ಶಾಂತಾಯಿ ವೃದ್ಧಾಶ್ರಮಕ್ಕೆ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ ಭೇಟಿ
ಮರಾಠಾ ಲೈಟ್ ಇನಫೆಂಟ್ರಿ ರೆಜಿಮೆಂಟಲ್ ಸೆಂಟರ್ನ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ ಅವರು ತಮ್ಮ ಕುಟುಂಬ ಮತ್ತು ಸೈನಿಕರೊಂದಿಗೆ ಇಂದು ಶಾಂತಾಯಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು.
ವೃದ್ಧಾಶ್ರಮದ ಅಜ್ಜಿಯರು ಬ್ರಿಗೇಡಿಯರ್ ಮುಖರ್ಜಿಯವರನ್ನು ಸಾಂಪ್ರದಾಯಿಕ ಆರತಿಯೊಂದಿಗೆ ಸ್ವಾಗತಿಸಿದರು. ವೃದ್ಧಾಶ್ರಮದ ಹಸಿರು, ಸ್ವಚ್ಛ ಪರಿಸರ ಮತ್ತು ಸಂತೋಷದ ವಾತಾವರಣವನ್ನು ನೋಡಿ ಅವರು ತುಂಬಾ ಸಂತೋಷಪಟ್ಟರು. ಜೀವನ ಮತ್ತು ಸಂತೋಷದಿಂದ ತುಂಬಿರುವ ಇಂತಹ ವೃದ್ಧಾಶ್ರಮವನ್ನು ಹಿಂದೆಂದೂ ನೋಡಿಲ್ಲವೆಂದು ಪ್ರಶಂಸಿಸಿದರು. ಅಲ್ಲದೇ ಶಾಂತಾಯಿ ವೃದ್ಧಾಶ್ರಮದ ಅಜ್ಜ ಅಜ್ಜಿಯರನ್ನು ಎಂಎಲ್ಐಆರ್ಸಿಗೆ ಭೇಟಿ ನೀಡಲು ಆಹ್ವಾನಿಸಿ ಸೈನಿಕರನ್ನು ಆಶೀರ್ವದಿಸುವುದಲ್ಲದೆ,
ಕೇಂದ್ರದಲ್ಲಿ ಅಜ್ಜ ಅಜ್ಜಿಯರಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲು ಬಯಸುವುದಾಗಿಯೂ ಅವರು ಹೇಳಿದರು. ವೃದ್ಧರನ್ನು ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುತ್ತಿರುವ ಮಾಜಿ ಮೇಯರ್ ವಿಜಯ್ ಮೋರೆ ಮತ್ತು ಅವರ ಕುಟುಂಬದ ಕಾರ್ಯವನ್ನು ಬ್ರಿಗೇಡಿಯರ್ ಮುಖರ್ಜಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ, ಅಲನ್ ವಿಜಯ್ ಮೋರೆ ಮತ್ತು ವಿನಾಯಕ್ ಪಾಟೀಲ್ ಅವರು ಬ್ರಿಗೇಡಿಯರ್ ಮುಖರ್ಜಿ ಅವರಿಗೆ ಅಶೋಕ ಸ್ತಂಭ, ವಿಶೇಷ ಶಾಂತಿ ಸ್ಮರಣಿಕೆ ಮತ್ತು ಪುಸ್ತಕವನ್ನು ನೀಡಿ ಸನ್ಮಾನಿಸಿದರು.
ಹಿರಿಯ ಸೇನಾ ಅಧಿಕಾರಿಗಳು, ಕರ್ನಲ್ಗಳು, ಕೈಗಾರಿಕೋದ್ಯಮಿಗಳಾದ ದಿಲೀಪ್ ಚಿಟ್ನಿಸ್, ಸಿದ್ಧಾರ್ಥ್ ಹುಂದರೆ, ಪರಾಗ್ ಚಿಟ್ನಿಸ್, ಮಾರಿಯಾ ಮೋರೆ, ಸಂತೋಷ್ ಮಮದಾಪುರ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.