Breaking News

ವಾರಾಂತ್ಯ ಕರ್ಫ್ಯೂ: ಸ್ಥಳೀಯ ಆರ್ಥಿಕತೆಗೆ ಮತ್ತೆ ಕುಸಿತದ ಭಯ

ಸರಕಾರವು ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಇದು ಒಟ್ಟಾರೆ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಸ್ಥಳೀಯ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಅಪಾಯವಿದೆ.   ಈ ಹಿಂದಿನ ಲಾಕ್‌ಡೌನ್‌ ಹಾಗೂ ಅನಂತರ ನಿರ್ಬಂಧಗಳ ಸಡಿಲಿಕೆ ಬಳಿಕ ಇತ್ತೀಚೆಗಷ್ಟೇ ದೈನಂ ದಿನ ಜನ ಜೀವನ ಸಾಮಾನ್ಯ ಸ್ಥಿತಿಗೆ ತಲುಪಿತ್ತು. ಅಷ್ಟರಲ್ಲಿ ಮತ್ತೊಮ್ಮೆ ಹಿಂದಿನ ಕರಾಳ ಸ್ಥಿತಿಯ ಭೀತಿ …

Read More »

ವೀಕೆಂಡ್ ಕರ್ಫ್ಯೂ ವೇಳೆ ಎಂದಿನಂತೆ ಸಂಚರಿಸಲಿವೆ ಕೆಎಸ್‌ಆರ್‌ಟಿಸಿ ಬಸ್‌; ಆದರೆ ಬಿಎಂಟಿಸಿ ಬಸ್‌ ಸಂಚಾರ ಇರಲ್ಲ

ಬೆಂಗಳೂರು: ಒಮಿಕ್ರಾನ್​ ಮತ್ತು ಮೂರನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದರಂತೆ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಗೊಳಿಸಿದೆ. ಮುಂದಿನ ಎರಡು ವಾರಗಳ ಕಾಲ ವೀಕೆಂಡ್​ ಕರ್ಫ್ಯೂ ಇರಲಿದ್ದು, ಈ ವೇಳೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ (Bus) ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊವಿಡ್​ಗೆ (Coronavirus) ಸರ್ಕಾರ ಹೇರಿರುವ ನಿಯಮ‌ …

Read More »

ಭಾನುವಾರದಿಂದ ತಮಿಳುನಾಡಿನಲ್ಲಿ ಸಂಪೂರ್ಣ ಲಾಕ್‌ಡೌನ್, ನಾಳೆಯಿಂದ ರಾತ್ರಿ ಕರ್ಫ್ಯೂ

ಚೆನ್ನೈ: ಒಮಿಕ್ರಾನ್ (omicron) ರೂಪಾಂತರದ ಪ್ರಾಬಲ್ಯದಿಂದಾಗಿ ಹೆಚ್ಚುತ್ತಿರುವ ಕೊವಿಡ್ -19 (Covid 19)ಪ್ರಕರಣಗಳನ್ನು ತಡೆಯಲು ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ (Lockdown) ಹೇರುವುದಾಗಿ ತಮಿಳುನಾಡು ಸರ್ಕಾರ ಬುಧವಾರ ಪ್ರಕಟಿಸಿದೆ. ಇದಲ್ಲದೆ, ಜನವರಿ 6 (ಗುರುವಾರದಿಂದ) ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ (night curfew)ವಿಧಿಸಲಾಗಿದೆ. ಈ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ನೇತೃತ್ವದಲ್ಲಿ ರಾಜ್ಯದ ಆರೋಗ್ಯ ಸಚಿವ …

Read More »

ಇವಳೂ ವೈದ್ಯೆ, ಅವಳೂ ವೈದ್ಯೆ: ನಾಗ್ಪುರದಲ್ಲಿ ಇವರಿಬ್ಬರ ಮದುವೆ, ಗೋವಾದಲ್ಲಿ ಹನಿಮೂನ್‌

ನಾಗ್ಪುರ (ಮಹಾರಾಷ್ಟ್ರ): ಇತ್ತೀಚೆಗೆ ಸಲಿಂಗಿಗಳ ಲಿವ್‌ ಇನ್‌ ರಿಲೇಷನ್‌ನಲ್ಲಿ ಇರುವುದು, ಮದುವೆಯಾಗುವುದು ಸಾಮಾನ್ಯ ಎನಿಸಿಬಿಟ್ಟಿದೆ. ಹಿಂದೊಮ್ಮೆ ತಾವು ಇಂಥವರು ಎಂದು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತಿದ್ದವರು, ಇದು ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆ, ತಮ್ಮದೇನೂ ತಪ್ಪಿಲ್ಲ ಎನ್ನುವ ವಾಸ್ತವಕ್ಕೆ ಬಂದಿದ್ದಾರೆ. ನಿಸರ್ಗವೇ ತಮ್ಮ ದೇಹ ಪ್ರಕೃತಿಯನ್ನು ಈ ರೀತಿ ಮಾಡಿರುವಾಗ ತಮ್ಮದಲ್ಲದ ತಪ್ಪಿಗೆ ಏಕೆ ಮುಜುಗರ ಪಟ್ಟುಕೊಳ್ಳಬೇಕು ಎನ್ನುವುದು ಅವರ ವಾದ. ಇದೇ ರೀತಿಯ ವಾದವನ್ನೇ ಮುಂದಿಟ್ಟು ಇದೀಗ ಇಬ್ಬರು ಮಹಿಳಾ ವೈದ್ಯರು ಮದುವೆಯಾಗುವ …

