Breaking News

ಮೂವರು ಯುವತಿಯರು ನಾಪತ್ತೆ ದೂರು ದಾಖಲು

ಬೆಳಗಾವಿಯ ವಿವಿಧ ಆಧಾರ ಕೇಂದ್ರಗಳಲ್ಲಿದ್ದ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ.       ಕಂಪೌಂಡ್ ಜಿಗಿದು ನಾಪತ್ತೆ ಇಲ್ಲಿನ ಸದಾಶಿವ ನಗರದಲ್ಲಿರುವ ಸಮೃದ್ಧಿ ಸೇವಾ ಸಂಸ್ಥೆ ಸ್ಪೂರ್ತಿ ಸ್ವಾಧಾರ ಗೃಹ ಆಶ್ರಯದಲ್ಲಿದ್ದ ಮೇಘಾ ಮಲ್ಲಪ್ಪ ಹಳಬರ ಎಂಬ ಮಹಿಳೆ ಜನವರಿ ೨೨ ರಂದು ಮುಂಜಾನೆ ಯಾರಿಗೂ ಹೇಳದೆ ಕೇಳದೆ ಸ್ವಾಧಾರ ಗೃಹದ ಕಾಂಪೌಂಡ್ ಜಿಗಿದು ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಕಾಣೆಯಾದವರು ಮೂಲತಃ ರಾಯಭಾಗ ತಾಲ್ಲೂಕಿನ ವಡಕಿ ತೋಟ ಹಾರೂಗೇರಿ ನಿವಾಸಿಯಾಗಿದ್ದು, …

Read More »

ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ರಿಲೀಸ್​​.. ಲವ್ ಜಿಹಾದ್‌ಗೆ ಶಿಕ್ಷೆ; ಮತ್ತೇನಿದೆ?

ಉತ್ತರದ ನಾಡಿನ ಚುನಾವಣೆಗೆ ಇನ್ನೊಂದು ದಿನ ಬಾಕಿ ಇದೆ. ಚುನಾವಣೆಗೂ 48 ಗಂಟೆಯ ಮುಂಚೆಯೇ ಕಮಲ ಪಡೆ ತನ್ನ ಪ್ರಣಾಳಿಕೆಯನ್ನ ರಿಲೀಸ್​ ಮಾಡಿದೆ. ನಾಡಿನ ರೈತರು ಹಾಗೂ ವಿದ್ಯಾರ್ಥಿಗಳಿಗೆ ಭರಪೂರದ ಭರವಸೆಗಳನ್ನೇ ಉಣಬಡಿಸಿದೆ. ಮುಖ್ಯವಾಗಿ ಲವ್‌ ಜಿಹಾದ್‌ಗೆ ಕಾಯ್ದೆ ಜಾರಿ ತರುವ ಭರವಸೆ ಪ್ರಸ್ತಾಪವಾಗಿದೆ. ಲವ್ ಜಿಹಾದ್‌ಗೆ ಶಿಕ್ಷೆ, ಮತದಾರರಿಗೆ ಭರಪೂರ ಭರವಸೆ ಒಂದು ದಿನ.. ಉತ್ತರದ ಚುನಾವಣಾ ಕದನಕ್ಕೆ ಇನ್ನೊಂದೇ ದಿನ ಬಾಕಿ. ಭಾರೀ ಜಿದ್ದಾಜಿದ್ದಿನ ಪ್ರಚಾರದ ನಡುವೆಯೇ …

Read More »

ಬೆಂಕಿ ಬಿದ್ದ ಮೇಲೆ ಬಾವಿ ತೋಡಿದ್ರು.. ಹಿಜಾಬ್ ವಿವಾದದಲ್ಲಿ ಸರ್ಕಾರ ಎಡವಿದ್ದು ಎಲ್ಲಿ..?

ಇಲ್ಲಿ ಯಾವ ಆಶಯಗಳಿದ್ವೋ ಏನೋ? ಆದ್ರೆ, ಸಂವಿಧಾನದ ಆಶಯಗಳು ಗಾಳಿ ಗೋಪುರವಾದವು.. ಈವರೆಗೆ ಇಲ್ಲದ ಹಿಜಾಬ್ ವಿವಾದ ಧುತ್ತನೇ ಎದ್ದು, ರಾಜ್ಯ ಧರ್ಮಾಧಾರಿತ ರಾಜಕಾರಣದ ಪ್ರಯೋಗಶಾಲೆ ಆಯ್ತು.. ಗುಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಸರ್ಕಾರ ಬಾವಿ ತೋಡಿತು. ಪರಿಸ್ಥಿತಿ ಕೈಮೀರಿದ ಮೇಲೆ ಎಚ್ಚೆತ್ತುಕೊಂಡಿತಾ ಸರ್ಕಾರ? ರಾಜ್ಯದೆಲ್ಲೆಡೆ ಹಿಜಾಬ್ ವಿವಾದ ಜೋರಾಗಿದೆ. ಇದನ್ನ ನಂದಿಸಲು ಸರ್ಕಾರ 3 ದಿನಗಳ ಕಾಲ ಕಾಲೇಜುಗಳಿಗೆ ರಜೆಯನ್ನೂ ಘೋಷಿಸಿದೆ. ಆದ್ರೆ, ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ …

