್ಡ್ಸ್ನ ಸಿಬ್ಬಂದಿಯಲ್ಲಿ ಒಬ್ಬರು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Read More »ಕಾನೂನು ಹೋರಾಟದಲ್ಲಿ ರಿಲಯನ್ಸ್ ವಿರುದ್ಧ ಅಮೆಜಾನ್ಗೆ ಜಯ
ನವದೆಹಲಿ: ಭಾರತದ ಆನ್ಲೈನ್ ವ್ಯಾಪಾರದ ಪ್ರತಿ ಸ್ಪರ್ಧಿಗಳಾದ ಮುಕೇಶ್ ಅಂಬಾನಿ ಮತ್ತು ಜೆಫ್ ಬೆಜೋಸ್ ನಡುವಿನ ಕಾನೂನು ಹೋರಾಟದಲ್ಲಿ ಜೆಫ್ ಗೆ ಜಯದಕ್ಕಿದೆ. ಫ್ಯೂಚರ್ ಗ್ರೂಪ್ನ ರಿಟೇಲ್ ಆಸ್ತಿಯನ್ನು ಖರೀದಿಸುವ 3.4 ಶತ ಕೋಟಿ ಡಾಲರ್ ಮೊತ್ತದ ಒಪ್ಪಂದವನ್ನು ರಿಲಯನ್ಸ್ ಕಂಪನಿ ಮುಂದುವರಿ ಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಇದರಿಂದಾಗಿ ಅಮೆಜಾನ್ಗೆ ದೊಡ್ಡ ಯಶಸ್ಸುಸಿಕ್ಕಂತಾಗಿದೆ. ತನ್ನ ಪಾಲುದಾರ ಸಂಸ್ಥೆ ಫ್ಯೂಚರ್ ಗ್ರೂಪ್ ವಿರುದ್ಧ ಅಮೆಜಾನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತನ್ನ ರಿಟೇಲ್ …
Read More »