Breaking News

ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಏಪ್ರಿಲ್ 22ರಿಂದ ಮೇ 18ರ ತನಕ ವಿವಿಧ ಪರೀಕ್ಷೆಗಳು ನಡೆಯಲಿವೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಏಪ್ರಿಲ್, ಮೇ ತಿಂಗಳಲ್ಲಿ ನಡೆಸಲು ತಯಾರಿ ನಡೆದಿತ್ತು. ಈ ಹಿಂದೆಯೂ ಪಿಯು ಬೋರ್ಡ್​ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಆದರೆ, ಜೆಇಇ (JEE) ಪರೀಕ್ಷೆಯ ಮೊದಲನೆಯ ಸೆಷನ್ ಏಪ್ರಿಲ್ 16ರಿಂದ 21ರವರೆಗೆ ನಡೆಸಲು ವೇಳಾಪಟ್ಟಿ ಬಿಡುಗಡೆ ಆಗಿತ್ತು. ಇದೇ …

Read More »

ಪಂಚರಾಜ್ಯʼಗಳ ಅಧಿಕಾರದ ಭವಿಷ್ಯ : ಯಾರಿಗೆ ಎಷ್ಟು ಸ್ಥಾನ?

ನವದೆಹಲಿ : ಪಂಚರಾಜ್ಯಗಳಲ್ಲಿ ಚುನಾವಣೆಗಳು ಮುಗಿದಿದ್ದು, ವಿವಿಧ ಸಂಸ್ಥೆಗಳಿಂದ ನಡೆಯಲ್ಪಟ್ಟ ಬಹು ನಿರೀಕ್ಷಿತ ಚುನಾವಣೋತ್ತರ ಫಲಿತಾಂಶ ಹೊರ ಬಿದ್ದಿವೆ. ಹಾಗಾದ್ರೆ, ಈ ಚುನಾವಣೋತ್ತರ ಫಲಿತಾಂಶ ಹೇಳೋದೇನು? ರಾಜ್ಯ ರಾಜ್ಯದಲ್ಲಿ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ? ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಗಲಿದ್ದು, ಯೋಗಿ ಪುನರಾಗಮನವಾಗಲಿದೆ ಎಂದು ಮ್ಯಾಟ್ರಿಜ್ ಭವಿಷ್ಯ ನುಡಿದಿದ್ದಾರೆ. ಸಮೀಕ್ಷೆಯ ಪ್ರಕಾರ, ಎಸ್ ಪಿ 119-134 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ಬರಲಿದೆ. ಉತ್ತರ …

Read More »

ಜೀವನದಲ್ಲಿ ಬೇಸರಗೊಂಡು ಸಾವಿಗೂ ಮೊದಲೇ ಸಮಾಧಿ ಸಿದ್ಧಪಡಿಸಿಕೊಂಡ ವ್ಯಕ್ತಿ!

ದಾವಣಗೆರೆ: ಸಾಮಾನ್ಯವಾಗಿ ವ್ಯಕ್ತಿ ಸಾವನ್ನಪ್ಪಿದ ನಂತರ ಗುಂಡಿ ತೋಡಿ ಮಣ್ಣು ಮಾಡ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಜೀವನದಲ್ಲಿ ಜುಗುಪ್ಸೆಗೊಂಡು ತನ್ನ ಮರಣಕ್ಕೂ ಮೊದಲೇ ಸಮಾಧಿಯನ್ನು ತಯಾರಿಸಿಕೊಂಡಿದ್ದಾರೆ. ಹರಿಹರ ತಾಲೂಕಿನ ಜರೇಕಟ್ಟೆ ಗ್ರಾಮದ ನಿವಾಸಿ ತಿಪ್ಪಣ್ಣರಾವ್ ಎಂಬುವವರು ಜೀವನದಲ್ಲಿ ಬೇಸರಗೊಂಡು ಸಾವಿನ ಮೊದಲೇ ಸಮಾಧಿ ನಿರ್ಮಾಣ ಮಾಡಿಕೊಂಡಿದ್ದಾರೆ. 70 ವರ್ಷದ ತಿಪ್ಪಣ್ಣ ಕಳೆದ ಹದಿನೈದು ವರ್ಷಗಳ ಹಿಂದೆಯೇ ಈ ಸಮಾಧಿಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಮರಳಿ ಮಣ್ಣಿಗೆ ಎಂದು ಹೆಸರಿಟ್ಟಿದ್ದಾರೆ. ಇನ್ನೊಬ್ಬರ ಹಂಗಿಗಾಗಿ …

