ವಿಜಯಪುರಸರ್ಕಾರಿ ಗೌಡೌನ್ನಿಂದ ಅಕ್ರಮ ಅಕ್ಕಿ ಸಾಗಾಟ: 1,426 ಪಡಿತರ ಅಕ್ಕಿ ಚೀಲಗಳು ವಶಕ್ಕೆ*
: ಎಫ್.ಸಿ.ಐ.ಗೂಡ್ಸ್ ಶೆಡ್ ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಸಾಗಾಟ ಮಾಡುವಾಗ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ಜಂಟಿಯಾಗಿ ದಾಳಿಗೈದಿರುವ ಘಟನೆ ವಿಜಯಪುರ ನಗರದ ವಿಜಯಾ ಟೈರ್ಸ್ ಬಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ ನಿವಾಸಿಗಳಾದ ಗಜಾನನ ಭೀರಪ್ಪ ಮಕಾಳೆ, ಮಾರುತಿ ದೊಡಮನಿ ಹಾಗೂ ಇಕ್ಬಾಲ್ ತಹಶಿಲ್ದಾರ ಆರೋಪಿಗಳಾಗಿದ್ದಾರೆ. ಚಾಲಕ ಭೀರಪ್ಪನನ್ನು ವಶಕ್ಕೆ ಪಡೆಯಾಗಿದೆ.
ಇನ್ನು ಆರೋಪಿಗಳಿಂದ ಅಶೋಕ ಲೈಲಾಂಡ್ ಲಾರಿ, 1,426 ಕೆಜಿ ಅಕ್ಕಿ ಸೇರಿದಂತೆ 4,76,,310ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆದರ್ಶ ನಗರ ಗ್ರಾಮೀಣ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಈ ಕುರಿತು ಆದರ್ಶ ನಗರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.