Read More »

ಒಂದೇ ಕುಟುಂಬ ಐವರ ಬರ್ಬರ ಮರ್ಡರ್​​ಗೆ ರೋಚಕ ಟ್ವಿಸ್ಟ್​; ಕೊಲೆ ಆರೋಪಿ ಬಂಧನ

ಮಂಡ್ಯ: ಫೆಬ್ರವರಿ 6 ರಂದು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಗ್ರಾಮದಲ್ಲಿ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಒಂದೇ ಕುಟುಂಬದ ಲಕ್ಷ್ಮೀ (26), ರಾಜ್ (12), ಕೋಮಲ್ (7), ಕುನಾಲ್ (4), ಗೋವಿಂದ (8) ಅವ್ರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕಗ್ಗೊಲೆ ಮಾಡಲಾಗಿತ್ತು. ಇದೀಗ ಕೊಲೆ ಆರೋಪಿಯನ್ನ ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀ (30) ಬಂಧಿತ ಆರೋಪಿ. …

Read More »

ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಅಧಿಕಾರಿಗಳು ಶಾಮೀಲು, ಸರ್ಕಾರ ಸಾಥ್:‌ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

  ಬೆಳಗಾವಿ: ” ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಕೆಲವೊಂದು ಅಧಿಕಾರಿಗಳು ಶಾಮೀಲು ಆಗಿದ್ದು, ಇದಕ್ಕೆ ಸರ್ಕಾರವೂ ಸಾಥ್‌ ನೀಡಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.   ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮಾದ್ಯಮರೊಂದಿಗೆ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ 50 ಕೋಟಿ ರೂ. ವೆಚ್ಚದಲ್ಲಿ ಕೃಷಿ ಉತ್ಪನ ಮಾರುಕಟ್ಟೆ ನಿರ್ಮಿಸಲಾಗಿದೆ. ಪ್ರಭಾವಿಗಳಿಂದ ಖಾಸಗಿ ಮಾರುಕಟ್ಟೆ ಆರಂಭವಾಗುತ್ತಿದೆ. ಹೀಗಾಗಿ ಎರಡು ಮಾರುಕಟ್ಟೆ ಉಳಿಯುವ ಸಾಧ್ಯತೆ ಕಾಣುತ್ತಿದೆ. …

Read More »

ರೈತರ ಬಂಧನ ತಪ್ಪಿಸಲು ತಿದ್ದುಪಡಿ; ಸಾಗುವಳಿದಾರರಿಗೇ ಒತ್ತುವರಿ ಭೂಮಿ ಗುತ್ತಿಗೆ: ಸಚಿವ ಅಶೋಕ್ ಮಾಹಿತಿ

ಬೆಂಗಳೂರು: ರಾಜ್ಯದ ಲಕ್ಷಾಂತರ ಸಣ್ಣ ರೈತರ ಪಾಲಿಗೆ ಕಂಟಕಪ್ರಾಯವಾಗಿ ‘ಬಂಧನ ಭೀತಿ’ ತಂದೊಡ್ಡಿರುವ ಭೂ ಕಬಳಿಕೆ ನಿಷೇಧ ಕಾಯ್ದೆಯನ್ನು ಕೊಂಚ ಸಡಿಲಿಸಲು ಸರ್ಕಾರ ನಿರ್ಧರಿಸಿದೆ. ಜತೆಗೆ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಕಾಫಿ, ಅಡಕೆ ಇತ್ಯಾದಿ ಬೆಳೆ ಬೆಳೆಯುತ್ತಿರುವ ರೈತರಿಗೆ ಅದೇ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಬಯಸಿದೆ.   ಕಂದಾಯ ಇಲಾಖೆಯಿಂದ ಮುಂದಿನ ಕೆಲವು ವಾರ, ತಿಂಗಳಲ್ಲಿ ಒಂದಷ್ಟು ಮಹತ್ವಪೂರ್ಣ ತೀರ್ವನಗಳನ್ನು ಎದುರು ನೋಡಬಹುದಾಗಿದೆ. ಸೋಮವಾರ ವಿಜಯವಾಣಿ ಕಚೇರಿಯಲ್ಲಿ ನಡೆದ …

Read More »

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರವೇ ಡಬಲ್ ಗಿಫ್ಟ್ : ʼಫಿಟ್‌ಮೆಂಟ್ʼ ಜೊತೆ ʼಸ್ಯಾಲರಿʼಯೂ ಹೆಚ್ಚಳ |

ನವದೆಹಲಿ : ಏಳನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಪ್ರಕಾರ, ದೇಶಾದ್ಯಂತ ಸರ್ಕಾರಿ ನೌಕರರು(Government Employees) ಶೀಘ್ರದಲ್ಲೇ ಒಳ್ಳೆಯ ಸುದ್ದಿ ಪಡೆಯಬಹುದು. ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಕೇಂದ್ರ ಮತ್ತು ರಾಜ್ಯ ನೌಕರರ ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳವನ್ನ ಶೀಘ್ರದಲ್ಲೇ ಘೋಷಿಸಬಹುದು.   ವರದಿಗಳ ಪ್ರಕಾರ, ಫಿಟ್‌ಮೆಂಟ್ ಅಂಶದ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಫಿ‌ಟ್‌ಮೆಂಟ್ ಅಂಶವನ್ನು 2.57 ಪಟ್ಟು ಹೆಚ್ಚಿಸಿ …