Read More »

ಇವರಿಬ್ಬರು ಆತನನ್ನು ಒಂದು ವರ್ಷ ಸತಾಯಿಸಿದ್ದರು; ಕೊನೆಗೂ ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಬಿದ್ದರು..

ಚಿತ್ರದುರ್ಗ: ಇವರಿಬ್ಬರು ಆತನನ್ನು ಒಂದು ವರ್ಷ ಕಾಲ ಸತಾಯಿಸಿದ್ದರು. ಆದರೆ ಇಂದು ಕೊನೆಗೂ ರೆಡ್​ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹೀಗೆ ಸಿಕ್ಕಿಬಿದ್ದವರ ಹೆಸರು ಸುಷ್ಮಾರಾಣಿ ಮತ್ತು ಜಯಲಕ್ಷ್ಮಿ. ಚಿತ್ರದುರ್ಗ ಜಿಲ್ಲೆಯ ಮದಕರಿಪುರ ಗ್ರಾಮ ಪಂಚಾಯತಿ ಪಿಡಿಒ ಸುಷ್ಮಾರಾಣಿ ಮತ್ತು ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮಿ ಬಂಧಿತ ಆರೋಪಿಗಳು. ಇವರು ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಸುರೇಶ್ ಎಂಬ ವ್ಯಕ್ತಿಯ ದೂರು ಆಧರಿಸಿ ಎಸಿಬಿ ಅಧಿಕಾರಿಗಳು ಈ ದಾಳಿಯನ್ನು ನಡೆಸಿದ್ದರು. ಸುರೇಶ್​ …

Read More »

ಶಾಕಿಂಗ್ ನ್ಯೂಸ್: ಅಡುಗೆ ಎಣ್ಣೆ ದರ ಗಗನಕ್ಕೆ, ಖರೀದಿಗೆ ಮಿತಿ; 175 ರೂ.ಗಿಂತಲೂ ಏರಿಕೆ ಕಂಡ ಸೂರ್ಯಕಾಂತಿ ಎಣ್ಣೆ

ಬೆಂಗಳೂರು: ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಸೂರ್ಯಕಾಂತಿ ಎಣ್ಣೆ ದರ 175 ರೂಪಾಯಿವರೆಗೆ ಏರಿಕೆಯಾಗಿದ್ದು, ಯುದ್ಧ ಮುಂದುವರೆದಲ್ಲಿ ಸೂರ್ಯಕಾಂತಿ ಎಣ್ಣೆ ದರ ಮತ್ತಷ್ಟು ದುಬಾರಿಯಾಗಿ 200 ರೂ.ವರೆಗೂ ತಲುಪುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ದರ 40 ರೂ.ನಷ್ಟು ಏರಿಕೆ ಕಂಡಿದೆ. ಇದರ ಪರಿಣಾಮ ಹಲವು ಕಡೆಗಳಲ್ಲಿ ಅಡುಗೆ ಎಣ್ಣೆ ಖರೀದಿಗೆ ಗ್ರಾಹಕರಿಗೆ ಮಿತಿ ಹೇರಲಾಗಿದೆ. ಯುದ್ಧದ ಕಾರಣದಿಂದಾಗಿ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ದರ ಇನ್ನಷ್ಟು ಏರಿಕೆಯಾಗಬಹುದು ಎಂದು ಹೇಳಲಾಗಿದೆ. …

Read More »

ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ನಿರೂಪಕ ಅರುಣ್ ಬಡಿಗೇರ್ ವಿರುದ್ಧ ದೂರು

