Breaking News

ನನಗೆ ಸಿಗರೇಟ್ ಕೋಡಿ ಎಂದು ಜೈಲು ಸಿಬ್ಬಂದಿ ಮುಂದೆ ರಂಪಾಟ ಮಾಡಿದ್ದಾರೆಸಂಜನಾ

Spread the love

ಬೆಂಗಳೂರು: ಸಿಸಿಬಿ ನೋಟಿಸ್ ನೀಡಿದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕಿರಿಕ್ ಮಾಡುತ್ತಿರುವ ನಟಿ ಸಂಜನಾಗಲ್ರಾನಿ ಇದೀಗ ಜೈಲಿನಲ್ಲಿ ಮತ್ತೆ ಕ್ಯಾತೆ ತೆಗೆದಿದ್ದಾರೆ.

ಸಂಜನಾ ಎರಡು ದಿನಗಳ ನ್ಯಾಯಾಂಗ ಬಂಧನ ಇಂದು ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ್ದು, ಈ ಹಿನ್ನೆಲೆಯಲ್ಲಿ ನಟಿಯ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಇದರಿಂದ ಟೆನ್ಶನ್ ಗೆ ಒಳಗಾಗಿರುವ ನಟಿ, ನನಗೆ ಸಿಗರೇಟ್ ಕೋಡಿ ಎಂದು ಜೈಲು ಸಿಬ್ಬಂದಿ ಮುಂದೆ ರಂಪಾಟ ಮಾಡಿದ್ದಾರೆ

ನಟಿಯ ರಂಪಾಟದಿಂದ ಬೇಸತ್ತ ಜೈಲು ಸಿಬ್ಬಂದಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸದ್ಯ ಸಂಜನಾಳ ಮನವೊಲಿಸಲು ಜೈಲಿನ ಅಧಿಕಾರಿಗಳು ಕಷ್ಟ ಪಡುತ್ತಿದ್ದಾರೆ.

ಈ ಹಿಂದೆ ನಟಿ ಪರಪ್ಪನ ಅಗ್ರಹಾರ ಜೈಲಿನೊಳಗೆ ಹೋಗುವ ವೇಳೆಯೂ ತಕರಾರು ತೆಗೆದಿದ್ದರು. ಜೈಲಿಗೆ ಎಂಟ್ರಿ ಕೊಡುವಾಗಲೂ ಕಿರಿಕ್ ಮಾಡಿರುವ ಸಂಜನಾ, ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ. ನಾನು ಹೋಗಲ್ಲ..ಹೋಗಲ್ಲ ಎಂದು ಹಠಕ್ಕೆ ಬಿದ್ದಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಒಳಗೆ ಹೋಗಿ ಎಂದು ಹೇಳಿದ್ದಾರೆ. ನಂತರ ಒಂದು ನಿಮಿಷದ ಬಳಿಕ ಸಂಜನಾ ಒಳಗೆ ಹೋಗಿದ್ದರು.


Spread the love

About Laxminews 24x7

Check Also

ಸರ್ಕಾರಿ ವೈದ್ಯರು, ನರ್ಸ್​ಗಳಿಗೆ ಗ್ರಾಮೀಣ ಸೇವೆ ಕಡ್ಡಾಯ

Spread the loveಬೆಂಗಳೂರು: ನಗರ ಪ್ರದೇಶಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್​ಗಳು ಸೇರಿದಂತೆ ಇತರ ಸಿಬ್ಬಂದಿ ಇನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