Breaking News

“ಬಿಜೆಪಿಯವರಿಗೆ ಸರ್ಕಾರ ಮಾಡುವ ಉಸಾಬರಿ ಏಕೆ ಬೇಕಿತ್ತು:ಬಸವರಾಜ ಹೊರಟ್ಟಿ

Spread the love

ಬೆಂಗಳೂರು,ಡಿ.10- ರಾಜ್ಯದಲ್ಲಿ ಬೀದಿ ದೀಪಗಳು ಹಗಲಿನ ವೇಳೆಯೂ ಉರಿಯುತ್ತಿರುತ್ತವೆ. ವಿಧಾನಸೌಧ, ವಿಕಾಸಸೌಧದ ಕಚೇರಿಗಳಲ್ಲಿ ವಿದ್ಯುತ್ ಉರಿಯುತ್ತಲೇ ಇರುತ್ತದೆ. ಇಂತಹ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎಂದು ಜೆಡಿಎಸ್‍ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮನವಿ ಮಾಡಿದರು.

ವಿಧಾನ ಪರಿಷತ್‍ನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಿಮ್ಮ ಪಾಡಿಗೆ ನೀವು 105 ಮಂದಿ ಇಟ್ಟುಕೊಂಡು ಪ್ರತಿಪಕ್ಷದಲ್ಲಿ ಕುಳಿತಿದ್ದರೆ ಸಾಕಿತ್ತು. ಸರ್ಕಾರ ಮಾಡುವ ಉಸಾಬರಿ ಯಾಕೆ ಬೇಕಿತ್ತು. ಸರ್ಕಾರ ರಚನೆ ಮಾಡಿದ ಮೇಲೆ ಜಾತಿಗೊಂದು ನಿಗಮ ಮಾಡಿದ್ದು ಯಾಕೆ, ನಿಗಮ ಮಂಡಳಿಗಳ ನೇಮಕಾತಿ ಯಾಕೆ ಬೇಕಿತ್ತು. ರಾಜ್ಯದಲ್ಲಿ ಆರ್ಥಿಕ ದುಸ್ಥಿತಿ ಇರುವಾಗ ಇದ್ದೇಲ್ಲಾ ಬೇಕಿತ್ತಾ ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