ಮಂಗಳೂರು, ಮಾ.7: ಖಾಸಗಿ ಟಿವಿ ವಾಹಿನಿ ‘ಪಬ್ಲಿಕ್ ಟಿವಿ ನ್ಯೂಸ್ ಚಾನೆಲ್ ನ ಚರ್ಚಾ ಕಾರ್ಯಕ್ರಮವೊಂದರಲ್ಲಿ ಅದರ ನಿರೂಪಕ ಅರುಣ್ ಬಡಿಗೇರ್ ಎಂಬಾತ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಮುಲ್ಕಿ ಕಾರ್ನಾಡು ಗ್ರಾಮದ ಕೆ.ಎಸ್. ರಾವ್ ನಗರ ನಿವಾಸಿ ಎಸ್.ಅಬ್ದುಲ್ ಖಾದರ್ ಎಂಬವರು ಈ ದೂರು ನೀಡಿದ್ದಾರೆ. ಪಬ್ಲಿಕ್ ಟಿವಿ ನ್ಯೂಸ್ ಚಾನೆಲ್ ನಲ್ಲಿ ಫೆ.22ರಂದು ರಾತ್ರಿ …

Read More »

ಸಾರಿಗೆ ಬಸ್​ನಲ್ಲಿಯೇ ಗಾಂಜಾ ಸಾಗಾಟಕ್ಕೆ ಯತ್ನ

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ (Pushpa) ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಧೂಳೆಬ್ಬಿಸಿದ್ದು ಸುಳ್ಳಲ್ಲ. ಆದರೆ, ಅನೇಕ ಖದೀಮರಿಗೆ ಈ ಸಿನಿಮಾದ ಕೆಲವು ಕಳ್ಳತನ ಮಾರ್ಗಗಳು ಪ್ರಯೋಗಿಸಲು ಮುಂದಾಗಿ (Bidar) ನಡೆದಿದೆ. ಬೀದರ್​ ಅತ್ತ ಮಹಾರಾಷ್ಟ್ರ (Maharashtra) ಇತ್ತ ತೆಲಂಗಾಣವನ್ನು (Telangana ) ಹಂಚಿಕೊಂಡಿರುವ ಜಿಲ್ಲೆ. ಪ್ರಮುಖ ವಾಣಿಜ್ಯ ಚಟುವಟಿಕೆಗಳಿಗಾಗಿ ಎರಡೂ ರಾಜ್ಯದ ಜನರು ಈ ಜಿಲ್ಲೆಯನ್ನೇ ಬಳಸಿಕೊಂಡು ಓಡಾಡುತ್ತಾರೆ. ಸಾರಿಗೆ ಬಸ್​ನಲ್ಲಿಯೇ ಸಾಗಾಟಕ್ಕೆ ಯತ್ನ ಗಡಿ ಜಿಲ್ಲೆಯಲ್ಲಿ ಕೆಲವು ಅಕ್ರಮಗಳ …

Read More »

ಲೈಫೇ ಬೇಡ ಅಂತ ಲೈವ್ ಆಗಿ ವಿಷ ಕುಡಿದ; ಆತ್ಮಹತ್ಯೆಗೆ ಯತ್ನ..

ಚಿಕ್ಕಬಳ್ಳಾಪುರ: ಪ್ರೇಯಸಿಯನ್ನು ಪತ್ನಿಯಾಗಿಸಿಕೊಳ್ಳಲು ಆಗುವುದಿಲ್ಲ ಎಂದು ಬೇಸತ್ತ ಪ್ರೇಮಿಯೊಬ್ಬ ಆಕೆಗಾಗಿ ಜೀವ ಕಳೆದುಕೊಳ್ಳಲು ಲೈವ್ ಆಗಿ ವಿಷ ಸೇವಿಸಿದ ಪ್ರಕರಣವೊಂದು ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ತಿರ್ನಹಳ್ಳಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ವರದಿಯಾಗಿದೆ.   ಇಲ್ಲಿನ ಕಳವಾರ ಗ್ರಾಮದ ಕಿಶೋರ್​ (25) ಪ್ರೇಯಸಿಗಾಗಿ ವಿಷ ಕುಡಿದ ಪ್ರೇಮಿ. ಈತ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯೊಂದಿಗೆ ಒಡನಾಟವನ್ನೂ ಹೊಂದಿದ್ದ. ಆದರೆ ಆಕೆ ಈತನನ್ನು ಮದುವೆಯಾಗದಂತೆ ಅವಳ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧ ಮಾತ್ರವಲ್ಲದೆ …

