ಬೆಂಗಳೂರು, (ಜೂನ್ 18): 2025-26ನೇ ಸಾಲಿನಲ್ಲಿ ಕರ್ನಾಟಕದ (Karnataka)ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಿಗದಿತ ಸಮಯಕ್ಕಿಂತ ಮೊದಲೇ ಮುಂಗಾರು ಮಳೆ (Monsoon Rains) ಪ್ರಾರಂಭವಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ಥವಾಗಿದೆ. ಹೀಗಾಗಿ ರಾಜ್ಯ ಸರ್ಕಾರ, ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಹಾಗೂ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಬಿಡುಗಡೆ ಮಾಡಿದೆ. ನಿಯಾಮಾನುಸಾರ ಅರ್ಹತೆಯಂತೆ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪರಿಹಾರ ಪಾವತಿಸಲು ಆದೇಶ ಹೊರಡಿಸಿದೆ. 1-4-2025ರಿಂದ 31-5-2025ರ ಅವಧಿಯಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿ ಆದೇಶಿಸಲಾಗಿದ್ದು, ಪೂರ್ಣ ಪ್ರಮಾಣ ಮನೆ ಕಳೆದುಕೊಂಡವರಿಗೆ 1.20 ಲಕ್ಷ ರೂ ಹಾಗೂ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವಂತೆ ಸೂಚಿಸಲಾಗಿದೆ
ಯಾವುದಕ್ಕೆ ಎಷ್ಟು ಪರಿಹಾರ
- ಪೂರ್ಣ ಹಾನಿಯಾದ ಮನೆಗೆ ರೂ.1.20 ಲಕ್ಷ ರೂ. ಪರಿಹಾರ. ಜೊತೆಗೆ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಹಂಚಿಕೆ.
- ಹೆಚ್ಚು ಪ್ರಮಾಣದ ಮನೆ ಹಾನಿ (ಶೇ 50% ಕ್ಕಿಂತ ಮೇಲ್ಪಟ್ಟು ಆಗೂ ಶೇ 75% ಕ್ಕಿಂತ ಕಡಿಮೆ), ಮನೆಯ ಗೋಡೆಗಳ ಕುಸಿತ ಹಾಗೂ ಮೇಲ್ಚಾವಣಿ ಹಾನಿಗೆ 50,000 ರೂ. ಪರಿಹಾರ.
- ಅತೀ ಸಣ್ಣ ಪ್ರಮಾಣದ ಹಾನಿ (ಶೇ15% ಕ್ಕಿಂತ ಮೇಲ್ಪಟ್ಟು ಹಾಗೂ ಶೇ 20% ಕ್ಕಿಂತ ಕಡಿಮೆ), ಮನೆಯ ಮೇಲ್ಛಾವಣಿಯ ಹಂಚು/ಶೀಟುಗಳ, ಬಾಗಿಲು ಮತ್ತು ಕಿಟಕಿಗಳ ಹಾನಿ ಹಾಗೂ ಇನ್ನಿತರ ಸಣ್ಣ ಪುಟ್ಟ ಹಾನಿಗೆ- ರೂ 6,500.
- ಮಧ್ಯಮ ಪ್ರಮಾಣ ಮನೆ ಹಾನಿ (ಶೇ 20%ಕ್ಕಿಂತ ಮೇಲ್ಪಟ್ಟು ಹಾಗೂ ಶೇ 50% ಕ್ಕಿಂತ ಕಡಿಮೆ), ಮನೆಯ ಗೋಡೆಗಳಲ್ಲಿ ಬಿರುಕು/ಸಣ್ಣ ಪ್ರಮಾಣದ ಕುಸಿತಕ್ಕೆ ರೂ 25,000ರೂ.