Breaking News

ಏಯ್​.. ಚೆನ್ನಾಗಿರೋ ಪಂಚೆ ಕೊಡಯ್ಯ.. ಕಲರ್​ ಇಲ್ದೇ ಇರೋದು ಕೊಡಬೇಡ: ಸಿದ್ದರಾಮಯ್ಯ

Spread the love

ಬೆಂಗಳೂರು: ತಮ್ಮ ಬಿರುಸಿನ ರಾಜಕೀಯ ಚಟುವಟಿಕೆಗಳಿಂದ ಕೊಂಚ ಬ್ರೇಕ್​ ತಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು ಶಾಪಿಂಗ್​ ಮಾಡಲು ತೆರಳಿದ್ದರು. ಹೌದು, ವಿಪಕ್ಷ ನಾಯಕರು ಇಂದು ನಗರದ ಚಿಕ್ಕಪೇಟೆಯ ಗಾಂಧಿ ಗ್ರಾಮೋದ್ಯೋಗ ಮಳಿಗೆಗೆ ಭೇಟಿ ಕೊಟ್ಟು ಬಟ್ಟೆ ಖರೀದಿಗೆ ಮುಂದಾದರು. Siddaramaiah cotton panche purchase

ಶಾಪಿಂಗ್​ ವೇಳೆ ಅಂಗಡಿ ಸಿಬ್ಬಂದಿಗೆ ಖಾದಿ ಶರ್ಟ್​ ಮತ್ತು ಪಂಚೆಗಳನ್ನು ತೋರಿಸಲು ಸಿದ್ದರಾಮಯ್ಯ ಕೇಳಿದರು. ಈ ವೇಳೆ, ಸಣ್ಣ ಬಾರ್ಡರ್​ ಇರೋ ಪಂಚೆ ತೋರಿಸಲು ಕೇಳಿದ ಸಿದ್ದರಾಮಯ್ಯ ದೊಡ್ಡ ಬಾರ್ಡರ್​ ಇರೋ ಪಂಚೆ ಬೇಡಯ್ಯ, ಚೆನ್ನಾಗಿರೋ ಪಂಚೆ ಕೊಡಯ್ಯ.. ಕಲರ್​ ಇಲ್ದೇ ಇರೋದು ಕೊಡಬೇಡಯ್ಯ ಎಂದು ಅಂಗಡಿ ಸಿಬ್ಬಂದಿಗೆ ಗದರಿದರು.

ಕೊನೆಗೆ ತಮ್ಮ ಇಷ್ಟವಾದ ಶರ್ಟ್​ ಹಾಗೂ ಪಂಚೆ ಜೋಡಿಯನ್ನು ಖರೀದಿಸಿದರು. ಮಾಜಿ ಸಿಎಂ ಅವರ ಶಾಪಿಂಗ್​ ಟ್ರಿಪ್​ಗೆ ಕಾಂಗ್ರೆಸ್​ ಮುಖಂಡ ಅಶೋಕ್​ ಪಟ್ಟನ್​ ಸಾಥ್​ ಕೊಟ್ಟರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