Read More »

ವಿಚ್ಛೇತ ಮಹಿಳೆಯೊಂದಿಗೆ ಪ್ರೀತಿ ನಾಟಕವಾಡಿ ವಂಚನೆ

ಬೆಂಗಳೂರು,ಫೆ.7-ವಿಚ್ಛೇತ ಮಹಿಳೆಯನ್ನು ಪುಸಲಾಯಿಸಿ ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ಸಂಪರ್ಕ ಬೆಳೆಸಿ ಕೊಂಡು ಮೋಸ ಮಾಡಿರುವ ವ್ಯಕ್ತಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದಿರಾನಗರದ 30 ವರ್ಷದ ನೊಂದ ಮಹಿಳೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಪತಿಗೆ ವಿಚ್ಛೇಧನ ನೀಡಿದ್ದ ಮಹಿಳೆ ಇಬ್ಬರು, ಮಕ್ಕಳೊಂದಿಗೆ ಇಂದಿರಾನಗರದಲ್ಲಿ ಪ್ರತ್ಯೇಕ ವಾಸವಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಆ ಮಹಿಳೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. …

Read More »

ಎಂದೂ ಇಲ್ಲದ ಹಿಜಾಬ್ ವಿವಾದ ಇವತ್ತೇಕೆ ಸೃಷ್ಟಿ?: ಹೆಬ್ಬಾಳ್ಕರ್

ಬೆಳಗಾವಿ: ರಾಜ್ಯದಲ್ಲಿ ಬುಗಿಲೆದ್ದಿರುವ ಹಿಜಾಬ್ ವಿವಾದದ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಎಂದೂ ಇಲ್ಲದ ಹಿಜಾಬ್ ವಿವಾದ ಇವತ್ತೇಕೆ ಸೃಷ್ಟಿಯಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮಗಳ ಆಚಾರ ವಿಚಾರಕ್ಕೆ ಸಂವಿಧಾನದಲ್ಲೇ ಅವಕಾಶ ನೀಡಲಾಗಿದೆ. ನಮಗೆ ಯಾವ ಬಟ್ಟೆ ಬೇಕೋ, ಅದನ್ನು ತೊಡಬಹುದು. ಇಷ್ಟವಾದ ಆಹಾರ ಸೇವಿಸಬಹುದು. ಪ್ರತಿಯೊಂದಕ್ಕೂ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಹಿಜಾಬ್ …

Read More »

ತುಮಕೂರಲ್ಲಿ ಆರ್ಕೆಸ್ಟ್ರಾ ಕಲಾವಿದರನ್ನ ವೇಶ್ಯಾವಾಟಿಕೆ ದೂಡಲು ಯತ್ನ! ದಿನಕ್ಕೆ ಒಂದೂವರೆ ಸಾವಿರ ಕೊಡ್ತಾರೆ. ಆಡಿಯೋ ವೈರಲ್​

ತುಮಕೂರು: ಆರ್ಕೆಸ್ಟ್ರಾ ಕಲಾವಿದೆಯರನ್ನ ವೇಶ್ಯಾವಾಟಿಕೆಗೆ ಬರುವಂತೆ ಹಣದ ಆಮಿಷವೊಡ್ಡಿದ ಆರೋಪ ಆರ್ಕೆಸ್ಟ್ರಾ ಮಾಲೀಕ ವಿರದ್ಧವೇ ಕೇಳಿಬಂದಿದೆ. ದಿನಕ್ಕೆ ಒಂದೂವರೆ ಸಾವಿರ ಕೊಡ್ತಾರೆ. ಏನೂ ತೊಂದರೆ ಆಗಲ್ಲ, ನಾನೂ ಜತೆಯಲ್ಲೇ ಇರ್ತೀನಿ… ಎಂದು ಮಹಿಳಾ ಕಲಾವಿದೆಯೊಬ್ಬರ ಜತೆ ಸಂಭಾಷಣೆ ನಡೆಸಿದ ಆಡಿಯೋ ವೈರಲ್​ ಆಗಿದೆ.   ತುಮಕೂರಿನ ಸಂಜಯ್ ಮೆಲೋಡಿಸ್ ಆರ್ಕೆಸ್ಟ್ರಾ ಮಾಲೀಕ ನಾಣಿ ಹಂದ್ರಾಳ್ ಆರೋಪಿ. ಮಹಿಳಾ ಕಲಾವಿದೆಯರಿಗೆ ಕರೆ ಮಾಡಿ ನಾಣಿ ಹಂದ್ರಾಳ್ ಹಣದ ಆಮಿಷವೊಡ್ಡಿದ ಆಡಿಯೋ ವೈರಲ್ ಆಗಿದೆ. …

Read More »