Read More »

ಸದ್ದು ಗದ್ದಲವಿಲ್ಲದೇ ಮಜಲಬೆಟ್ಟು ಬೀಡುವಿನಲ್ಲಿ ನಟಿ ಶುಭಾ ಪೂಂಜಾ ವಿವಾಹ,

ಉಡುಪಿ:ಕನ್ನಡ ಚಿತ್ರರಂಗದ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಬುಧವಾರ(ಜನವರಿ 05) ಶಿರ್ವದ ನಿವಾಸದಲ್ಲಿ ಸುಮಂತ್ ಜತೆ ಹಸೆಮಣೆ ಏರಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ನಿವಾಸದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿರುವುದಾಗಿ ಮೂಲಗಳು ತಿಳಿಸಿವೆ.   ಕಳೆದ ವರ್ಷವೇ ವಿವಾಹವಾಗುವ ವದಂತಿ ಇತ್ತು, ಆದರೆ ಲಾಕ್ ಡೌನ್ ನಿಂದಾಗಿ ವಿವಾಹ ಮುಂದೂಡಲಾಗಿತ್ತು. ಇಂದು ಸುಮಂತ್ ಮತ್ತು ಶುಭಾ ಪೂಂಜಾ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿರ್ವದ ಮಜಲಬೆಟ್ಟು ಬೀಡುವಿನಲ್ಲಿರುವ …

Read More »

ಬೆಳಗಾವಿಯ ನೂತನ ಡಿಸಿಪಿಯಾಗಿ ರವೀಂದ್ರ ಗಡಾದಿ ನೇಮಕ

ಬೆಳಗಾವಿಯ ನೂತನ ಡಿಸಿಪಿಯಾಗಿ ರವೀಂದ್ರ ಗಡಾದಿ ನೇಮಕವಾಗಿದ್ದಾರೆ. ಡಿಸಿಪಿಯಾಗಿದ್ದ ವಿಕ್ರಂ ಅಮಟೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ರವೀಂದ್ರ ಗಡಾದಿ ಅವರನ್ನು ನೇಮಕ ಮಾಡಲಾಗಿದೆ. ರವೀಂದ್ರ ಗಡಾದಿ 2017ರ ಐಪಿಎಸ್ ಕೇಡರ್ ಆಗಿದ್ದು, ಈ ಹಿಂದೆ ಬೆಳಗಾವಿಯಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದ್ದಾರೆ. ಮೂಲತಃ ಅಥಣಿಯವರಾದ ಗಡಾದಿ, ಸಧ್ಯಕ್ಕೆ ಹೆಸ್ಕಾಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈಚಿನ ಬೆಳಗಾವಿ ಗಲಭೆಗೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದ್ದರು. ನಂತರ ಪೊಲೀಸ್ ಆಯುಕ್ತರನ್ನು …

Read More »

ಕೇವಲ 634 ರೂ.ಗೆ LPG ಗ್ಯಾಸ್​ ಸಿಲಿಂಡರ್ ಸಿಗುತ್ತೆ, ಎಲ್ಲಿ? ಹೇಗೆ ಅಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ ವರ್ಷ ಆರಂಭವಾದ ಬಳಿಕ ಸರ್ಕಾರ ಜನವರಿಯಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.     ATM ವಿತ್​ಡ್ರಾವಲ್ ಶುಲ್ಕ, ITR ಫೈಲಿಂಗ್, ಕ್ಯಾಶ್ ಹಿಂಪಡೆಯುವ ಶುಲ್ಕ, LPG ಗ್ಯಾಸ್​ ಸಿಲಿಂಡರ್​ ಬೆಲೆ ಪರಿಷ್ಕರಣೆ… ಹೀಗೆ ಮುಂತಾದ ವಿಷಯಗಳಲ್ಲಿ ಬದಲಾವಣೆ ಮಾಡಿದೆ, ಇದರ ಭಾಗವಾಗಿ ನಾವು ಈಗ ಹೇಳುತ್ತಿರುವುದು ಕಾಂಪೋಸಿಟ್​ ಸಿಲಿಂಡರ್ ಬಗ್ಗೆ. ಅವು ಸಾಮಾನ್ಯ​ ಸಿಲಿಂಡರ್​​ಗಳಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತವೆ.   ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಎಲ್‌ಪಿಜಿ ಸಿಲಿಂಡರ್ …