Read More »

ಷೇರುಪೇಟೆಯ ಅರಸಿಯಾಗಿದ್ದ ಚಿತ್ರಾ ಅರೆಸ್ಟ್‌: ನಿಗೂಢ ಯೋಗಿಯ ಜತೆ ಸಂಪರ್ಕ!

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್‌ನ ಸರ್ವರ್ ವ್ಯವಸ್ಥೆಯನ್ನು ಖಾಸಗಿ ಕಂಪನಿ ದೆಹಲಿ ಮೂಲದ ಒಪಿಜಿ ಸೆಕ್ಯುರೀಟಿಸ್ ಪ್ರೈವೇಟ್ ಲಿಮಿಟೆಡ್​ನ ಮಾಲೀಕ ಸಂಜಯ್ ಗುಪ್ತಾ ಮತ್ತು ಪ್ರಮೋಟರ್​ಗಳು ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳ ಜತೆಗೂಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದೇ ರೀತಿ, ಮುಂಬೈನ ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳು 2010-12ರ ಅವಧಿಯಲ್ಲಿ ಸ್ಟಾಕ್ ಎಕ್ಸ್​ಚೇಂಜ್​ನ ಸರ್ವರ್​ಗೆ ಲಾಗಿನ್ ಆಗುವುದಕ್ಕೆ ಹೊರಗಿನ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ರೀತಿ ಮಾಡಿದ ಷೇರುಪೇಟೆಯ ಇತರ ಕಂಪನಿಗಳಿಗಿಂತ …

Read More »

ಮಹಿಳೆ ಕೆನ್ನೆಗೆ ಅಂಟಿಕೊಂಡ ಹಲ್ಲುಜ್ಜುವ ಬ್ರಷ್; ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು.!

ತಮಿಳುನಾಡು‌ ಕಾಂಚೀಪುರಂನ ಆಯಿಲ್ ಸ್ಟ್ರೀಟ್‌ನಲ್ಲಿ ವಾಸವಾಗಿದ್ದ 34 ವರ್ಷದ ರೇವತಿ ವಿಚಿತ್ರವಾದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮಾರ್ಚ್ ನಾಲ್ಕನೇ ತಾರೀಖಿನಂದು ರೇವತಿಯವರು ಹಲ್ಲುಜ್ಜುತ್ತಿರುವಾಗ, ಕಾಲು ಜಾರಿ‌ ಕೆಳಗೆ ಬಿದ್ದಿದ್ದಾರೆ. ಆಕೆ ಬಿದ್ದ ರಭಸಕ್ಕೆ ಬಾಯಿಯಲ್ಲಿದ್ದ ಹಲ್ಲುಜ್ಜುವ ಬ್ರಷ್ ಟೂತ್ ಫಿಕ್ಸ್ ಸೀಳಿಕೊಂಡು,‌ ಕೆನ್ನೆಯ ಭಾಗದಲ್ಲಿ ಅಂಟಿಕೊಂಡಿದೆ.‌ ಈ ಅಪಘಾತದಿಂದ‌ ಬಾಯಿ ತೆರೆಯಲು, ಮುಚ್ಚಲು ಸಾಧ್ಯವಾಗದ ರೇವತಿಯನ್ನು ರಕ್ಷಿಸಿ ಕಾಂಚೀಪುರಂ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ನರೇನ್ ಮತ್ತು ವೆಂಕಟೇಶ್ …

Read More »