Read More »

ವಿಧಾನಸೌಧ, ವಿಕಾಸಸೌಧ, MS ಕಟ್ಟಡ’ಗಳಿಗೆ ‘ಸಾರ್ವಜನಿಕರ ಪ್ರವೇಶ’ಕ್ಕೆ ನಿರ್ಬಂಧ

ಬೆಂಗಳೂರು: ಕೊರೋನಾ ಹಾಗೂ ಓಮಿಕ್ರಾನ್ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳದ ಕಾರಣದಿಂದಾಗಿ, ವಿಧಾನಸೌಧ (Vidhan Soudha ), ವಿಕಾಸಸೌಧ ( Vikas Soudha ) ಹಾಗೂ ಬಹುಮಹಡಿ ಕಟ್ಟಡಗಳಿಗೆ ( MS Building ) ಸಾರ್ವಜನಿಕರ ಪ್ರವೇಶಕ್ಕೆ ( Public Entry ) ರಾಜ್ಯ ಸರ್ಕಾರ ( Karnataka Government ) ನಿರ್ಬಂಧ ವಿಧಿಸಿದೆ. 2 ಡೋಸ್ ಕೊರೋನಾ ಲಸಿಕೆ ಪಡೆದವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.   …

Read More »

ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಮಕ್ಕಳಿಗೆ ಶರವೇಗದಲ್ಲಿ‌ ‌ಮುಟ್ಟಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದ ಶಾಸಕ ಸತೀಶ್‌ ಜಾರಕಿಹೊಳಿ

ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಮಕ್ಕಳಿಗೆ ಶರವೇಗದಲ್ಲಿ‌ ‌ಮುಟ್ಟಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ಇಲ್ಲಿನ ಶ್ರೀಗುರುಸಿದ್ಧ ಸ್ವಾಮಿಜೀ ಹುಸಿಕೊಳ್ಳಮಠ ಸಭಾ ಭವನದಲ್ಲಿ ನಡೆದ ಅರಿವಿನ ತಾಯಿಗೆ ನಮನ ಸಾವಿತ್ರಿಬಾಯಿ ಫುಲೆ ಜಯಂತೋತ್ಸವ ಮತ್ತು ಭೀಮಾ ಕೋರೆಗಾಂವ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿಟ್ಟ ಮಹಿಳೆ‌ಯಾದ ಸಾವಿತ್ರಿಬಾಯಿ ಫುಲೆ ಜನಿಸದೇ ಇದ್ದಿದ್ದರೆ ಮಹಿಳೆಯರು ಶಿಕ್ಷಣ ‌ಪಡೆಯಲು‌ ವಿಳಂಬವಾಗುತ್ತಿತ್ತು. ಅವರ ಹೋರಾಟದಿಂದ ಈಗ ಮಹಿಳೆಯರು ಎಲ್ಲ …

Read More »

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ತಾರೆಯರ ನಡುವೆ ಮತ್ತೆ ಯುದ್ಧ ಶುರುವಾಯ್ತಾ?

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ತಾರೆಯರ ನಡುವೆ ಮತ್ತೆ ಯುದ್ಧ ಶುರುವಾಯ್ತಾ? ಇಬ್ಬರು ನಟರ ನಡುವೆ ಕಿತ್ತಾಟ ಆರಂಭ ಆಗಿದೆಯಾ? ಇಂಥದ್ದೊಂದು ಪ್ರಶ್ನೆ ಮೂಡಲು ಕಾರಣ ಒಂದು ವಿಡಿಯೋ. ಶಿವಣ್ಣ ಹಾಗೂ ರಾಜ್‌ ಬಿ ಶೆಟ್ಟಿ ನಡುವೆ ನಡೆದ ಒಂದು ಸಂಭಾಷಣೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಿವರಾಜ್‌ಕುಮಾರ್ ರೌದ್ರಾವತಾರ ತಾಳಿದ್ದು, ಒಂದು ಮೊಟ್ಟೆಯ ಕಥೆ ಸಿನಿಮಾ ನಾಯಕನಿಗೆ ಅವಾಜ್ ಹಾಕಿದ್ದಾರೆ. ಶಿವಣ್ಣ ಎಷ್ಟು ಆರಾಮಾಗಿರುತ್ತಾರೋ ಅಷ್ಟೇ ಖಡಕ್ ವ್ಯಕ್ತಿತ್ವ. …

Read More »